ಮಂಗಳೂರಲ್ಲಿ ಜು.18ರಂದು ‘BNI ಇನ್‌ಸೈಟ್–2026’; ಉದ್ಯಮಿಗಳ ಜ್ಞಾನ-ನೆಟ್‌ವರ್ಕ್‌ಗೆ ವೇದಿಕೆ

ಮಂಗಳೂರು: ಉದ್ಯಮಿಗಳು, ವೃತ್ತಿಪರರು ಹಾಗೂ ವ್ಯಾಪಾರಸ್ಥರ ನಡುವೆ ವ್ಯವಹಾರಿಕ ನೆಟ್‌ವರ್ಕ್‌ ವೃದ್ಧಿಸುವ ಉದ್ದೇಶದಿಂದ ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ (BNI) ಇನ್‌ಸ್ಪೈರ್ ಚಾಪ್ಟರ್ ವತಿಯಿಂದ ‘BNI ಇನ್‌ಸೈಟ್–2026’ ಕಾರ್ಯಕ್ರಮವು ಜುಲೈ 18ರಂದು ಸಂಜೆ 4.30ಕ್ಕೆ ನಗರದ ಅವತಾರ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು BNI ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್. ಶರ್ಮಾ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ವರ್ಷಗಳ ಹಿಂದೆ ಮಂಗಳೂರಿನಲ್ಲಿ BNI ಕಾರ್ಯಾರಂಭಗೊಂಡಿದ್ದು, ಪ್ರಸ್ತುತ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ…

Read More

ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಜತೆ ತುಂಬೆ ಗ್ರೂಪ್ ಒಪ್ಪಂದಯುಎಇಯಲ್ಲಿ ಲಾಂಗ್ವಿಟಿ ವೈದ್ಯಕೀಯ ಶಿಕ್ಷಣಕ್ಕೆ ಹೊಸ ಅಧ್ಯಾಯ

ಅಜ್ಮಾನ್: ಸ್ವಿಟ್ಸರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (GCLS) ಹಾಗೂ ತುಂಬೆ ಗ್ರೂಪ್ ನಡುವೆ ತಿಳುವಳಿಕೆ ಒಪ್ಪಂದ (MoU)ಕ್ಕೆ ಸಹಿ ಹಾಕಲಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಲಾಂಗ್ವಿಟಿ ವೈದ್ಯಕೀಯ, ಆರೋಗ್ಯಕರ ವಯಸ್ಸಾಗುವಿಕೆ, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ಪ್ರಿಸಿಷನ್ ಹೆಲ್ತ್ ಕ್ಷೇತ್ರಗಳಲ್ಲಿ ರಚನಾತ್ಮಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಒಪ್ಪಂದದಡಿ ಹೊಸದಾಗಿ ಸ್ಥಾಪನೆಯಾಗಿರುವ ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್ ಮೂಲಕ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಯುಎಇಯಲ್ಲಿ…

Read More

ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕ್ 22ನೇ ಶಾಖೆ ಉದ್ಘಾಟನೆ

ಮಂಗಳೂರು, ಜೂ. 28: ಗ್ರಾಹಕರ ಸರ್ವತೋಮುಖ ಅಭಿವೃದ್ಧಿ ಹಾಗೂ ಸಮುದಾಯದ ಪ್ರಗತಿಯೇ ಎಂಸಿಸಿ ಬ್ಯಾಂಕ್‌ನ ಮುಖ್ಯ ಧ್ಯೇಯವಾಗಿದ್ದು, ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು. ದೇರಳಕಟ್ಟೆಯ ಫಾದರ್ ಮುಲ್ಲರ್ ಕಟ್ಟಡ ಸಂಕೀರ್ಣದಲ್ಲಿ ಎಂಸಿಸಿ ಬ್ಯಾಂಕ್‌ನ 22ನೇ ಶಾಖೆ ಹಾಗೂ 16ನೇ ಎಟಿಎಂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 114 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್, 2025-26ನೇ ಹಣಕಾಸು ವರ್ಷದಲ್ಲಿ 22.89 ಶೇಕಡಾ…

Read More

ಕುದ್ಮುಲ್ ರಂಗರಾವ್ ರವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು :- ಶಾಸಕ ಕಾಮತ್

ದಲಿತೋದ್ಧಾರಕ, ಸಾಮಾಜಿಕ ಸುಧಾರಣೆಯ ಹರಿಕಾರ, ಕುದ್ಮುಲ್ ರಂಗರಾವ್ ರವರ ಜನ್ಮದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಎಸ್ಸಿ ಮೋರ್ಚಾ ವತಿಯಿಂದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಸ್ಮಾರಕಕ್ಕೆ ಪುಷ್ಪ ನಮನಗಳ ಸಹಿತ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಪೂಜನೀಯ ಕುದ್ಮುಲ್ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿಗಳು. ಭಿಕ್ಷೆ ಬೇಡಿಯಾದರೂ ದಲಿತ ಬಂಧುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತೇನೆ ಎಂಬ ಅಚಲ ವಿಶ್ವಾಸ ಹೊಂದಿದ್ದವರು….

Read More

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್‌ಗೆ ಅಂತಿಮ ವಿದಾಯ; ಕಾಶಿಪಟ್ಣದಲ್ಲಿ ದಫನ

ಮೂಡುಬಿದಿರೆ, ಜೂನ್ 25: ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ದಫನ ಕ್ರಿಯೆಯು ಇಂದು ಮೂಡುಬಿದಿರೆ ಸಮೀಪದ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ಆವರಣದಲ್ಲಿ ನೆರವೇರಿತು. ಕಾಸರಗೋಡಿನಿಂದ ಇಂದು ಮುಂಜಾನೆ ಮೃತದೇಹವನ್ನು ದಾರುನ್ನೂರ್ ಎಜುಕೇಶನ್ ಸೆಂಟರ್‌ಗೆ ತರಲಾಗಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಅಂತಿಮ ದಫನ ಕಾರ್ಯ ನಡೆಸಲಾಯಿತು. ಖಾಝಿಯವರ ಅಂತಿಮ ದರ್ಶನ ಮತ್ತು ದಫನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್,…

Read More

ಪ್ರಕೃತಿ ಸಂರಕ್ಷಣೆ ಅಲ್ಲ ಪ್ರಕೃತಿ ಆರಾಧನೆ ಭಾರತದ ಮಾದರಿ : ಎಂ.ಎಲ್. ಅಶ್ವಿನಿ

ನೀಲೇಶ್ವರ : ಪ್ರಕೃತಿಯ ವಿದ್ಯಮಾನಗಳ ಮುಂದೆ ಮಾನವನು ಅತ್ಯಲ್ಪನಾಗಿದ್ದಾನೆ ಮತ್ತು ಪ್ರಕೃತಿಯನ್ನು ಸಂರಕ್ಷಿಸುವುದಲ್ಲ, ಪ್ರಕೃತಿಯನ್ನು ಆರಾಧಿಸುವುದೇ ಭಾರತವು ಜಗತ್ತಿಗೆ ತೋರಿಸಿಕೊಟ್ಟ ಮಾದರಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಕಡಿಞ್ಞಿಮೂಲೆಯಲ್ಲಿ ಮ್ಯಾಂಗ್ರೋವ್ ನರ್ಸರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮ್ಯಾಂಗ್ರೋವ್ ವನಗಳ ಪ್ರಸ್ತುತತೆಯ ಬಗ್ಗೆ ಕಳೆದ ಕೆಲವು ದಶಕಗಳಿಂದ ಕೇರಳವು ಚರ್ಚಿಸುತ್ತಿದೆ. ಜೈವಿಕ ವೈವಿಧ್ಯತೆಯ ಉಗ್ರಾಣವಾಗಿರುವ ಮ್ಯಾಂಗ್ರೋವ್ ವನಗಳು ಕರಾವಳಿ ಸಂರಕ್ಷಣೆಗೂ ಸಹಕಾರಿಯಾಗಲಿವೆ ಎಂಬುದು ಸಾಬೀತಾಗಿದೆ. ಲಕ್ಷಾಂತರ ಮ್ಯಾಂಗ್ರೋವ್ ಸಸಿಗಳನ್ನು ನೆಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕಡಿಞ್ಞಿಮೂಲೆಯ ಪಿ.ವಿ….

Read More

ಅಮೇರಿಕಾ ನಿವಾಸಿಯಿಂದ ವಿಠೋಭ ದೇವಸ್ಥಾನದಲ್ಲಿ ಭರತನಾಟ್ಯ ಸೇವೆ

ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಅಧಿಕಮಾಸದ ಪರಮ ಏಕಾದಶಿಯಂದು ಅಮೇರಿಕಾದ ಬೋಸ್ಟನ್ ನಿವಾಸಿ ದಿಯಾ ಶೆಣೈಯವರು ದೇವರ ಸನ್ನಿಧಿಯಲ್ಲಿ ಭರತನಾಟ್ಯ ಸೇವೆಯನ್ನು ಸಮರ್ಪಿಸಿದರು. ಭಕ್ತಾದಿಯಾಗಿ ಹೆತ್ತವರೊಡನೆ ದೇವಳಕ್ಕೆ ಭೇಟಿ ನೀಡಿದ ದಿಯಾ ಭಕ್ತಿಭಾವಪರವಶರಾಗಿ ತಮ್ಮ ಸೇವಾ ಬಯಕೆಯನ್ನು ಈಡೇರಿಸಲು ಆಡಳಿತ ಮಂಡಳಿಯ ಬಳಿ ವಿನಂತಿಸಿದರು. ಬಳಿಕ ಭರತನಾಟ್ಯದ ವಸ್ತ್ರ ಧರಿಸಿ ತಮ್ಮ ಮನದಿಚ್ಚೆಯನ್ನು ಈಡೇರಿಸಿಕೊಂಡರು. ಅಮೇರಿಕಾದಲ್ಲಿದ್ದರೂ ಭಾರತದ ನೃತ್ಯ ಪ್ರಾಕಾರವನ್ನು ಅಭ್ಯಸಿಸಿ ಬರುತ್ತಿರುವ ದಿಯಾ ಅವರ ಭರತನಾಟ್ಯವನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ದೇವಳದಲ್ಲಿ ಇಡೀ ದಿನ…

Read More

ಮಳೆಗಾಲದ ಕೃತಕ ನೆರೆಗೆ ಕಡಿವಾಣ: ಪಂಪ್‌ವೆಲ್, ಪಡೀಲ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತದ ಕ್ರಮ

ಮಂಗಳೂರು, ಜೂನ್ 5: ಮಳೆಗಾಲ ಆರಂಭವಾದಾಗ ಮಂಗಳೂರು ನಗರವನ್ನು ವರ್ಷಂಪ್ರತಿ ಕಾಡುವ ಕೃತಕ ನೆರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಪಂಪ್‌ವೆಲ್ ಜಂಕ್ಷನ್ ಹಾಗೂ ಪಡೀಲ್ ರೈಲ್ವೆ ಅಂಡರ್‌ಪಾಸ್ ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಉಂಟಾಗುವ ತೊಂದರೆ ನಿವಾರಣೆಗೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಪಂಪ್‌ವೆಲ್‌ನಲ್ಲಿ ಭಾರೀ ಮಳೆಯ ಸಂದರ್ಭ ಫ್ಲೈಓವರ್ ಕೆಳಭಾಗದ ರಸ್ತೆ ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯವಾಗಿದೆ. ಹಲವು ಗಂಟೆಗಳ…

Read More

ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಮರಕಡ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಮಂಗಳೂರು, ದಕ್ಷಿಣ ಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ಮತ್ತು ದ.ಕ.ಜಿ.ಪಂ.ಸ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮರಕಡ, ಕುಂಜತ್ತಬೈಲ್ ಇಲ್ಲಿ 2026-27 ನೇ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಮತ್ತು ನೂತನವಾಗಿ ಆರಂಭಿಸಿದ ಎಲ್.ಕೆ.ಜಿ ತರಗತಿಯ ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಮಂಗಳೂರು ಉತ್ತರ…

Read More

ಅಡ್ಯಾರ್ ಗಾರ್ಡನ್‌ನಲ್ಲಿ ‘ಪಟ್ಲ ಸಂಭ್ರಮ-2026’ ವೈಭವ; ವಿದ್ಯಾರ್ಥಿವೇತನ, ಸನ್ಮಾನ ಸಮಾರಂಭಕ್ಕೆ ಮೆರುಗು

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ಪಟ್ಲ ಸಂಭ್ರಮ-2026’, ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ವೈಭವದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಉದ್ಘಾಟಿಸಿ ಮಾತನಾಡಿ, ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ಸಾವಿರ ರೂ ವಿದ್ಯಾರ್ಥಿವೇತನ, ಕಲಾವಿದರಿಗಾಗಿ ವಿಮಾ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಯಕ್ಷಧ್ರುವ ಫೌಂಡೇಶನ್ ಯಶಸ್ವಿಯಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. “ದಾನ ಮಾಡುವ ಸಂಕಲ್ಪ ಇದ್ದರೆ ದೇವರ…

Read More
error: Content is protected !!