ನಗರ ವ್ಯಾಪ್ತಿಯೊಳಗಿರುವ ವಿವಿಧ ರಸ್ತೆಗಳ ಸಮಸ್ಯೆಗೆ ಸಂಬಂಧಪಟ್ಟಂತೆ ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ

ನಗರ ವ್ಯಾಪ್ತಿಯೊಳಗಿರುವ ವಿವಿಧ ರಸ್ತೆಗಳ ಸಮಸ್ಯೆಗೆ ಸಂಬಂಧಪಟ್ಟಂತೆ ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಂಪ್ ವೆಲ್- ಉಜ್ಜೋಡಿ, ಜೆಪ್ಪು ಮಾರ್ಕೆಟ್ – ಲೀವೆಲ್, ಮುಳಿಹಿತ್ಲು ಮೊದಲಾದ ಪ್ರದೇಶಗಳ ರಸ್ತೆ ಅಗಲೀಕರಣ ಕಾಮಗಾರಿಯು ತ್ವರಿತವಾಗಿ ನಡೆಯಬೇಕು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆಗಳ ಬಗ್ಗೆ ಎನ್.ಎಚ್ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕು ಎಂದರು. ಪಂಪ್ ವೆಲ್ ನಲ್ಲಿರುವ “ಮಹಾವೀರ ವೃತ್ತ”ದ ಹೆಸರನ್ನು ತುಳುವಿನಲ್ಲೂ ಬರೆಯುವ ಬಗ್ಗೆ ಪಾಲಿಕೆಯವರು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಶಾಸಕರು ಸೂಚನೆ ನೀಡಿದರು.

ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಸಂದೀಪ್ ಗರೋಡಿ, ರೇವತಿ ಶೆಟ್ಟಿ, ಮಾಜಿ ಉಪ ಮೇಯರ್ ಭಾನುಮತಿ ಪಿ.ಎಸ್, ಪಾಲಿಕೆಯ ಹಿರಿಯ ಅಧಿಕಾರಿಗಳಾದ ನರೇಶ್ ಶೆಣೈ, ನಾಗರಾಜ್, ರಾಜೇಶ್, ಭವ್ಯ, ಸ್ಮಾರ್ಟ್ ಸಿಟಿಯ ಅರುಣ್ ಪ್ರಭಾ, ಎನ್.ಎಚ್ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!