ಹಿರಿಯ ಚೇತನ ಇಂದಿರಾ ರೈ ಮಾಯಿಪ್ಪಾಡಿಗುತ್ತು ನಿಧನ: ಕಂಬನಿ ಮಿಡಿದ ಬಂಧುಮಿತ್ರರು
ಮಂಜೇಶ್ವರ : ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ, ಕಾಸರಗೋಡಿನ ಹಿರಿಯ ವ್ಯಕ್ತಿತ್ವ, ಮಾಜಿ ಸಂಸದ ಎಂ. ರಾಮಣ್ಣ ರೈ ಅವರ ಸಹೋದರಿ ಹಾಗೂ ಕುಂದ್ಲಾಜೆ ಪಂಚಾಯಿತಿಯ ಮಾಜಿ ಸದಸ್ಯೆ ಇಂದಿರಾ ರೈ ಮಾಯಿಪ್ಪಾಡಿಗುತ್ತು ಅವರು ಇಂದು ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದ ಕಾರಣದಿಂದ ದೈವಾಧೀನರಾಗಿದ್ದಾರೆ. ಪುತ್ರಕಳ ದಿ. ರಾಘವ ರೈ ಅವರ ಧರ್ಮಪತ್ನಿಯಾಗಿದ್ದ ಇಂದಿರಾ ರೈ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು.ಮೃತರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಪುತ್ರರಾದ ಕೂಡ್ಲು…
