ಮಂಜೇಶ್ವರದಲ್ಲಿ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನ

ಮಂಜೇಶ್ವರ: ಮಂಜೇಶ್ವರದ ಅಭಿವೃದ್ಧಿಯ ಹರಿಕಾರ, ತುಳುನಾಡಿನ ಕಮ್ಯುನಿಷ್ಟ್ ಚಳುವಳಿಯ ಅಗ್ರಗಣ್ಯ ನೇತಾರ ಹಾಗೂ ಮಂಜೇಶ್ವರದ ಮಾಜಿ ಶಾಸಕ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನವು ಮಂಜೇಶ್ವರದ ಥೋಮಸ್ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಜರಗಿತು.
​ಸಿಪಿಐ ಹಿರಿಯ ನಾಯಕ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,(Byt1) “ರಾಮಪ್ಪ ಮಾಸ್ಟರ್ ಅವರು ನಮ್ಮ ಸಂಘಟನಾ ಚಟುವಟಿಕೆಗಳಿಗೆ ನಿರಂತರವಾಗಿ ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಅವರ ಮಾರ್ಗದರ್ಶನದಂತೆಯೇ ನಾವು ಸಾಗುತ್ತಿದ್ದೆವು” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.


​ಅಧ್ಯಕ್ಷತೆ ವಹಿಸಿದ್ದ ಎಸ್. ರಾಮಚಂದ್ರರವರು ಮಾತನಾಡಿ ( Byt 2) “ರಾಮಪ್ಪ ಮಾಸ್ಟರ್ ಅವರ ಜೀವಿತಾವಧಿಯಲ್ಲಿ ಅವರ ಒಡನಾಡಿಯಾಗುವ ಸೌಭಾಗ್ಯ ನನಗೆ ದೊರೆತಿತ್ತು. ಮಂಜೇಶ್ವರದ ಜನತೆಯ ಮನಸ್ಸಿನಲ್ಲಿ ಅವರು ಎಂದಿಗೂ ಅಚ್ಚಳಿಯದ ಜನನಾಯಕನಾಗಿ ಉಳಿಯಲಿದ್ದಾರೆ” ಎಂದು ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಜಯರಾಂ ಬಳ್ಳಂಗುಡೇಲ್, ರಾಮಕೃಷ್ಣ ಕಡಂಬಾರ್, ಜಿಲ್ಲಾ ಮೋಟಾರ್ ಯೂನಿಯನ್ ಅಧ್ಯಕ್ಷ ಮುಸ್ತಫ ಕಡಂಬಾರ್, ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ., ಹರೀಶ್ ಕೆ.ಆರ್. ಹಾಗೂ ಗಂಗಾಧರ ಕೊಡ್ಡೆ ಉಪಸ್ಥಿತರಿದ್ದರು.
​ಕಾರ್ಯಕ್ರಮಕ್ಕೆ ಅಜಿತ್ ಲಾಲ್ ಬಾಗ್ ಸ್ವಾಗತ ಕೋರಿದರು ಮತ್ತು ಶ್ರೀಧರ್ ಆರ್.ಕೆ. ವಂದನಾರ್ಪಣೆ ಮಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!