ಶಬರಿಮಲೆ ಲೂಟಿ ಮಾಡಿದ ಪಕ್ಷಕ್ಕೆ ವೋಟ್ ನೀಡಬೇಡಿ -ಕಿಶೋರ್ ಕುಮಾರ್

ಮಿಯಪದವು : ಕೇರಳ ದಲ್ಲಿ ಎಡರಂಗ ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಪಕ್ಷಗಳಿಗೆ ಪಕ್ಷ ತತ್ವ ಸಿದ್ದಂತಗಳಿಲ್ಲ ಅವರದ್ದು ಅಧಿಕಾರಕಾಗಿ ಅವಕಾಶ ರಾಜಕಾರಣ. ಸ್ಥಳೀಯಡಳಿತ ಚುನಾವಣೆ ಯಲ್ಲಿ ಗ್ರಾಮ ಗ್ರಾಮಗಲ್ಲಿ ಬಿಜೆಪಿ ಯನ್ನು ಗೆಲ್ಲಿಸಿ ಆಡಳಿತ ಬಿಜೆಪಿ ಗೆ ನೀಡಬೇಕು.ಶಬರಿಮಲೆ ಯಲ್ಲಿ ಲೂಟಿ ಮಾಡಿ ಜೈಲು ಸೇರಿರುವ ಎಡರಂಗಕ್ಕೆ ಅಸ್ತಿಕ ಬಂಧುಗಳು ವೋಟ್ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿಜೆಪಿ ನೇತಾರ ಕಿಶೋರ್ ಕುಮಾರ್ ಹೇಳಿದರು.ಮೀoಜ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆ…

Read More

ಖಾಸಗಿ ಬಸ್ಸಿನಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತಿದ್ದ 67,50000 ಲಕ್ಷ ಹವಾಲ ಹಣ -ಮಂಜೇಶ್ವರ ಪೋಲೀಸರ ವಶ

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆ ಹಾಗೂ ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್ ಡ್ರೈವ್ ನಲ್ಲಿ ನಡೆದ ವಾಹನ ತಪಾಸಣೆಯ ಭಾಗವಾಗಿ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ತಲಪಾಡಿ ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತಿದ್ದ 67,50000 ಲಕ್ಷ ಹವಾಲ ಹಣ ವಶ ಪಡಿಸಲಾಗಿದೆ. ಈ ಸಂಬಂಧ ಕಣ್ಣೂರು ತಳಿಪರಂಬ ನಿವಾಸಿ ಸಮೀರ್ ಪಿ ಎಂಬಾತನನ್ನು ವಶಕ್ಕೆ ತೆಗೆಯಲಾಗಿದೆ.ಬಳಿಕ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Read More

ಬಿಸಿಯೂಟ ನೌಕರರ ಅನಿರ್ಧಷ್ಟಾವದಿ ಮುಷ್ಕರ 2ನೇ ದಿನಕ್ಕೆ

ಮಾತೆ ಮಾತೆ ಎನ್ನುತ್ತಾ ಗೋವನ್ನು ಕಡಿದು ಗೋಮಾಂಸ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಸಿಬ್ಬಂದಿಯರನ್ನೂ ಮಾತೆ ಮಾತೆ ಎನ್ನುತ್ತಾ ಸಂಬಳ ನೀಡದೆ ನಮ್ಮ ದೇಹದಲ್ಲಿ ರಕ್ತ‌ಮಾಂಸವೇ ಇಲ್ಲದಂತೆ ಮಾಡಿ ಅವರ ಬದುಕನ್ನೇ ನಾಶ ಮಾಡುತ್ತಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಅಧ್ಯಕ್ಷರಾದ ಬಿ.ಎಂ‌.ಭಟ್ ಹೇಳಿದರು. ಅವರು ಇಂದು ಮಂಗಳೂರು ಕ್ಲಾಕ್ ಟವರ್ ಎದುರು ಸ್ಕೀಮ್ ನೌಕರರಾದ ಬಿಸಿಯೂಟ ತಯಾರಕರ ಸಂಬಳ ಏರಿಕೆ ಕೆಲಸದ ಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಹೋರಾಟದ ಎರಡನೇ ದಿನದ ದರಣಿಯನ್ನು…

Read More

ಕರುವಿನ ಶಿರಚ್ಛೇದ ಮಾಡಿ ದೇಹವನ್ನು ಬಿಸಾಡಿ ಹೋದ ಗೋ ಹಂತಕರು

ಗದಗ:ದುಷ್ಕರ್ಮಿಗಳು ಕರುವಿನ ಶಿರಚ್ಛೇದ ಮಾಡಿದ ದೇಹವನ್ನು ಬಿಸಾಡಿ ಹೋಗಿರುವ ಆಘಾತಕಾರಿ ಘಟನೆ ಗದಗ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ.ಸಾರ್ವಜನಿಕರಲ್ಲಿ ಎರಡು ಬಗೆಯ ಚರ್ಚೆಗೆ ಕಾರಣವಾಗಿದೆ. ಅನಾಮಿಕ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕರುವಿನ ತಲೆ ಕತ್ತರಿಸಿ ಗೋಹತ್ಯೆ ಮಾಡಿ, ದೇಹವನ್ನು ಇಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆ ಇದೆ. ಕರುವಿನ ತಲೆಯನ್ನು ಚೀಲದಲ್ಲಿ ತುಂಬಿಕೊಂಡು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದು ವಾದದ ಪ್ರಕಾರ, ಇತ್ತೀಚೆಗೆ ಅವಳಿ ನಗರದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆಯೇ ಈ ಕೃತ್ಯ ಎಸಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ….

Read More

ಕಾಸರಗೋಡಿನಲ್ಲಿ ಅಭಿವೃದ್ಧಿ ವಂಚನೆಗೆ ಎಡ ಮತ್ತು ಬಲ ಪಕ್ಷ ಕಾರಣ – ನಳಿನ್ ಕುಮಾರ್ ಕಟೀಲ್

ಪೈವಳಿಕೆ: ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ಅಭಿವೃದ್ಧಿಯಲ್ಲಿ ಅಗಾಧ ಅಂತರವಿದೆ, ಒಂದೇ ರೀತಿಯ ಭೌಗೋಳಿಕತೆ ಮತ್ತು ಸಮಾನ ಸಂಪನ್ಮೂಲಗಳನ್ನು ಹೊಂದಿರುವ ಗಡಿ ಜಿಲ್ಲೆಗಳು, ಮತ್ತು ಕಾಸರಗೋಡು ಜಿಲ್ಲೆಯ ಹಿಂದುಳಿಯುವಿಕೆಗೆ ಎಡ ಮತ್ತು ಬಲ ರಂಗಗಳೇ ಕಾರಣ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಪೈವಳಿಕೆ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು. ಕೆ.ಟಿ. ಜಯಕೃಷ್ಣನ್ ಮಾಸ್ಟರ್ ಅವರಂತಹ ತ್ಯಾಗಗಳು ಯಾವಾಗಲೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತವೆ ಎಂದು ಅವರು ಹೇಳಿದರು. ಮಾಜಿ ಬಿಜೆಪಿ ಜಿಲ್ಲಾ…

Read More

ಅಕ್ರಮ‌ ದನ‌ ಸಾಗಾಟದ ಸುಳಿವು ನೀಡಿದ ಕೆಟ್ಟು ಹೋದ ಕಾರು!

ಪುತ್ತೂರು: ಕಾರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಿದ ಆರೋಪದಡಿಯಲ್ಲಿ ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ‌ನಡೆದಿದೆ. ಬಂಧಿತರನ್ನು‌ ಆಶಿಕ್ ಪಾಷಾ ಹಾಗೂ ಅಬ್ದುಲ್‌ ಲತೀಫ್ ಎಂದು ಗುರುತಿಸಲಾಗಿದೆ. ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುವ ವೇಳೆ ಈ ವಾಹನ ರಸ್ತೆಯಲ್ಲಿ ಕೆಟ್ಟುಹೋಗಿತ್ತು. ಹೀಗಾಗಿ ವಾಹನದಲ್ಲಿದ್ದ ಗೋವುಗಳನ್ನು ಪುತ್ತೂರು, ನರಿಮೊಗರು ಎಂಬಲ್ಲಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದು, ಅವುಗಳನ್ನು ದೂರುದಾರರು ಸ್ಥಳೀಯರ ಸಹಕಾರದಿಂದ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ್ದರು. ಗೋವುಗಳನ್ನು ಯಾರೋ ಕಳ್ಳರು ಕದ್ದು ತಂದಿರಬಹುದೆಂದು ಸಂಶಯವಿದ್ದು, ಕೃತ್ಯವೆಸಗಿದ…

Read More

ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ , ಆಟೋ ಚಾಲಕನಿಗೆ ಗಂಭೀರ ಗಾಯ

ಉಡುಪಿ: ಆಟೋ ರಿಕ್ಷಾ ಮತ್ತು ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಾಪು ತಾಲೂಕಿನ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಉಚ್ಚಿಲ ನಿವಾಸಿ ರಫೀಕ್ ಗಾಯಗೊಂಡ ಚಾಲಕ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಉಡುಪಿಯ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ…

Read More

ಅಯ್ಯಪ್ಪ ಭಕ್ತವೃಂದ ಸಮಿತಿ ರಚನೆ

ವರ್ಕಾಡಿ:ತಾರೀಕು ೦3/೦1/2೦26ರಂದು ಶನಿವಾರ ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದ ಪಡ್ಪು ಇದರ ವಠಾರದಲ್ಲಿ ಅಯ್ಯಪ್ಪ ಭಕ್ತವೃಂದ ದೇವಂದ ಪಡ್ಪು ಇದರ ಆಶ್ರಯದಲ್ಲಿ ಅಯ್ಯಪ್ಪ ದೀಪೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಅಯ್ಯಪ್ಪ ಭಕ್ತಾಭಿಮಾನಿಗಳು ತೀರ್ಮಾನಿಸಿರುತ್ತಾರೆ. ಇದರ ಪೂರ್ವಭಾವಿಯಾಗಿ ಅಯ್ಯಪ್ಪ ಭಕ್ತವೃಂದ ಸಮಿತಿ ಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು ,ಗೌರವ ಸಲಹೆಗಾರರಾಗಿ ಮೋಹನದಾಸ್ ಭಂಡಾರಿ ನೆತ್ತಿಲ ಬಾಳಿಕೆ ,ಸಂಜೀವ ಶೆಟ್ಟಿ ಮಾಡ, ಮೋಹನ್ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಧನಂಜಯ ಪೂಜಾರಿ ನೆತ್ತಿಲಪದವು, ಜಗದೀಶ್ ಸುಳ್ಯ, ಉಪಾಧ್ಯಕ್ಷರಾಗಿ ಮಾಧವ…

Read More

ಸಹಸ್ರಾರು ಕಣ್ಣುಗಳು ಕಣ್ತುಂಬಿಕೊಂಡ ಚಾಮುಂಡಿಕುನ್ನು ಕಳಿಯಾಟ ಮಹೋತ್ಸವ 2025 …!

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದಲ್ಲಿರುವ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಸಂಪನ್ನ ಗೊಂಡಿತ್ತು. ಕೊನೆಯ ದಿನವಾದ ನಿನ್ನೆ ಪುಮಾರುತನ್, ರಕ್ತ ಚಾಮುಂಡಿ, ಭಗವತಿ, ವಿಷ್ಣು ಮೂರ್ತಿ, ಧೂಮಾವತಿ, ಗುಳಿಗ ಎಂಬೀ ದೈವಗಳು ಭಕ್ತರಿಗೆ ದರ್ಶನವನ್ನು ನೀಡಿತ್ತು. ಐತಿಹಾಸಿಕ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಕ್ಕೂ ಅಧಿಕ ಸಂಖ್ಯೆಯ ರಾಜ್ಯ ಅಂತರರಾಜ್ಯದ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿದ್ದರು. ಭಕ್ತರಿಗೆ ದರ್ಶನವನ್ನು ನೀಡಿ ತನು ಮನವನ್ನು ಭಕ್ತಿಯ ಸಾಕ್ಷಾತ್ಕಾರದತ್ತ ಕೊಂಡು ಹೋದ ದಿವ್ಯ ತೇಜಸ್ಸಿನ…

Read More

ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಪ್ರಥಮ ವಾರ್ಷಿಕ – ಮಧೂರಿನಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ಸುಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಶಪ್ರೇಮ, ದೇವಭಕ್ತಿ ,ಸನಾತನ ಧರ್ಮ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಇದರ ಪ್ರಥಮ ವಾರ್ಷಿಕವನ್ನು ಭಕ್ತಿಪೂರ್ವಕವಾಗಿ ಶ್ರದ್ಧ ಭಕ್ತಿಯಿಂದ ಹರಿನಾಮ ಸಂಕೀರ್ತನೆಯೊಂದಿಗೆ ಆಚರಿಸಲಾಯಿತು.ತಂಡದ ಸ್ಥಾಪಕರಾದ ಧಾರ್ಮಿಕ ,ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ರವರ ಮುಂದಾಳುತ್ವದಲ್ಲಿ ಹಾಗು ತಂಡದ ಪೋಷಕರಾದ ಶ್ರೀ ಪ್ರಶಾಂತ್ ಭಟ್ ಚಕ್ರತೀರ್ಥ,ಖ್ಯಾತ ವಕೀಲರಾದ ಶ್ರೀ ರಾಮ್ ಪ್ರಸಾದ್ ಮಂಗಳೂರು,ಶ್ರೀ ಯತೀಶ್ ಕುಂಜತ್ತೂರು ,ಶ್ರೀ ಶ್ರೀಕಾಂತ್ ಮುಂಬೈ ಇವರ ಸಹಕಾರದೊಂದಿಗೆ…

Read More
error: Content is protected !!