ಮಂಜೇಶ್ವರ: ನಾಲ್ಕು ದಶಕಗಳಿಂದ ಹಾವುಗಳ ರಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ‘ಸ್ನೇಕ್ ಸುರೇಶ್’
ಮಂಜೇಶ್ವರ ತಾಲೂಕಿನ ಕುಂಬಳೆ ಕಂಚಿಕಟ್ಟೆ ನಿವಾಸಿ ಸುರೇಶ್, ಕಳೆದ ನಾಲ್ಕು ದಶಕಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಅಪರೂಪದ ಸೇವೆ ಸಲ್ಲಿಸುತ್ತಿದ್ದಾರೆ. ಸ್ನೇಕ್ ಸುರೇಶ್ ಎಂದೇ ಜನಪ್ರಿಯರಾಗಿರುವ ಇವರು, ಇದುವರೆಗೆ ಸುಮಾರು ಮೂರುವರೆ ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಈವರೆಗೆ ಹಿಡಿದ ಹಾವುಗಳ ಪೈಕಿ ನಾಗರಹಾವುಗಳೇ ಅಧಿಕ ಎಂದು ಸುರೇಶ್ ತಿಳಿಸುತ್ತಾರೆ. ವಿಶೇಷವಾಗಿ ಕುಂಬಳೆ–ಬದಿಯಡ್ಕ ಪರಿಸರದಲ್ಲಿ ನಾಗರಹಾವುಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ನಿಖರ ಕಾರಣವೇನು ಎಂಬುದು ನನಗೂ ತಿಳಿದಿಲ್ಲ ಎಂದು ಅವರು ಹೇಳುವ…