ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದೆ .ಸರಕಾರ , ಶಿಕ್ಷಣ ಇಲಾಖೆಯಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ . ೮೦ ಕ್ಕೂ ಅಧಿಕ ಶೇಕಡಾ ಕೆ ಪಿ ಎಸ್ ಮಾಡೆಲ್ ಶಾಲೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು .ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಮಕ್ಕಳಿಗೆ ಒಂದೇ ಸೂರಿನಡಿಗೆಯಲ್ಲಿ ಶಿಕ್ಷಣವನ್ನು ನೀಡಲು ಕೆ ಪಿ ಸ್ ಶಾಲೆಗಳು ಸಹಕಾರಿಯಾಗಿದೆ .ಈ ಬಾರಿ ಬಜೆಟ್ ನಲ್ಲಿ ೫೦೦ ಕೆ ಪಿ ಎಸ್ ಶಾಲೆಗಳನ್ನು ಘೋಷಣೆ ಮಾಡಲಾಗಿತ್ತು . ಆದರೆ ಇದೀಗ ೮೦೦ ಕೆ ಪಿ ಸ್ ಶಾಲೆಗಳನ್ನು ಕ್ಯಾಬಿನೆಟ್ ಅನುಮೋದನೆಯನ್ನು ನೀಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ . ಇದರಲ್ಲಿ ಹೆಚ್ಚಿನ ಮನ್ನಣೆಯನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿ ಆ ಭಾಗದಲ್ಲಿ ಅಕ್ಷರ ಜ್ಞಾನವನ್ನು ಪಸರಿಸಲಿದೆ ಎಂದರು .
ಶಾಲಾ ಮಟ್ಟದ ಪರೀಕ್ಷಾ ವಿಧಾನದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದ ಮೇಲೆ ಪರೀಕ್ಷೆಯಲ್ಲಿ ನಡೆಯುತ್ತಿದ ಅಕ್ರಮಗಳನ್ನು ಹತೋಟಿಗೆ ತರಲಾಗಿದೆ . ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಇದು ಕಂಡಿದೆ ಎಂದರು .ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಅಂತಿಮ ಪರೀಕ್ಷೆಯನ್ನು ೩ ಬಾರಿ ಮಾಡುವ ಪದ್ದತಿಯನ್ನು ಜಾರಿಗೆ ತರಲಾಗಿದೆ . ಪಾಸ್ ಆಗದ ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ಬಾರಿ ಪರೀಕ್ಷೆಯನ್ನು ಬರೆಯುತ್ತಾರೆ .ಈ ಬಾರಿ ಈ ರೀತಿಯ ದ್ವಿತೀಯ ಮತ್ತು ತೃತೀಯ ಬಾರಿ ಪರೀಕ್ಷೆಯನ್ನು ಬರೆದು ಎಸ್ ಎಸ್ ಎಲ್ ಸಿ ಯಲ್ಲಿ 1 ಲಕ್ಷದ 16 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದರೆ , ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 52 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆಯನ್ನು ಹೊಂದಿದ್ದಾರೆ . ಇದು ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ . ಈ ಭಾರಿ 13 ಸಾವಿರ ಸರಕಾರೀ ಶಾಲೆಗೆಗಳಿಗೆ ಹಾಗು 5500 ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಸರಕಾರ ಮೂಲದಿಂದ ನೇಮಕಾತಿಯನ್ನು ಶೀಘ್ರವೇ ಮಾಡಲಾಗುವುದೆಂದು ತಿಳಿಸಿದರು .
ಕರ್ನಾಟಕ ಭಾಗದಲ್ಲಿ ನಡೆಯುವ ಸಮೀಕ್ಷೆಯ ಬಗ್ಗೆ ಮಾತನಾಡಿ , ಸಮೀಕ್ಷೆಗೆ ಈ ಭಾಗದ ಕೆಲವು ರಾಜಕೀಯ ನಾಯಕರು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ . ಇದು ಖಂಡನೀಯವಾಗಿದೆ . ಈ ಸಮೀಕ್ಷೆಗೆ ಎಲ್ಲರೂ ಸಹಕರಿಸಬೇಕು .ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಮೀಕ್ಷೆಯಿಂದ ಸಿಗುವ ಸರಿಯಾದ ದತ್ತಾಂಶವು ತೆರಿಗೆಯ ಸಮರ್ಪಕ ಹಂಚಿಕೆಗೆ ಸಹಕಾರಿ ಆಗಲಿದೆ . ದಸರಾ ಸಂದರ್ಭದಲ್ಲಿ ಶಿಕ್ಷಕರಿಗೆ ರಜೆ ಇರುವುದರಿಂದ ಅವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ . ರಜೆ ಇಲ್ಲದ ಉಳಿದ ಸಂದರ್ಭದಲ್ಲಿ ಸಮೀಕ್ಷೆಗೆ ಅವರನ್ನು ಹಾಜರು ಪಡಿಸಿದ್ದರೆ ವಿದ್ಯಾರ್ಥಿಗಳ ಪಾಠಕ್ಕೆ ಅಡ್ಡಿ ಉಂಟಾಗುತ್ತಿತ್ತು . ಶಾಲೆಯ ಪುನರಾರಂಭದ ಬಗ್ಗೆ ಗೊಂದಲಿದ್ದವು ಆದರೆ ಸರಕಾರ ನಿಗದಿ ಪಡಿಸಿದ ದಿನಾಂಕದಂತೆ ಶಾಲೆ ಆರಂಭವಾಗಲಿದೆ ಎಂದು ವಿದ್ಯಾರ್ಥಿ ವಲಯಗಳಲ್ಲಿ ತಲೆ ತೋರಿದ್ದ ಅನುಮಾನವನ್ನು ದೂರ ಮಾಡಿದರು .
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ವಿಸ್ವಾಶ್ ಕುಮಾರ್ ದಾಸ್, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮುಖಂಡರಾದ ಪದ್ಮರಾಜ್.ಆರ್ ಪೂಜಾರಿ, ನೀರಜ್ ಚಂದ್ರಪಾಲ್, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.