Avatar

Shramitha bejja

ಧರೆಗುರುಳಿದ ಶತಾಯುಷಿ ಬೃಹತ್ ಮರ.ತಪ್ಪಿದ ಭಾರೀ ಅನಾಹುತ

ಕಾಸರಗೋಡು:ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಬರುವ ಚಾಮುಂಡಿಕುನ್ನು ಪರಿಸರದಲ್ಲಿ ವ್ಯಾಪಕವಾಗಿ ಸುರಿದ ಮಳೆ ಹಾಗೂ ಬಲವಾಗಿ ಬೀಸಿದ ಗಾಳಿಯ ಪರಿಣಾಮ ಚಿತ್ತಾರಿ ವಿಲೇಜ್ ಆಫೀಸ್ ಬಳಿಯ ಬೃಹತ್ ತ್ತಾದ ಮರವೊಂದು ಧರೆಗೆ ಉರುಳಿದೆ . ಪರಿಣಾಮ ಕಾರೊಂದು ಜಕ್ಕಮ್ ಆಗಿದೆ ಜೊತೆಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ರೆಂಬೆ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರೋಡ್ ಗೆ ಬಿದ್ದಿದೆ . ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು . ಕೆಲ ದಿನಗಳ ಹಿಂದೆ ಈ ಮರವನ್ನು…

Read More

ಮಂಜೇಶ್ವರದ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ಧಾರಾಶಾಯಿ.ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸರಿಪಡಿಸಿದ ವಾರ್ಡ್ ಸದಸ್ಯೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 7ನೇ ವಾರ್ಡ್ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ರಸ್ತೆಗೆ ಬಿದ್ದು ಸುಮಾರು ವಾರಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದಿನನಿತ್ಯದ ಓಡಾಟದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯರಿಗೆ ಬಹಳ ಅಡಚಣೆಯಾಗಿತ್ತು. ರಸ್ತೆಗೆ ಅಡ್ಡವಾಗಿ ಬಿದ್ದ ಈ ಮರ, ಸ್ಥಳೀಯ ನಿವಾಸಿಗಳ ಮತ್ತು ವಾಹನ ಸವಾರರ ಸಂಚಾರಿ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತ್ತು. ಸಂಬಂಧಿತ ಇಲಾಖೆಗಳಿಂದ ನಿರೀಕ್ಷಿಸಿದ ನೆರವು ತಡವಾಗುತ್ತಿದ್ದ ಸಂದರ್ಭದಲ್ಲಿ 7ನೇ ವಾರ್ಡ್‌ನ ಸದಸ್ಯೆ ಶ್ರೀಮತಿ ರುಬೀನಾ ಅವರು ಮುಂದಾಗಿದ್ದು, ಊರಿನ ಯುವಕರು ಹಾಗೂ…

Read More

ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಾಳೆ

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಾಳೆ ನಡೆಯಲಿದೆ.ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡುವರು.ಈ ಸಂಧರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಗಿಲ್ ಯುದ್ಧ ವೀರ ಹವಲ್ದಾರ್ ಜಾನಿ ಮಾಥು ರಾಜಪುರಂ ಉಪಸ್ಥಿತರಿರುವರು, ಬ್ರಿಗೇಡಿಯರ್ ಐ.ಎನ್.ರೈ ಕುಂಬಳೆ, ಕಮಾಂಡರ್…

Read More

ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ ಬೃಹತ್ ಉದ್ಯೋಗ ಮೇಳ.ಆಗಸ್ಟ್ 01 ಮತ್ತು 02 ರಂದು

ಮಂಗಳೂರು :ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ 01 ಮತ್ತು 02 ರಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆಯಲಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ವಲಯದ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ಉದ್ಯೋಗ ಮಾಹಿತಿ ಶಿಬಿರವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ವೇದವ್ಯಾಸ ಕಾಮತ್ , ಆಳ್ವಾಸ್ ಪ್ರಗತಿ 2025 ಬೃಹತ್ ಉದ್ಯೋಗ ಮೇಳಕ್ಕೆ ಹೊರ ರಾಜ್ಯ…

Read More

ತ್ರಿಸ್ತರ ಸ್ಥಳೀಯಾಡಳಿತ ಚುನಾವಣೆ : ಅಗೋಸ್ಟ್ 30 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಚುನಾವಣೆಯ ಮತದಾರರ ಅಂತಿಮ ಪಟ್ಟಿ ಅಗೋಸ್ಟ್ 30 ಕ್ಕೆ ಪ್ರಕಟಗೊಳ್ಳಲಿದೆ.ಈಗಾಗಲೇ ಪೂರ್ವ ಭಾವಿ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ. 1034 ಸ್ಥಳೀಯಾಡಳಿತ ಸಂಸ್ಥೆಗಳ 20,998 ವಾರ್ಡುಗಳಲ್ಲಿ ಒಟ್ಟು 2,66,78,256 ಮತದಾರರಿದ್ದಾರೆ. ಈಪೈಕಿ 1,26,32,186 ಮಂದಿ ಪುರುಷರು , 1,40,45,837ಮಂದಿ ಮಹಿಳೆಯರಾಗಿದ್ದಾರೆ. 233ಮಂದಿ ಟ್ರಾನ್ಸ್ಜೆಂಡರ್ಸ್ ಇದ್ದಾರೆ. ಆಗಸ್ಟ್ 7ರ ತನಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. 2025 ಜನವರಿ 1ರೊಳಗೆ 18ವಯಸ್ಸು ಪೂರ್ಣಗೊಂಡವರನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿ…

Read More

ಮಂಜೇಶ್ವರ ರಾಗಂ ಜಂಕ್ಷನ್ ಸಮೀಪದ ವಸತಿ ಸಮುಚ್ಚಯದ ಮಾಲಿನ್ಯ ನೀರು ರಸ್ತೆಗೆ . ಸ್ಥಳೀಯರಲ್ಲಿ ಆತಂಕ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ಸಮೀಪವಿರುವ ಕ್ವಾರ್ಟರ್ಸ್, ಶೌಚಾಲಯ, ಕುನ್ನಿಲ್ ಜುಮಾ ಮಸೀದಿಯ ಪರಿಸರದಲ್ಲಿನ ಕೆಲವೊಂದು ಮನೆಗಳು, ಕೆ.ಜೆ.ಎಂ. ರಸ್ತೆ, ಕುನಿಲ್ ಶಾಲಾ ರಸ್ತೆ, ಬಡಾಜ್ ಚೌಕಿ ಮುಂತಾದ ಪ್ರದೇಶಗಳಲ್ಲಿನ ಕ್ವಾರ್ಟರ್ಸ್‌ ಹಾಗೂ ಮನೆಗಳಿಂದ ಅಡಿಗೆಮನೆ ಹಾಗೂ ಶೌಚಾಲಯಗಳ ಕೊಳಕು ನೀರು ನೇರವಾಗಿ ಸಾರ್ವಜನಿಕ ಸ್ಥಳಗಳಿಗೆ ಹರಿಯುತ್ತಿರುವ ದೃಶ್ಯಗಳು ಸ್ಥಳೀಯ ನಿವಾಸಿಗಳಲ್ಲಿ ತೀವೃ ಆತಂಕ ಸೃಷ್ಟಿಸಿದೆ. ಸಾರ್ವಜನಿಕರು ನಡೆದಾಡುವ ಸ್ಥಳಗಳಲ್ಲಿ ಶೌಚಾಲಯದ ಕೊಳಕು ನೀರು ಹರಿವಿನಿಂದ ದುರ್ನಾತ, ಮಣ್ಣಿನ ಮಾಲಿನ್ಯ ಮತ್ತು ನೀರಿನ ಮಾಲಿನ್ಯ ಹೆಚ್ಚಾಗಿದೆ. ಇದು…

Read More

ಮೀoಜದಲ್ಲಿ ವಿ ಎಸ್ ರಿಗೆ ಸರ್ವಪಕ್ಷ ಸಂತಾಪ ಸೂಚಕ ಸಭೆ.

ಮೊನ್ನೆ ನಿಧನರಾದ ಕೇರಳದ ಮಾಜಿ ಮುಖ್ಯ ಮಂತ್ರಿ, ಸಿಪಿಐಎಂ ಹಿರಿಯ ನೇತಾರ ವಿ ಎಸ್ ಅಚ್ಚುತಾನಂದನ್ ರವರ ನಿಧನಕ್ಕೆ ಸಿಪಿಐಎಂ ಮೀoಜ ಪಂಚಾಯತಿನ ಲೋಕಲ್ ಸಮಿತಿ ನೇತೃತ್ವದಲ್ಲಿ ಮೀಯಪದವಿನಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು. ಸಿಪಿಎಂ ನಾಯಕ ಕೆ ಆರ್ ಜಯಾನಂದ, ಸಿಪಿಐ ನೇತಾರ ರಾಮಕೃಷ್ಣ ಕಡoಬಾರ್, BJP ನಾಯಕ ಬ್ಲಾಕ್ ಪಂಚಾಯತ್ ಸದಸ್ಯ ಶ್ರೀ ಕೆ ವಿ ರಾಧಾಕೃಷ್ಣ, ಕಾಂಗ್ರೆಸ್ ನಾಯಕ ಶ್ರೀ ದಾಮೋದರ ಮಾಸ್ಟರ್, ಮಾಣಿ ಕಾಂಗ್ರೆಸ್ ನಾಯಕ ಶ್ರೀ ರಾಘವ ಚೇರಲ್, ಎಸ್…

Read More

ಮಾಜಿ ಸಿ ಎಂ ವಿ.ಎಸ್.ರಿಗೆ ಉಪ್ಪಳದಲ್ಲಿ ಸಂತಾಪ, ಮೌನ ಮೆರವಣಿಗೆ

ಉಪ್ಪಳ : ಹಿರಿಯ ಸಿ..ಪಿ.ಐ(ಎಂ) ಮುಖಂಡ. ಮಾಜಿ ಮುಖ್ಯ ಮಂತ್ರಿ.ವಿ. ಎಸ್.ಅಚ್ಯುತಾನಂದನವರ ನಿಧನಕ್ಕೆ ಸಂತಾಪ ಸೂಚಿಸಿ ಸಿ.ಪಿ.ಐ.(ಎಂ) ಉಪ್ಪಳ ಲೋಕಲ್ ಕಮೀಟಿಯಿಂದ ಉಪ್ಪಳ ದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಏರಿಯಾ ಕಮಿಟಿ ಸದಸ್ಯರಾದ ಸಾದಿಕ್ ಚೆರುಗೋಲಿ ಉದ್ಘಾಟಿಸಿ ಮಾತನಾಡಿದರು.ಇದರ ಅಧ್ಯಕ್ಷತೆ ಯನ್ನು ಲೋಕಲ್ ಕಮೀಟಿ ಸದಸ್ಯ ಉಮೇಶ್ ಶೆಟ್ಟಿ ಬೋಳ್ಳಾರು ವಹಿಸಿದರು. ಉಪ್ಪಳ ಲೋಕಲ್ ಕಮಿಟಿ ಸದಸ್ಯರಾದ ಪ್ರವೀಣ್ ಕಣ್ಣಾಟಿಪರೆ. ಸರೋಜ ಶಾಂತಿಯೋಡು. ಪಾರ್ವತಿ ಬೇಕೂರು. ಅಬ್ದುಲ್ ಅಜೀಜ್ ಉಪ್ಪಳ ಭಾಗವಹಿಸಿದ್ದರು ಸಿ.ಪಿ. ಐ…

Read More

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವತಿಯಿಂದ ಆಟಿಡೊಂಜಿ ದಿನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕಿನ ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಶ್ರೀ ತುಳಸಿ ಜ್ಞಾನವಿಕಾಸ ಕೇಂದ್ರ ವತಿಯಿಂದ ಆಟಿಡೊಂಜಿ ದಿನ ಆಟಿಕೂಟ ಕಾರ್ಯಕ್ರಮ ತರುಣ ಕಲಾವೃಂದ ಪರಕಿಲ್ಲದಲ್ಲಿ ಭಾನುವಾರ ನಡೆಯಿತು . ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಶ್ರೀಮತಿ ದೀಪ ವಾಸು ಉಳಿಯ ಅಧಕ್ಷತೆ ಸ್ಥಾನ ವಹಿಸಿದರು . ಈ ಸಂದರ್ಭದಲ್ಲಿ ಗಡಿನಾಡ ಪ್ರಶಸ್ತಿ ಪಡೆದ ಕವಿ , ಸಾಹಿತಿ , ಶ್ರೀ ರಾಧಾಕೃಷ್ಣ…

Read More

ದೈವಜ್ಞ ಬ್ರಾಹ್ಮಣ ಸಮುದಾಯವನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿರುವುದನ್ನು ಖಂಡಿಸಿ ನ್ಯಾಯ ಒದಗಿಸುವಂತೆ ಶಾಸಕರಿಗೆ ಮನವಿ

ದೈವಜ್ಞ ಬ್ರಾಹ್ಮಣ ಸಮುದಾಯವನ್ನು ಕರ್ನಾಟಕ ಸರಕಾರದ ಶಿಕ್ಷಣದ‌ RTE, ಸ್ಕಾಲರ್ಶಿಪ್ ಇತ್ಯಾದಿಗೆ ಸಂಬಂಧಿಸಿದ SATS ವೆಬ್ ಸೈಟ್ ನಲ್ಲಿ, ಇತರೆ ಹಿಂದುಳಿದ ವರ್ಗ 2ಎ ದಿಂದ ಸಾಮಾನ್ಯ ವರ್ಗಕ್ಕೆ ಸೇರಿಸಿರುವುದು ಅನ್ಯಾಯವಾಗಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ದೈವಜ್ಞ ಬ್ರಾಹ್ಮಣರ ಚಿನ್ನ – ಬೆಳ್ಳಿ ಕೆಲಸಗಾರರ ಸಂಘ (ರಿ.) ದ ಮುಖಂಡರು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಮುದಾಯದ ಮುಖಂಡರ ಅಹವಾಲನ್ನು ಆಲಿಸಿದ ಶಾಸಕರು,…

Read More
error: Content is protected !!