ವಿಯೆಟ್ನಾಂ ಬೊಟ್ ದುರಂತ: ಮೃತಪಟ್ಟ ಕೇರಳದವರ ಮೃತದೇಹಗಳು ಇಂದು ಮುಂಬೈಗೆ ಆಗಮನ

ವಿಯೆಟ್ನಾಂನಲ್ಲಿ ಸಂಭವಿಸಿದ ಬೊಟ್ ದುರಂತದಲ್ಲಿ ಮೃತಪಟ್ಟ ಕೇರಳದವರ ಮೃತದೇಹಗಳನ್ನು ಇಂದು ಮುಂಬೈಗೆ ತರಲಾಗುತ್ತದೆ. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮುಂಬೈಗೆ ತಲುಪುವ ಮೃತದೇಹಗಳನ್ನು ನೊರ್ಕಾ (NORKA) ನೇತೃತ್ವದಲ್ಲಿ ಕೇರಳಕ್ಕೆ ಸಾಗಿಸಲಾಗುವುದು.ದುರಂತದಲ್ಲಿ ಮೃತಪಟ್ಟವರಲ್ಲಿ ಕೊಟ್ಟಾರಕ್ಕರ ಮೂಲದ ಎ.ಸಿ. ಥಾಮಸ್ ಹಾಗೂ ಅವರ ಪತ್ನಿ ಲೌನಿ ಥಾಮಸ್ ಸೇರಿದಂತೆ ಒಟ್ಟು 15 ಭಾರತೀಯರು ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಹೊತ್ತ ವಿಮಾನ ಇಂದು ಸಂಜೆ 6 ಗಂಟೆಗೆ ವಿಯೆಟ್ನಾಂನಿಂದ ಹೊರಡಲಿದೆ. ರಾತ್ರಿ 9.35ಕ್ಕೆ ವಿಮಾನ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ವಿಯೆಟ್ನಾಂ ಏರ್‌ಲೈನ್ಸ್‌ನ VN 979 ವಿಮಾನದ ಮೂಲಕ ಮೃತದೇಹಗಳನ್ನು ಭಾರತಕ್ಕೆ ತರಲಾಗುತ್ತಿದೆ.

ಈ ಕುರಿತು ಎಲ್ಲಾ ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಮುಂಬೈಯಿಂದ ಮೃತದೇಹಗಳನ್ನು ಅವರವರ ಸ್ವಗ್ರಾಮಗಳಿಗೆ ಸಾಗಿಸಲಾಗುವುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!