ಚೆರ್ಕಳ ಸಮೀಪ ನಾಪತ್ತೆಯಾಗಿದ್ದ 78 ವರ್ಷದ ವೃದ್ಧೆ ಬಾವಿಯಲ್ಲಿ ಶವವಾಗಿ ಪತ್ತೆ

​ಕಾಸರಗೋಡು : ಚೆರ್ಕಳ ಸಮೀಪದ ಪಾಡಿ ಬೆಳ್ಳೂರು ನಗರದಿಂದ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ದುರಂತ ಅಂತ್ಯ ಕಂಡಿದ್ದಾರೆ. ಇಮ್ರಾನ್ ವಳಪ್ಪಿನ ನಿವಾಸಿ ದಾಕ್ಷಾಯಿಣಿ ಅಮ್ಮ (78) ಎಂಬವರು ತಮ್ಮ ಕೊಠಡಿಯಲ್ಲಿ ಮಲಗಿದ್ದಾಗ ದಿಢೀರ್ ನಾಪತ್ತೆಯಾಗಿದ್ದರು. ಕುಟುಂಬಸ್ಥರು, ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಸುಪಾಸಿನ ಕೆರೆಗಳಲ್ಲಿ ತೀವ್ರ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

​ಬಳಿಕ ಪಕ್ಕದ ಅಡಿಕೆ ತೋಟದಲ್ಲಿದ್ದ ಆವರಣಗೋಡೆಯಿಲ್ಲದ ಬಾವಿಯಲ್ಲಿ ಹುಡುಕಾಡಿದಾಗ ಅವರ ಶವ ಪತ್ತೆಯಾಗಿದೆ. ಮಾಹಿತಿ ಅಂತು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

SHARE
Loading spinner

One thought on “ಚೆರ್ಕಳ ಸಮೀಪ ನಾಪತ್ತೆಯಾಗಿದ್ದ 78 ವರ್ಷದ ವೃದ್ಧೆ ಬಾವಿಯಲ್ಲಿ ಶವವಾಗಿ ಪತ್ತೆ

Leave a Reply

Your email address will not be published. Required fields are marked *

error: Content is protected !!