ದೆಹಲಿ ಕರ್ನಾಟಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆರ್. ರೇಣುಕುಮಾರ್,ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕುಂದಾಪುರ ಆಯ್ಕೆ
ದೇಶದ ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಆರ್. ರೇಣುಕುಮಾರ್, ಉಪಾಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ,ಶೋಭಾ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕುಂದಾಪುರ ಬೈಂದೂರು, ಖಜಾಂಚಿಯಾಗಿ ಎಂ.ಆಶಾಲತಾ,ಜಂಟಿ ಕಾರ್ಯದರ್ಶಿಯಾಗಿ ಜೆ. ಸಂತೋಷ, ಬಿ. ಎಸ್.ಅಶ್ವಿನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪೂಜಾ ಪಿ.ರಾವ್, ಎಂ.ಶಿವಪ್ಪ, ಡಾ. ವೆಂಕಟಾಚಲ ಜಿ.ಹೆಗಡೆ, ಡಾ. ಎಂ. ಎಸ್. ಶಶಿಕುಮಾರ್, ಬಿ. ನಾರಾಯಣ, ಎಂ. ಕೃಷ್ಣಪ್ಪ, ಬಿ. ಕೆ. ಜಯಶ್ರೀ, ಬಸವರಾಜು, ಶುಭ ದೇವಿ ಪ್ರಸಾದ್ ಇವರು ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.


ದೆಹಲಿ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕಾಸರಗೋಡು ಕನ್ನಡ ಗ್ರಾಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ- 2026- ಕೇರಳ- ಕರ್ನಾಟಕ ಉತ್ಸವ ಸಮಿತಿ, ಕೇರಳ – ಕರ್ನಾಟಕ ಭವನ ಸಮಿತಿ,ಕಾಸರಗೋಡು – ಗೋ – ಕುಟೀರ ಸಮಿತಿ ಇದರ ಅಧ್ಯಕ್ಷ ಶಿವರಾಮ ಕಾಸರಗೋಡು ಅಭಿನಂದನೆ ಸಲ್ಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!