ಇನ್ನು ಮುಂದೆ ಚರ್ಚೆಗಾಗಿ ಜೆ.ಪಿ. ನಡ್ಡಾ ಅವರ ಮನೆ ಅಥವಾ ಕಚೇರಿಗೆ ಹೋಗುವುದಿಲ್ಲ’; ತಟಸ್ಥ ಸ್ಥಳದಲ್ಲಷ್ಟೇ ಮಾತುಕತೆ: ಸೌರವ್ ದಾಸ್
ದೆಹಲಿ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಪ್ರತಿಭಟನಾ ಸ್ಥಳಕ್ಕೆ ಸಾವಿರಾರು ಜನರು ಹರಿದು ಬಂದರು. ಕೇಂದ್ರ ಸಚಿವರ ಮನೆ ಅಥವಾ ಕಚೇರಿಗೆ ಮಾತುಕತೆಗೆ ಹೋಗುವುದಿಲ್ಲ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ. ಮಾತುಕತೆಗಾಗಿ ಕಾನ್ಸ್ಟಿಟ್ಯೂಷನ್ ಕ್ಲಬ್ ಅನ್ನು ಸ್ಥಳವಾಗಿ ನಾವು ಸೂಚಿಸಿದ್ದೇವೆ. ಆದರೆ ಅದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿಲ್ಲ. ತಟಸ್ಥ ಸ್ಥಳದಲ್ಲಷ್ಟೇ ಮಾತುಕತೆ ನಡೆಯಬೇಕು. ಜೆ.ಪಿ. ನಡ್ಡಾ ಅವರ ಮನೆಗೆ ಚರ್ಚೆಗೆ ಹೋಗುವುದಿಲ್ಲ. ಕಳೆದ ಬಾರಿ ಮಾತುಕತೆಗೆ ಹೋದಾಗ ಪೊಲೀಸರು ಪ್ರತಿಭಟನಾಕಾರರ…
