ಸುಲ್ತಾನ್ ಬತ್ತೇರಿ: ಆಟೋರಿಕ್ಷಾ ನಿಲ್ದಾಣಕ್ಕೆ ಕುಡಿಯುವ ನೀರಿನ ಸೌಲಭ್ಯ

ಪಲ್ಗುಣಿ ನದಿ ತೀರದಲ್ಲಿರುವ ಇತಿಹಾಸ ಪ್ರಸಿದ್ಧ ಸುಲ್ತಾನ್ ಬತ್ತೇರಿ ಪ್ರದೇಶದ ಆಟೋರಿಕ್ಷಾ ನಿಲ್ದಾಣಕ್ಕೆ ನೇತ್ರಾವತಿ ಲೈನ್ಸ್ ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಅವರು, ಈ ಸೇವೆಯ ಮೂಲಕ ನದಿ ತೀರದಲ್ಲಿಯೂ ನೇತ್ರಾವತಿ ಮತ್ತು ಪಲ್ಗುಣಿಯ ಸಂಗಮದ ಸಾಂಕೇತಿಕ ಅರ್ಥವನ್ನು ನೆನಪಿಸಲಾಗಿದೆ ಎಂದು ಅಭಿಪ್ರಾಯಪಟ್ಟರು. ರಿಕ್ಷಾ ಚಾಲಕರು ಸಮಾಜಕ್ಕೆ ನೀಡುತ್ತಿರುವ ಸೇವೆ ಅನನ್ಯವಾದದ್ದು ಎಂದು ಅವರು ಹೇಳಿದರು.

ನೇತ್ರಾವತಿ ಕ್ಲಬ್ ಅಧ್ಯಕ್ಷ ವಿನಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಯೋಜನೆಯ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ರಾವ್, ಗವರ್ನರ್ ಸಂಯೋಜಕಿ ಜ್ಯೋತಿ ಎಸ್. ಶೆಟ್ಟಿ, ವಲಯ ಅಧ್ಯಕ್ಷೆ ನಿರ್ಮಲ ಪ್ರಮೋದ್, ಕಾರ್ಯದರ್ಶಿ ಗಾಯತ್ರಿ ಹೆಗಡೆ, ಕೋಶಾಧಿಕಾರಿ ಚಂಚಲಾಕ್ಷಿ ಭತ್ತೇರಿ, ರಿಕ್ಷಾ ನಿಲ್ದಾಣ ಸಂಘದ ಅಧ್ಯಕ್ಷ ಪ್ರಾಣೇಶ್ ಬಂಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ರಿಕ್ಷಾ ನಿಲ್ದಾಣದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!