Avatar

NAMMA MEDIA 24X7

ಕಾಸರಗೋಡು ಗಡಿನಾಡು ಕನ್ನಡಿಗರ ಸಮಸ್ಯೆ ಹಾಗೂ ಮಲಯಾಳಂ ಭಾಷಾ ಬಿಲ್–2025 ವಿರೋಧಿಸಿ ಕೇರಳ ರಾಜ್ಯಪಾಲರ ಭೇಟಿ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು ಕರ್ನಾಟಕ ಸರ್ಕಾರದ ಪ್ರಾಧಿಕಾರವಾಗಿದ್ದು, ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರದ ಹಿತಾಸಕ್ತಿಯಿಂದ, ಗಮನಿಸುವುದಾದರೆ ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ “ಮಲಯಾಳಂ ಭಾಷಾ ಬಿಲ್-2025” ಎಂಬ ಬಿಲ್ಲನ್ನು ಅಂಗೀಕರಿಸಿದೆ. ಈಗಾಗಲೇ ಇಂತಹ ಬಿಲ್ಲನ್ನು 2017 ರಲ್ಲಿ ಭಾರತದ ಮಾನ್ಯ ರಾಜ್ಯಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಕೇರಳ ಸರ್ಕಾರದಿಂದ ಪ್ರಸ್ತಾಪಿತ ಬಿಲ್ಲು ಸಂಪೂರ್ಣ ಅಸಂವಿಧಾನಿಕವಾಗಿದೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹಳ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ…

Read More

ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ”* ಸಂಗೀತ ಕಾರ್ಯಕ್ರಮ … !

ಮಂಗಳೂರು:ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ ಪ್ರತಿಷ್ಠಿತ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ”* ಸಂಗೀತ ಕಾರ್ಯಕ್ರಮವನ್ನು ಜನವರಿ 9 ರಂದು ಸಂಜೆ 5.30 ರಿಂದ ಮಂಗಳೂರಿನ *ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಲಯನ್ಸ್ ಪ್ರಕೋಷ್ಠ ಇದರ ಜಿಲ್ಲಾಧ್ಯಕ್ಷರಾದ ಲ / ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಇದೇ ಮೊದಲ ಬಾರಿ *ಬಿನಾಕಾ ಗೀತಮಾಲಾ ಸಂಯೋಜನೆಯೊಂದಿಗೆ ಆಯೋಜಿಸಲಾಗುತ್ತಿದೆ.ಈ…

Read More

ಖಗ ಪ್ರೇಮಿಗಳಿಗೆ ಸಿಹಿ ಸುದ್ದಿ ಜನವರಿ 9 ರಿಂದ 11 ರವರೆಗೆ ಮಂಗಳೂರಿನಲ್ಲಿ 12ನೇ ಕರ್ನಾಟಕ ಪಕ್ಷಿ ಉತ್ಸವ ಹಕ್ಕಿ ಹಬ್ಬ .. !

ಮಂಗಳೂರು:12ನೇ ಕರ್ನಾಟಕ ಹಕ್ಕಿ ಹಬ್ಬವು ಜನವರಿ 9 ರಿಂದ 11 ರವರೆಗೆ ಮಂಗಳೂರಿನಲ್ಲಿ ನಡೆಯಲಿದ್ದು ಇದರ ಉದ್ಘಾಟನೆಯು ಪಿಲಿಕುಳದಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯಾದ ಶಾಲೆಟ್ ಪಿಂಟೊ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಮೂರು ದಿನಗಳ ಹಕ್ಕಿ ಹಬ್ಬದಲ್ಲಿ ಹಕ್ಕಿಗಳ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಕ್ಕಿ ಹಬ್ಬವನ್ನು…

Read More

ಗುರುಪುರದಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ:ಜಾತಿ ಕಾರಣದಿಂದ ಮದುವೆ ನಿರಾಕರಣೆ.ಆರೋಪಿಯ ಬಂಧನ

ಮಂಗಳೂರು:ಗುರುಪುರದಲ್ಲಿ ಯುವತಿ ಆತ್ಮಹತ್ಯೆಗೆ ಜಾತಿ ಕಾರಣದಿಂದ ಮದುವೆ ನಿರಾಕರಣೆ, ನಿರ್ಲಕ್ಷ್ಯವೇ ಕಾರಣ ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಗಂಜಿಮಠ ಮಳಲಿ ನಿವಾಸಿ ಮನೋಜ್ ಅಲಿಯಾಸ್ ಮುರಳಿ ಪೂಜಾರಿ ಬಂಧಿತ ಆರೋಪಿ. ಮೂಡಬಿದ್ರೆಯ ನವ್ಯಾ (20) ಸೋಮವಾರ ಸ್ನೇಹಿತೆಯನ್ನು ಭೇಟಿಯಾದ ಬಳಿಕ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ನವ್ಯಾ ಆತ್ಮಹತ್ಯೆಗೆ…

Read More

ಅಯ್ಯಪ್ಪ ದೇವಸ್ಥಾನದ ಅರವಣ ಪಾಯಸಕ್ಕೆ ಇದೆಂಥಾ ವಿಘ್ನ … ! 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗಿ ₹1.60 ಕೋಟಿ ರೂ. ನಷ್ಟ… !

ಶಬರಿಮಲೆ : ಅಯ್ಯಪ್ಪ ದೇವಸ್ಥಾನದಲ್ಲಿ ಯಾತ್ರಿಕರಿಗೆ ವಿತರಿಸಲು ಸಿದ್ಧಪಡಿಸಲಾಗಿದ್ದ 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡ ಪರಿಣಾಮ ಕಲ್ಲಿನಂತೆ ಗಟ್ಟಿಯಾಗಿ ಮಾರ್ಪಟ್ಟಿದ್ದು, ಇದರಿಂದ ದೇವಸ್ವಂ ಮಂಡಳಿಗೆ ಸುಮಾರು ₹1.60 ಕೋಟಿ ರೂ. ನಷ್ಟ ಉಂಟಾಗಿದೆ. ಬೆಲ್ಲದ ಹೆಚ್ಚಿನ ಸಿಹಿ ಅಂಶವೇ ತೇವಾಂಶ ನಷ್ಟಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ಮಂಡಲಕಲಾ ಯಾತ್ರೆಗೆ ಮುನ್ನ ಮೀಸಲು ರೂಪದಲ್ಲಿ ತಯಾರಿಸಲಾದ ಈ ಅರವಣ ಮಹಸರವನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಬೇಕಾದ ಕಾರಣ, ಅಡುಗೆ ಪ್ರಕ್ರಿಯೆಯಲ್ಲಿ ತೇವಾಂಶವನ್ನು ಗರಿಷ್ಠ…

Read More

ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 7 ವರ್ಷಗಳ ಬಳಿಕ ಬಾಲಗಣಪತಿಗೆ ಮೂಡಪ್ಪ ದರ್ಶನ …

ಪುತ್ತೂರು:ಇತಿಹಾಸ ಪ್ರಸಿದ್ದ ಸೀಮಾಧಿಪತಿ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಿತ್ಯ ಆರಾಧಿಸಲ್ಪಡುವ ಮಹಾಗಣಪತಿಗೆ ಲೋಕಕಲ್ಯಾಣಾರ್ಥವಾಗಿ 108 ಕಾಯಿ ಗಣಪತಿ ಹೋಮ, ಮಹಾರಂಗ ಪೂಜೆ, ಮೂಡಪ್ಪ ಸೇವೆ ಏಳು ವರ್ಷಗಳ ಬಳಿಕ ಜ.6ರಂದು ನಡೆಯಿತು.ದೇವಳದ ತಂತ್ರಿ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ಸದಸ್ಯರ ಉಪಸ್ಥಿತಿಯಲ್ಲಿ ಬೆಳಗ್ಗಿನಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿ, ಸಂಜೆಮಹಾರಂಗಪೂಜೆಯಾಗಿ ರಾತ್ರಿ ಮೂಡಪ್ಪ ಸೇವೆ ನಡೆಯಿತು. ವಿಶೇಷವಾಗಿ ಅಂಗಾರಕ ಸಂಕಷ್ಟ ಚತುರ್ಥಿ…

Read More

ಅಬುಧಾಬಿಯಲ್ಲಿ ಭೀಕರ ರಸ್ತೆ ಅಪಘಾತ.ಒಂದೇ ತಾಯಿಯ ನಾಲ್ಕು ಮಕ್ಕಳು ಮೃತ್ಯು .ಪೋಷಕರ ಸ್ಥಿತಿ ಗಂಭೀರ

ಅಬುಧಾಬಿಯಲ್ಲಿ ಲಿವಾ ಫೆಸ್ಟಿವಲ್‌ನಲ್ಲಿ ಕೆಲವು ಸಮಯ ಕಳೆದ ಕೇರಳ ಮೂಲದ ಕುಟುಂಬವು ದುಬೈಗೆ ಹಿಂತಿರುಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಪುಟ್ಟ ಮಕ್ಕಳ ದುರ್ಮರಣ ಸಂಭವಿಸಿದ್ದು, ಪೋಷಕರು ಮತ್ತು ಸೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತರು ಎಲ್ಲರೂ 14 ವರ್ಷದೊಳಗಿನ ಮಕ್ಕಳು, ಮತ್ತು ಒಂದೇ ಕುಟುಂಬದವರು. ಮೃತ ಮಕ್ಕಳನ್ನು ಅಶಾಝ್ (14 ವರ್ಷ), ಅಮರ್ (12 ವರ್ಷ), ಅಜಾಮ್ (7 ವರ್ಷ) ಮತ್ತು ಅಯ್ಯಾಶ್ (5 ವರ್ಷ) ಎಂದು ಗುರುತಿಸಲಾಗಿದೆ. ಮನೆ ಕೆಲಸದಾಕೆ ಬುಶ್ರಾ…

Read More

ತಲಪಾಡಿಯಲ್ಲಿ ಬಸ್‌ಗೆ ಕಲ್ಲೆಸೆದ ಪ್ರಕರಣ: ಕೇಸು ದಾಖಲಾದ ಬಳಿಕ ಪ್ರಯಾಣಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ : ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಮನೋವ್ಯಥೆಯಿಂದ ಬಸ್‌ಗೆ ಕಲ್ಲೆಸೆದು ಪೊಲೀಸರು ಕೇಸು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಯಾಣಿಕನಾದ ಉಪ್ಪಳದಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಎಂಬಾತನು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ನಾಲ್ಕು ಸಾರಿಗೆ ಬಸ್ಸುಗಳು ನಿಲುಗಡೆ ನೀಡದೆ ತೆರಳಿದ ಕಾರಣ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಬಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೂ ನಿಲುಗಡೆ ನೀಡದ ಹಿನ್ನೆಲೆಯಲ್ಲಿ ಅಬ್ದುಲ್ ಹಮೀದ್ ಕಲ್ಲೆಸೆದಿದ್ದು,…

Read More

ಜನವರಿ 9 ರಿಂದ 11ರ ತನಕ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ “ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್” ಸಂಭ್ರಮ … !

ಮಂಗಳೂರು:”ದೇಶದ ಅತ್ಯಂತ ವೈವಿಧ್ಯಮಯ ಕ್ರೀಡಾ, ಅಥ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲೊಂದಾದ 4ನೇ ಆವೃತ್ತಿಯ ಮಂಗಳೂರು ಟ್ರಯಾಥಾನ್, ಮಂಗಳೂರು ಬೀಚ್ ಮ್ಯಾರಥಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್‌ ಜನವರಿ 9ರಿಂದ ಜನವರಿ 11ರವರೆಗೆ ನಡೆಯಲಿದೆ ಎಂದು ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಂಗಳೂರು ಟ್ರಯಾಥಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ 2026 ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ. ಈ ಬಾರಿ ದೇಶ ವಿದೇಶಗಳಿಂದ 5000ಕ್ಕಿಂತ…

Read More

ಜನವರಿ 9ರಿಂದ 11ರ ತನಕ ಕದ್ರಿ ಪಾರ್ಕ್‌ನಲ್ಲಿ ರಾಷ್ಟ್ರ ಮಟ್ಟದ ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ ಉತ್ಸವ … !

ಮಂಗಳೂರು:ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಶರಧಿ ಪ್ರತಿಷ್ಠಾನವು ಜ.9, 10, 11ರಂದು ಹಮ್ಮಿಕೊಂಡ ರಾಷ್ಟ್ರ ಮಟ್ಟದ ಚಿತ್ರ-ಶಿಲ್ಪ- ಸಾಂಸ್ಕೃತಿಕ ಮೇಳ ‘ಕಲಾ ಪರ್ಬ’ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಅವರು ಕದ್ರಿ ಪಾರ್ಕ್ ನಲ್ಲಿ ಕರೆದ ಪತ್ರಿಕಾಗೊಸ್ಟಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು , ಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಜ.9ರಂದು ಸಂಜೆ 5:30ಕ್ಕೆ ಕಲಾ…

Read More
error: Content is protected !!