ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ …. !
ಮಂಗಳೂರು:ನಗರದ ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿಯು ಕೊಟ್ಟಾರಚೌಕಿ ಜಂಕ್ಷನ್ ಬಳಿ ಇಂದು ಸ್ಥಳೀಯ ಜನಹಿತರಕ್ಷಣಾ ಸಮಿತಿಯ ವತಿಯಿಂದ ನಡೆಯಿತು . ಜನಹಿತರಕ್ಷಣಾ ಸಮಿತಿಯ ಪ್ರಮುಖ ಹೋರಾಟಗಾರದ ವಿಜಯ್ ಕುಮಾರ್ ಸಮಿತಿಯ ಬೇಡಿಕೆಯನ್ನು ಮುಂದಿಟ್ಟು , ಮಾಲೆಮಾರ್ ಚೌಕಿ ಸರ್ವಿಸ್ ರಸ್ತೆ ನಿರ್ಮಾಣ , ಮಾಲೆಮಾರ್ – ಕುಂಟಿಕಾನ ಸರ್ವಿಸ್ ರಸ್ತೆ ನಿರ್ಮಾಣ, ಚೌಕಿಯಿಂದ ಮಾಲಾಡಿ ರಸ್ತೆ ಕಡೆ ರಸ್ತೆಯ ತಿರುವು ದಿಕ್ಕನ್ನು ಸರಾಗಪಡಿಸುವ ಬಗ್ಗೆ, ಕೊಟ್ಟಾರ ಚೌಕಿ…