Avatar

Shramitha bejja

ಭಾರತದಾದಂತ್ಯ ಮತ್ತೆ 450 ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು

ನವದೆಹಲಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯಕ್ಕೆ ಸದ್ಯ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಮತ್ತೆ ಇಂದು ವಿವಿಧ ವಿಮಾನ ನಿಲ್ದಾಣಗಳಲ್ಲಿ 450 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾರತವು ಹಿಂದೆಂದೂ ಕಂಡಿರದ ಪ್ರಮಾಣದ ವಿಮಾನ ಪ್ರಯಾಣ ಬಿಕ್ಕಟ್ಟಿನಲ್ಲಿ ಸತತ ಏಳನೇ ದಿನವೂ ಅಡಚಣೆಗಳು ಮುಂದುವರೆದಿವೆ.ದೆಹಲಿ ವಿಮಾನ ನಿಲ್ದಾಣದಲ್ಲಿ, 134 ಇಂಡಿಗೋ ವಿಮಾನಗಳು – 75 ನಿರ್ಗಮನ ಮತ್ತು 59 ಆಗಮನ – ಇಂದು ರದ್ದಾಗಿವೆ, ಆದರೆ ಬೆಂಗಳೂರು ವಿಮಾನ ನಿಲ್ದಾಣವು 127 ರದ್ದತಿಗಳನ್ನು ವರದಿ ಮಾಡಿದೆ….

Read More

ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನತೆಯ ಅಗ್ರಹ -ಆದರ್ಶ ಬಿ ಎಂ

ಪೈವಳಿಕೆ : ಬಿಜೆಪಿ ಈ ಬಾರಿಯ ಸ್ಥಳೀಯಾಡಳಿತ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾದಿಸಲಿದೆ, ಅ ಮೂಲಕ ಪೈವಳಿಕೆ, ಮೀoಜ, ವರ್ಕಾಡಿ, ಮಂಜೇಶ್ವರ ಪಂಚಾಯತ್ ಗಳ ಆಡಳಿತ ಚುಕ್ಕಾಣಿ ಹಿಡಿಯಲ್ಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಬಿಜೆಪಿ ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳಾದ ವಿಜಯ್ ಕುಮಾರ ರೈ, ಮಣಿಕಂಠ ರೈ, ಯವರ ಚುನಾವಣಾ ವಾಹನ ಪ್ರಚಾರಣ ಜಾಥಾ ಉದ್ಘಾಟಿಸಿ ಮಾತನಾಡಿದರು. ಶಬರಿಮಲೆಗೆ ಅಪಚಾರ ಮಾಡಿದ ಎಡರಂಗಕ್ಕೆ vote ಇಲ್ಲ, ರೇಪ್ ಕೇಸ್…

Read More

ಗೆಲ್ಲಿಸಿದರೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ -ವಿಜಯ್ ರೈ.

ದೇಶದಲ್ಲಿ ಮೋದಿ ಪ್ರಧಾನಿ ಅದ ಬಳಿಕ ಉಂಟಾಗಿರುವ ಅಭಿವೃದ್ಧಿ ಯನ್ನು ಗ್ರಾಮ ಗ್ರಾಮಗಳಲ್ಲಿ ಮಾಡಿ ತೋರಿಸುತ್ತೇವೆ. ಗ್ರಾಮ ಬ್ಲಾಕ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಿ ಎಂದು ಬಿಜೆಪಿ ವರ್ಕಾಡಿ ಜಿಲ್ಲಾ ಡಿವಿಶನ್ ಅಭ್ಯರ್ಥಿ ವಿಜಯ್ ರೈ ಮಜೀರ್ ಪಲ್ಲ ದಲ್ಲಿ ಜರಗಿದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್ ಮದೂ ಕಾರ್ಯಕ್ರಮ ಉದ್ಘಾಟಿಸಿದರು.ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಸಲೀಲ್ ಮಾಸ್ಟರ್, ನಾರಾಯಣ ನಾವುಡ, ಸದಾಶಿವ ಚೇರಲ್, ವಲ್ಸರಾಜ್,…

Read More

ಕೇರಳ ಕಲೋತ್ಸವದ ಪ್ರಶಸ್ತಿ ವಿತರಣೆಯಲ್ಲಿ ಸಂಘಟಕರಿಂದ ಸ್ಪರ್ಧಾಳುಗಳಿಗೆ ಅವಮಾನ: ಭಾರೀ ವಿವಾದ

ಮಂಜೇಶ್ವರ : ಕೇರಳ ಕಲೋತ್ಸವದ ಅಂಗವಾಗಿ ಮಂಜೇಶ್ವರದಲ್ಲಿ ಆಯೋಜಿಸಲಾದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಲೋತ್ಸವದಲ್ಲಿ ಭಾಗವಹಿಸಿ ವಿಜೇತರಾಗಿದ್ದ ಮಕ್ಕಳಿಗೆ ಹಾಗೂ ಯುವಕರಿಗೆ ನೀಡಲಾದ ಪ್ರಮಾಣಪತ್ರ ಮತ್ತು ಟ್ರೋಫಿಗಳ ಗುಣಮಟ್ಟ ಸಂಬಂಧಿಸಿದಂತೆ ಹಲವು ಗಂಭೀರ ದೂರುಗಳು ಕೇಳಿ ಬಂದಿದೆ.ಈ ಕಾರ್ಯಕ್ರಮಕ್ಕೆ ಪಂಚಾಯತ್ ಫಂಡ್‍ನಿಂದ ರೂ. 1,50,000 ಬಜೆಟ್ ಮಂಜೂರಾಗಿದ್ದರೂ, ವಿತರಿಸಲಾದ ಪ್ರಶಸ್ತಿಗಳ ಗುಣಮಟ್ಟ ಮತ್ತು ಅವುಗಳ ಪೂರ್ಣತೆಯ ಕೊರತೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಜೇತರಿಗೆ ವಿತರಿಸಲಾದ ಪ್ರಮಾಣಪತ್ರಗಳಲ್ಲಿ ಸ್ಪರ್ಧಾಳುವಿನ ಹೆಸರು ದಾಖಲಿಸದೇ ಇರುವುದು ಬಾರೀ…

Read More

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70 ನೇ ಪರಿನಿರ್ವಾಣ ದಿನಾಚರಣೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 70 ನೇ ಪರಿನಿರ್ವಾಣ ದಿನಾಚರಣೆಯನ್ನು ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ಮಂಗಲ್ಪಾಡಿಯಲ್ಲಿ ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ದೀಪ ಬೆಳಗಿಸಿದರು. ಕಾರ್ಯದರ್ಶಿ ಶ್ರೀ ಹರೀಶ್ ಕುಮಾರ್‌ ಸ್ವಾಗತಿಸಿ,ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು. ಕೋಶಾಧಿಕಾರಿ ಶ್ರೀ ವಿಜಯ ಕುಮಾರ್ ಎಸ್. ಕೆ.ಧನ್ಯವಾದ ಸಮರ್ಪಿಸಿದರು.ಇತ್ತೀಚೆಗೆ ನಿಧನರಾದ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ದಿ.ರಾಮ ಮತ್ತು ಶ್ರೀ ದಿ.ಗಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶ್ರೀ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Read More

ಮೀಯಪದವು : ಎಡರಂಗ ಚುನಾವಣಾ ಪ್ರಚಾರ ಸಭೆ

ತ್ರಿತಲ ಪಂಚಾಯತ್ ಚುನಾವಣೆಯ ಪ್ರಚಾರದ ಭಾಗವಾಗಿ ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಿತಿಯ ನೇತೃತ್ವದಲ್ಲಿ ಮೀಯಪದವಿನಲ್ಲಿ ಬಹಿರಂಗ ಸಭೆ ನಡೆಯಿತು. ಸಭೆಯನ್ನು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಕಾಂ : ಸಿ ಎಚ್ ಕುಂಞoಬು ಎಂಎಲ್ಎ ಉದ್ಘಾಟಿಸಿದರು. ಗಂಗಾಧರ ಕೊಡ್ದೆ ಅಧ್ಯಕ್ಷತೆ ವಹಿಸಿದರು. ಮಾಜಿ ಶಾಸಕರಾದ ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ : ಕುಮಾರನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ : ಎಂ ಸುಮತಿ, ಎಲ್…

Read More

ಸಮಸ್ಯೆ ಅದು ಸಮಸ್ಯೆಯೇ ಅಲ್ಲ…..!

ದಿನವೂ ಒಂದಲ್ಲ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಕಷ್ಟಗಳು ನಷ್ಟಗಳು ಸಾಗರದ ಅಲೆಗಳಂತೆ ಬಂದು ಬದುಕ್ಕೆನ್ನುವ ದಡಕ್ಕೆ ನಿರಂತರವಾಗಿ ಬಡೆಯುತ್ತಲೇ ಇರುತ್ತದೆ. ಆದರೆ ಆ ಅಲೆಗಳಿಗೆ ಹೆದರಿದರೆ ಬಾಳು ಸೋತು ಹೋಗುತ್ತದೆ. ಅಲೆಗಳನ್ನು ಧೈರ್ಯದಿಂದ ಎದುರು ಹಾಕಿ ಮುನ್ನುಗ್ಗಿ ಈಜಿದರೆ ಗೆಲುವು ನಮ್ಮದಾಗುತ್ತದೆ . ಪ್ರತಿ ಸಮಸ್ಯೆಗಳು ಎದುರಾದ ಸಮಯದಲ್ಲಿ ನಮಗೆ ಬೇಕಾಗಿರುವುದು ಧೈರ್ಯ, ಆತ್ಮವಿಶ್ವಾಸ . ಇದನ್ನು ನಾವು ಒಮ್ಮೆ ಕಳೆದುಕೊಂಡರೆ ಮುಂದೆ ಎದುರಾಗುವ ಸಮಸ್ಯೆಗಳನ್ನು ಹಿಮ್ಮೆಟ್ಟಲು ಕಷ್ಟವಾಗುತ್ತದೆ. ಹಾಗಾಗಿ ಆತ್ಮವಿಶ್ವಾಸವನ್ನು ನಾವು ಯಾವತ್ತಿಗೂ ಯಾವ…

Read More

ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ಮೌಲ್ಯದ ಸುಮಾರು 517.76 ಗ್ರಾಂ ಎಂಡಿಎಂಎ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ಮುಹಮ್ಮದ್ ಶಿಯಾಬ್ @ ಶಿಯಾಬ್ , ಮೊಹಮ್ಮದ್ ನೌಷದ್ @ ನೌಷದ್, ಇಮ್ರಾನ್ @ ಇಂಬ, ನಿಸಾರ್ ಅಹಮ್ಮದ್ @ ನಿಸಾರ್ ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿಸಿಬಿಯ ತಂಡವು ಖಚಿತ…

Read More

ಎಂಡಿಎಂಎ ಮಾರಾಟ ಮಾಡಲು ಯತ್ನ: ಐವರು ಆರೋಪಿಗಳಿಗೆ ಶಿಕ್ಷೆ ಪ್ರಕಟ

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯವು 12ರಿಂದ 14 ವರ್ಷಗಳ ಕಠಿಣ ಸಜೆ ವಿಧಿಸಿದೆ.ಆರೋಪಿಗಳಾದ ಬೆಂಗಳೂರು ವರ್ತೂರಿನ ಗುಂಟೂರ್ ಪಾಳ್ಯದ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮೊಹಮ್ಮದ್ ರಮೀಝ್‌ ಅಲಿಯಾಸ್ ಮುಹಮ್ಮದ್ ರಮೀಝ್, ಕಾಸರಗೋಡು ಕುನ್ನಿಲ್‌ನ ಮೊಯ್ದೀನ್ ರಶೀದ್ , ಉಪ್ಪಳದ ಅಬ್ದುಲ್ ರವೂಫ್‌ ಅಲಿಯಾಸ್ ಟಫ್ ರವೂಫ್ ಮತ್ತು ಬೆಂಗಳೂರು ಮಡಿವಾಳದ ಸಬಿತ ಅಲಿಯಾಸ್ ಚಿಂಜು ಅಲಿಯಾಸ್…

Read More

ಸರ್ಕಾರಿ ಪದವಿ ಪೂರ್ವ ಕಾಲೇಜು ಹಂಪನಕಟ್ಟೆ .ಕಂಪ್ಯೂಟ‌ರ್ ಪ್ರಯೋಗಾಲಯ ಕೊಠಡಿ ಉದ್ಘಾಟನೆ

ಸರ್ಕಾರಿ ಪದವಿ ಪೂರ್ವ ಕಾಲೇಜು ಹಂಪನಕಟ್ಟೆಯಲ್ಲಿ ರೂ. 5.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಂಪ್ಯೂಟ‌ರ್ ಪ್ರಯೋಗಾಲಯದ ಕೊಠಡಿಯನ್ನು ಶಾಸಕ ಡಿ.ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, 2025-26 ನೇ ಸಾಲಿನಿಂದ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಪ್ರಾರಂಭಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯವಿರುವ ಅನೇಕ ವಿಷಯಗಳ ಬಗ್ಗೆ ಕಾಲೇಜಿನವರು ನನ್ನ ಬಳಿ ಮನವಿ ಮಾಡಿದ್ದರು. ಅದರಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಕಂಪ್ಯೂಟರ್ ಹಾಗೂ ಸುಸಜ್ಜಿತ…

Read More
error: Content is protected !!