ದೇವಂದಪಡ್ದ್ಪು ಶ್ರೀ ಮಹಾವಿಷ್ಣು ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಇತ್ತೀಚೆಗೆ ನಡೆಯಿತು
ಜಾತ್ರೋತ್ಸವದ ಪೂರ್ವಭಾವಿಯಾಗಿ ಸಂಧ್ಯಾ ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಳನೇ ದಿವಸದ ಸಂಧ್ಯಾ ಭಜನೆಯನ್ನು ಮುಂಬಯಿ ಉದ್ಯಮಿ ಬಾಸ್ಕರ ಪೂಜಾರಿ ದೊಡುಗುರಿ, ಕನಿಲ ಭಗವತಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ರಾದ ಗಣೇಶ್ ಪಾವೂರು , ಶ್ರೀಮತಿ ವಿದ್ಯಾ ಹರೀಶ್ ಸುವರ್ಣ ಮುಡಿಮಾರ್, ಆನಂದ ಬಲ್ಲೂರು, ಶ್ರೀಮತಿ ದೀಪ ರಂಜನ್ ತಲಪಾಡಿ,ಕೋರಿಮುಗೇರ್ ನವೀನ್ ಕುಮಾರ್ ದಂಪತಿ ಯರು, ದೀಪ ಬೆಳಗಿಸಿ ಉದ್ಘಾಟಿಸಿದರು.
ಭಜನಾ ಸಂಕೀರ್ತನೆಯಲ್ಲಿ ನಾಗಮೂಲ ಭಜನಾ ಮಂಡಳಿ ಅಡ್ಕ, ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ದೇವಿಪುರ ತಲಪಾಡಿ ಇವರು ಸಹಕರಿಸಿದ್ದರು.