ಚಿತ್ತಾರಿ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ವಾರ್ಷಿಕ ಒತ್ತೆಕೋಲ..!
ಕಾಸರಗೋಡು ಜಿಲ್ಲೆಯ ಚಿತ್ತಾರಿ ಗ್ರಾಮದಲ್ಲಿರುವ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ಶಿವ ರಾತ್ರಿಯ ದಿನ ವಾರ್ಷಿಕ ಒತ್ತೆಕೋಲ ಸೇವೆಯು ನಡೆಯಿತು .ಸಾಮಾನ್ಯವಾಗಿ ಭೂತಾರಾಧನೆಯಲ್ಲಿ ಉಳಿದ ತೆಯ್ಯಮ್ ಗಳಿಗಿಂತ ಭಿನ್ನವಾಗಿ ಈ ಒತ್ತೆಕೋಲ ಆಚರಣೆ ನಡಿಯುವುದು ವಾಡಿಕೆಯಾಗಿದೆ. ಒತ್ತೆಕೋಲದಲ್ಲಿ ಕಟ್ಟುವ ಶ್ರೀ ವಿಷ್ಣು ಮೂರ್ತಿ ದೈವವು ಅಗ್ನಿ ಪ್ರವೇಶವನ್ನು ಮಾಡುವ ಸಂದರ್ಭವನ್ನು ಕಣ್ತುಂಬಿಕೊಳ್ಳಲ್ಲು ಭಕ್ತ ಸಮೂಹವೇ ಹರಿದುಬರುತ್ತದೆ. ಅಗ್ನಿ ಪ್ರವೇಶವನ್ನು ಮಾಡುವ ಸಮಯದಲ್ಲಿ ದೈವದ ಮುಖದಲ್ಲಿ ಆವೇಶ , ಕಣ್ಣಲ್ಲಿ ರೋಷಾಗ್ನಿಯ ಉಕ್ಕಿಹರಿದು ಅಧರ್ಮವನ್ನು ನಾಶ ಮಾಡುತ್ತೆ, ರೋಗ…
