ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಇತ್ತೀ ಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಬಂದ್ಯೋಡ್ ಸಮುದಾಯ ಭವನದಲ್ಲಿ ನಿನ್ನೆ ಜರಗಿತು.ಕಾರ್ಯಕ್ರಮ ವನ್ನು ದೇವಸ್ವಬೋರ್ಡ್ ಸದಸ್ಯ ಎ ಕೆ ಶಂಕರ ಆದೂರ್ ಉದ್ಘಾಟಿಸಿದರು.
ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ ಶಂಕರ.ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಅಜಕೊಡು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ನಾಗೇಶ್ ಮಂಜೇಶ್ವರ.ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಕಾಸರಗೋಡು ಅಗ್ನಿಶಾಮಕದಳ ಸಿಬ್ಬಂದಿ ಹರ್ಷ ಕನಿಯಾಲ ಹಾಗೂ ಇತರ ಪಂಚಾಯತ್ ಸದಸ್ಯರಾದ ಚೈತ್ರ ಬಸ್ತಿ ಕೊರಗಪ್ಪ ಬೆಳ್ಳಿಗೆ ಹರೀಶ್ ಕಿಳಿಂಗಾರ್ ಕುಮಾರಿ ಪ್ರಜ್ಞಾ ಮುಳಿಪರಂಬ ಕೇಶವ ಪುತ್ತಿಗೆ ರಮೇಶ್ ಮುದಲಪಾರ ಕೃಷ್ಣ ಪ್ಪ ಬಜಕುಡ್ಲು ನಾರಾಯಣ ವರ್ಕಾಡಿ ಚಂದ್ರ ಪೆರಿಯಡ್ಕ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.