ಫೆ. 22 ರಂದು ಜಪ್ಪುಗುಡ್ಡೆಚಾವಡಿ ಗೃಹ ಪ್ರವೇಶ ಮತ್ತು ಪಂಚದಿನಗಳ ಧಾರ್ಮಿಕ ಉತ್ಸವ … !
ಮಂಗಳೂರು ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಜಪ್ಪುಗುಡ್ಡೆಚಾವಡಿಯ ಪುನರ್ನವೀಕರಣಗೊಂಡ ಮನೆಯ ಪ್ರವೇಶೋತ್ಸವ ಮತ್ತು ಧರ್ಮನೇಮವು ಫೆಬ್ರವರಿ 20 ರಿಂದ 25ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು. ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಿಯಾಲಗುತ್ತು, ಜಪ್ಪುಗುಡ್ಡೆಗುತ್ತು ಮತ್ತು ಬಡಿಲಗುತ್ತು ಮನೆತನಗಳು ತುಳುನಾಡಿನ ಕಟ್ಟು ಕಟ್ಟಳೆಗಳನ್ನು ಮತ್ತು ದೈವದೇವರ ಆರಾಧನಾ ಕ್ಷೇತ್ರಗಳ ಸೇವೆಗಳನ್ನು ಸತ್ಯ-ಧರ್ಮದ ಹಾದಿಯಲ್ಲಿ ನಡೆಸಿಕೊಂಡು ಬರುತ್ತಿರುವ ಜವಾಬ್ದಾರಿಯುತ ಮನೆತನಗಳಾಗಿವೆ ಎಂದು ಹೇಳಿದರು….
