ಕಾಸರಗೋಡು: ಕೆಎಸ್ಇಎಸ್ಎ ಮತ್ತು ಕೆಎಸ್ಇಒಎ ಕಾಸರಗೋಡು ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ, ಪಡನ್ನ ಸಿಎಪಿ ಟರ್ಫ್ನಲ್ಲಿ ಆಯೋಜಿಸಲಾಗಿದ್ದ “2026 ಫಿಫಾ ವರ್ಲ್ಡ್ ಕಪ್ ವಿತ್ ಕೇರಳ ಎಕ್ಸೈಸ್ – 7’s ಫುಟ್ಬಾಲ್ ಟೂರ್ನಮೆಂಟ್” ಯಶಸ್ವಿಯಾಗಿ ಸಂಪನ್ನಗೊಂಡಿತು.

ತೃಕ್ಕರಿಪುರ ಶಾಸಕ ಶ್ರೀ ಸಂದೀಪ್ ವಾರಿಯರ್ ಟೂರ್ನಮೆಂಟ್ ಉದ್ಘಾಟಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಫುಟ್ಬಾಲ್ ತಾರೆ ಮೊಹಮ್ಮದ್ ರಫಿ ಹಾಗೂ ಇತರ ಗಣ್ಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಫ್ರಾನ್ಸ್, ಪೋರ್ಚುಗಲ್, ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್ನಲ್ಲಿ, ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು, ಪೋರ್ಚುಗಲ್ ರನ್ನರ್-ಅಪ್ ಪ್ರಶಸ್ತಿ ಪಡೆಯಿತು.


ಸುರ್ಜಿತ್ (ಟಾಪ್ ಸ್ಕೋರರ್), ಅನೂಪ್ (ಗೋಲ್ಕೀಪರ್), ಸುರೇಶ್ ಪಿ. (ಡಿಫೆಂಡರ್) ಮತ್ತು ಅಖಿಲ್ (ಬೆಸ್ಟ್ ಪ್ಲೇಯರ್) ವೈಯಕ್ತಿಕ ಪ್ರಶಸ್ತಿಗಳನ್ನು
ಪಡೆದುಕೊಂಡರು.ಸಮಾರೋಪ ಸಮಾರಂಭದಲ್ಲಿ ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಸಲೀಂಕುಮಾರ್ ದಾಸ್ ಮತ್ತು ಮಾನವ ಹಕ್ಕುಗಳ ವೇದಿಕೆಯ ಮುಸ್ತಕ್ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ರೀಡಾಕೂಟವು ಸಿಬ್ಬಂದಿಗಳ ನಡುವೆ ಸೌಹಾರ್ದತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.



