“ಚಿನ್ನ ಖರೀದಿ ಮಾಡಬೇಡಿ” ಹೇಳಿಕೆ ಬಾಲಿಶತನದ್ದು: ಪ್ರಧಾನಿ ವಿರುದ್ಧ ಹರೀಶ್ ಕುಮಾರ್ ವಾಗ್ದಾಳಿ
ಮಂಗಳೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಕರೆ ನೀಡಿರುವುದು ನಾಚಿಕೆಗೇಡು. ಇದು ಕುಣಿಯಲಾಗದವ ಅಂಗಣ ಡೊಂಕು ಹೇಳಿದಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ಗಳ ದರ 993ರೂ. ಏರಿಕೆ ಮಾಡಲಾಗಿದೆ. ದಿನಬಳಕೆ ವಸ್ತುಗಳು ದರ ಗಗನಕ್ಕೇರಿದೆ. ಒಂದೆಡೆ ಆತ್ಮ ನಿರ್ಭರ್ ಭಾರತ್, ವಾಹನ ಕೈಗಾರಿಕೆ, ಉದ್ಯಮ ವಲಯಕ್ಕೆ ಪ್ರೋತ್ಸಾಹಿಸಿ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಇನ್ನೊಂದೆಡೆ…
