ಅಯ್ಯಪ್ಪ ದೇವಸ್ಥಾನದ ಅರವಣ ಪಾಯಸಕ್ಕೆ ಇದೆಂಥಾ ವಿಘ್ನ … ! 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗಿ ₹1.60 ಕೋಟಿ ರೂ. ನಷ್ಟ… !
ಶಬರಿಮಲೆ : ಅಯ್ಯಪ್ಪ ದೇವಸ್ಥಾನದಲ್ಲಿ ಯಾತ್ರಿಕರಿಗೆ ವಿತರಿಸಲು ಸಿದ್ಧಪಡಿಸಲಾಗಿದ್ದ 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡ ಪರಿಣಾಮ ಕಲ್ಲಿನಂತೆ ಗಟ್ಟಿಯಾಗಿ ಮಾರ್ಪಟ್ಟಿದ್ದು, ಇದರಿಂದ ದೇವಸ್ವಂ ಮಂಡಳಿಗೆ ಸುಮಾರು ₹1.60 ಕೋಟಿ ರೂ. ನಷ್ಟ ಉಂಟಾಗಿದೆ. ಬೆಲ್ಲದ ಹೆಚ್ಚಿನ ಸಿಹಿ ಅಂಶವೇ ತೇವಾಂಶ ನಷ್ಟಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ಮಂಡಲಕಲಾ ಯಾತ್ರೆಗೆ ಮುನ್ನ ಮೀಸಲು ರೂಪದಲ್ಲಿ ತಯಾರಿಸಲಾದ ಈ ಅರವಣ ಮಹಸರವನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಬೇಕಾದ ಕಾರಣ, ಅಡುಗೆ ಪ್ರಕ್ರಿಯೆಯಲ್ಲಿ ತೇವಾಂಶವನ್ನು ಗರಿಷ್ಠ…
