Avatar

NAMMA MEDIA 24X7

ಕುಂಬಳೆ: ಕಾರಿನಲ್ಲಿ ಅಕ್ರಮ ಪಾನ್ ಮಸಾಲಾ ಸಾಗಾಟ – 17,226 ಪ್ಯಾಕೆಟ್‌ಗಳೊಂದಿಗೆ ಯುವಕ ಬಂಧನ

ಕುಂಬಳೆ: ಕಾರಿನಲ್ಲಿ ಅಕ್ರಮವಾಗಿ ವಿವಿಧ ರೀತಿಯ ಪಾನ್ ಮಸಾಲಾ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಫೀರ್ (27) ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಮುತ್ತತ್ತೋಡಿ ಚೆಟ್ಟುಕುಝಿ ಸಿಎ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಮೂಲತಃ ನಾರ್ತ್ ತ್ರಿಕ್ಕರಿಪ್ಪೂರು ಮೀಲಿಯಾಟ್ ಹೌಸ್‌ನವರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಶಿರಿಯಾ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಈ ಬಂಧನ ನಡೆದಿದೆ. KL 24 K 4300 ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಶಫೀರ್‌ಗೆ ಪೊಲೀಸರು ನಿಲ್ಲಲು…

Read More

2028ರ ಚುನಾವಣೆಯಲ್ಲಿ ಬಂಟ್ವಾಳದಿಂದ ಬಿ. ರಮಾನಾಥ್ ರೈ ಸ್ಪರ್ಧೆ: ಸಿಎಂ ಸಿದ್ದರಾಮಯ್ಯ

ಮಂಗಳೂರು: 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ಮಾಜಿ ಸಚಿವ ಬಿ. ರಮಾನಾಥ್ ರೈ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಂಟ್ವಾಳದಲ್ಲಿ ನಡೆದ 15ನೇ ವರ್ಷದ ಮೂಡೂರು–ಪಡೂರು ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ನಿಧಿ ತಂದಿದ್ದರೂ ರಮಾನಾಥ್ ರೈ ಅವರು ಚುನಾವಣೆಯಲ್ಲಿ ಸೋತಿರುವುದು ನ್ಯಾಯವಲ್ಲ ಎಂದು ಹೇಳಿದರು. “2013ರಿಂದ 2018ರವರೆಗೆ ರಮಾನಾಥ್ ರೈ ಅವರ ಅವಧಿಯನ್ನು ಅವರು…

Read More

ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಸಪ್ತಮ ದಿನ

ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಸ್ನೇಹ ಕಲಾಪ್ರತಿಷ್ಠಾನ((ರಿ) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಕ್ಷಮಂಜರಿ ಯ ಸಪ್ತಮ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ವೇದಮೂರ್ತಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ ಅಡಿಗರು ಲೋಕದಲ್ಲಿ ಸಂಪೂರ್ಣ ನವರಸ ಭರಿತವಾದ ಏಕೈಕ ಕಲೆ ಅದು ಯಕ್ಷಗಾನ. ಅಷ್ಟು ಮಾತ್ರವಲ್ಲ ಇದರ ಚೆಂಡೆ ಮದ್ದಲೆಗಳ ಶಬ್ಧಗಳ ತರಂಗಾಂತರಗಳಿಗೆ ಹಾಗೂ ಭಾಗವತರ ಭಾಗವತಿಗೆ…

Read More

ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ವೆನ್ಲಾಕ್ ಆಸ್ಪತ್ರೆಗೆ ಭೇಟಿ

ಮಂಗಳೂರು, ಮಾ. 8 (ಕ.ವಾ): ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶನಿವಾರ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಹಿಳಾ ವಾರ್ಡ್‌ಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಭೇಟಿಯ ಸಂದರ್ಭದಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸಿಡ್ ದಾಳಿ ಸಂತ್ರಸ್ತೆಯೊಂದಿಗೆ ಮಾತುಕತೆ ನಡೆಸಿ ಆಕೆಗೆ ಸಾಂತ್ವನ ಹೇಳಿದರು. ಸಂತ್ರಸ್ತೆಗೆ ಅಗತ್ಯವಾದ ಪರಿಹಾರ ಮತ್ತು ಸರ್ಕಾರದ ನೆರವು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ಸಂತ್ರಸ್ತೆಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ…

Read More

ಐಆರ್ ಸಿಟಿಸಿ ಮಂಗಳೂರಿನಿಂದ ರೈಲು ಮತ್ತು ವಿಮಾನ ಪ್ರವಾಸ ಪ್ಯಾಕೇಜ್ಗಳ ಪರಿಚಯ

ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್ ಸಿಟಿಸಿ) ಭಾರತ ಸರ್ಕಾರದ ರೈಲ್ವೇ ಸಚಿವಾಲಯದ ಅಧೀನದಲ್ಲಿರುವ ಒಂದು ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ನಿಲ್ದಾಣಗಳಲ್ಲಿ, ರೈಲುಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕ್ಯಾಟರಿಂಗ್ ಮತ್ತು ಆತಿಥ್ಯ ಸೇವೆಗಳನ್ನು ಉನ್ನತೀಕರಿಸಲು, ವೃತ್ತಿಪರಗೊಳಿಸಲು ಮತ್ತು ನಿರ್ವಹಿಸಲು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಐಆರ್ ಸಿಟಿಸಿಯನ್ನು ಭಾರತೀಯ ರೈಲ್ವೇಯ ವಿಸ್ತೃತ ಅಂಗವಾಗಿ ಸ್ಥಾಪಿಸಲಾಗಿದೆ. ಕೈಗೆಟುಕುವ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಗಳನ್ನು ಆಯೋಜಿಸುವಲ್ಲಿ ಒಂದು ಪ್ರಮುಖ ಸಂಸ್ಥೆಯಾಗಿ, ಐಆರ್…

Read More

ನನಗಾಗಿ ನನ್ನವರು…..!

ಸೂರ್ಯ ಇಲ್ಲದಿದ್ದರೆ ಬೆಳಕು ಇಲ್ಲ..! ಚಂದ್ರ ಇಲ್ಲದಿದ್ದರೆ ಬೆಳದಿಂಗಳು ಇಲ್ಲ..! ಆದರೆ ತಮ್ಮ ಇಲ್ಲದಿದ್ದರೆ ನನ್ನ ಪಾಲಿಗೆ ದೇವರಿಲ್ಲ…..! ಐ ಲವ್ ಯು ತಮ್ಮ ಹೆತ್ತು ನನ್ನ ಬೆಳೆಸಿದ್ದು ಅಮ್ಮನಾದರೂ ಜೀವನದ ಪಾಠಗಳನ್ನು ಕಲಿಸಿದ್ದು ಅಪ್ಪ ಐ ಲವ್ ಯು ಅಪ್ಪ ಜೀವನದ ಪಾಠ ಕಲಿಸಿದ್ದು ಅಪ್ಪನಾದರೂ ಹೆತ್ತು ಬೆಳೆಸಿದ್ದು ಅಮ್ಮ ಐ ಲವ್ ಯು ಅಮ್ಮ ಬರಹ: ದಿಯಾ ಎಂ ವಿ 3ನೇ ತರಗತಿ ಆರ್ ಆರ್ ಎಂ ಜಿ ಯು ಪಿ ಎಸ್ ಕೀಕಾನ

Read More

ಮಂಜೇಶ್ವರ ಶಾಸಕರಿಗೆ ವಿದೇಶದಲ್ಲಿ ಏನು ಕೆಲಸ -ಡಾ ಭಾರತ್ ಶೆಟ್ಟಿ

ಮಂಜೇಶ್ವರ: ಕೇರಳ ಸರಕಾರ ಮಲಯಾಳಂ ಭಾಷೆ ಕಡ್ಡಾಯ ಮಸೂದೆ ಜಾರಿ ಮಾಡಿದಾಗ ಮಂಜೇಶ್ವರ ಶಾಸಕರು ಎಲ್ಲಿ ಇದ್ದರು? ಮಂಜೇಶ್ವರ ಶಾಸಕರು ಪ್ರತಿ ತಿಂಗಳು ವಿದೇಶಕ್ಕೆ ಹೋಗುವ ರಹಸ್ಯ ಏನು? ಮಂಜೇಶ್ವರ ಜನತೆ ಮುಸ್ಲಿಂ ಲೀಗ್ ಶಾಸಕರನ್ನು ಕಳೆದ 40ವರ್ಷ ಗಳಿಂದ ಗೆಲ್ಲಿಸಿದ್ದೀರಿ.ಆದರೂ ಇಲ್ಲಿನ ಜನತೆ ವಿದ್ಯಾಭ್ಯಾಸ, ಅರೋಗ್ಯ ಉದ್ಯೋಗಕ್ಕೆ ಮಂಗಳೂರನ್ನೇ ಆಶ್ರಯ ಪಡಬೇಕಾದ ಪರಿಸ್ಥಿತಿ. ಎಂದು ಮಂಗಳೂರು ಉತ್ತರ ವಿಧಾನಸಭಾ ಶಾಸಕ ರಾದ ಡಾ ಭಾರತ್ ಶೆಟ್ಟಿ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ನೇತೃತ್ವ ಸಭೆ ಯಲ್ಲಿ…

Read More

ತಣ್ಣೀರುಬಾವಿ ಬೀಚ್‌ನಲ್ಲಿ ಅಲ್ಟಿಮೇಟ್ ಫ್ರಿಸ್ಬಿ ನ್ಯಾಷನಲ್ಸ್: ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿ

ಮಂಗಳೂರು: ಪಶ್ಚಿಮ ಕರಾವಳಿಯ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿ ಅಲ್ಟಿಮೇಟ್ ಫ್ರಿಸ್ಬಿ ಬೀಚ್ ನ್ಯಾಷನಲ್ಸ್ ರಾಷ್ಟ್ರೀಯ ಟೂರ್ನಮೆಂಟ್ ಮಂಗಳೂರಿನ ತಣ್ಣೀರುಬಾವಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಮಾರ್ಚ್ 6 ರಿಂದ 8ರವರೆಗೆ ನಡೆಯಿತು. ಈ ಮೂಲಕ ತಣ್ಣೀರುಬಾವಿ ಬೀಚ್ ಈ ವಿಶಿಷ್ಟ ಕ್ರೀಡಾಕೂಟಕ್ಕೆ ಸಾಕ್ಷಿಯಾಯಿತು. ಅಮೆರಿಕ ಮೂಲದ ಈ ಕ್ರೀಡೆ ಭಾರತದಲ್ಲಿ ಇನ್ನೂ ವ್ಯಾಪಕವಾಗಿ ಜನಪ್ರಿಯವಾಗದಿದ್ದರೂ, ಕಳೆದ ಕೆಲವು ವರ್ಷಗಳಿಂದ ನಿಧಾನವಾಗಿ ಬೆಳವಣಿಗೆ ಕಾಣುತ್ತಿದೆ. ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿರುವ ಪಶ್ಚಿಮ ಕರಾವಳಿಯಲ್ಲಿ ಈ ರೀತಿಯ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಇದೇ…

Read More

ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗೆ “ಕನ್ನಡ ಕಟ್ಟಾಳು “ವಿಶೇಷ ಗೌರವ ಪ್ರಶಸ್ತಿ.

ಮಂಗಳೂರು: ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಡೆದ ಕನ್ನಡ ಭವನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ದಂಪತಿಗೆ “ಕನ್ನಡ ಕಟ್ಟಾಳು” ವಿಶೇಷ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀಮತಿ ರೇಖಾ ಸುದೇಶ್ ರಾವ್ ಅಧ್ಯಕ್ಷೆಯಾಗಿರುವ ಹಾಗೂ ಡಾ. ರವೀಂದ್ರ ಜೆಪ್ಪು ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭವನದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬ್ಳೆ, ಕನ್ನಡ…

Read More

ಮಂಗಳೂರು ವಿವಿಯಲ್ಲಿ ಸಾಧಕರಿಗೆ ‘ಯಕ್ಷಮಂಗಳ’ ಪ್ರಶಸ್ತಿ ಪ್ರದಾನ

ಕೊಣಾಜೆ: ಯಕ್ಷಗಾನವು ಹಲವು ಕಲೆಯ ಸಮನ್ವಯದಿಂದ ರೂಪುಗೊಂಡ ಸಮೃದ್ಧ ಪರಂಪರೆಯ ಕಲೆ ಆಗಿದ್ದರೂ, ಅದರ ಕಲಾವಿದರ ಜೀವನ ಮಾತ್ರ ಇನ್ನೂ ಸಂಕಷ್ಟದಲ್ಲಿಯೇ ಇದೆ. ಕಲಾವಿದರಿಗೆ ಸರ್ಕಾರದಿಂದ ಸಮಗ್ರ ಯೋಜನೆಗಳ ಮೂಲಕ ಆರ್ಥಿಕ ರಕ್ಷಣೆ ದೊರಕಬೇಕು ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕರಾದ ಡಾ. ಪಿ. ದಯಾನಂದ ಪೈ ಅಭಿಪ್ರಾಯಪಟ್ಟರು. ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಹಾಗೂ ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ 2025–26ನೇ ಸಾಲಿನ ‘ಯಕ್ಷಮಂಗಳ’ ಪ್ರಶಸ್ತಿ…

Read More
error: Content is protected !!