SURESH KUMAR MANGALPADY

SURESH KUMAR MANGALPADY

ಕೇರಳ: ರಾಜಕೀಯ ಪಕ್ಷಗಳ ಮುಂದಿನ ಚಿತ್ತ ಸ್ಥಳೀಯಾಡಳಿತ ಚುನಾವಣೆಯತ್ತ.

ತಿರುವನಂತಪುರಂ : 2026 ರ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ಸ್ಥಳೀಯಾಡಳಿತ ಚುನಾವಣೆಯು ಬಹುತೇಕ ಒಕ್ಟೋಬರ್ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು,ತ್ರೀ ಸ್ಥರ ಪಂಚಾಯತುಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಲು ಎಲ್ಲ ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿದೆ. ರಾಜ್ಯದ ಒಟ್ಟು 941 ಗ್ರಾಮ ಪಂಚಾಯತ್ , 152 ಬ್ಲಾಕ್ ಪಂಚಾಯತ್ ,14 ಜಿಲ್ಲಾ ಪಂಚಾಯತ್ ,87 ಮುನ್ಸಿಪಾಲಿಟಿ ಮತ್ತು 6 ಕಾರ್ಪೋರೇಶನ್ ಗೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ನಡೆದ ನಿಲಂಬೂರ್ ಉಪಚುನಾವಣೆಯ ನಂತರ ಎಲ್ಲಾ ರಾಜಕೀಯ ಪಕ್ಷ…

Read More

ವಿಶ್ವ ಮಾದಕ ವಸ್ತು ವಿರೋಧಿ ದಿನ.

ವೈಟ್ನರ್ ಬಳಸದಿರಿ…ಇದು ಹಾನಿಕಾರಕ. ವಿಶ್ವ ಮಾನವ ಕುಲಕ್ಕೆ ಮಾರಕವಾಗಿ ಪರಿಣಮಿಸುವ ಮಾದಕ ವಸ್ತುಗಳನ್ನು ಸಂಪೂರ್ಣ ತಡೆಗಟ್ಟಿ ಮಾದಕ ವ್ಯಸನ ದಿಂದ ಮುಕ್ತರಾಗಿ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ” ನಶಾ ಮುಕ್ತ್ ಭಾರತ್” ಯೋಜನೆಯ ಅಂಗವಾಗಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟಕ್ಕೆ ಕಠಿಣ ನಿರ್ಬಂಧಗಳನ್ನು ಹೇರಬೇಕಾದ ಅಗತ್ಯವಿದೆ. ಇತ್ತೀಚಿನದಿನಗಳಲ್ಲಿ ವಿದ್ಯಾರ್ಥಿಗಳು ಸಹಿತ ನಾವೆಲ್ಲರೂ ಹೆಚ್ಚಾಗಿ ಉಪಯೋಗಿಸುವ ವೈಟ್ನರ್ ಪೀಡ್ ತೀರಾ ಹಾನಿಕಾರಕವಾಗಿದ್ದು ಇದರ ಉಪಯೋಗಕ್ಕೆ ನಿಷೇಧ ಹೇರಬೇಕಾದ ಅಗತ್ಯವಿದೆ. ಅಪ್ಪಿ ತಪ್ಪಿ ಇದನ್ನು ಸೇವಿಸಿದ್ದಲ್ಲಿ ಇದು ಮೆದುಳಿನ…

Read More

ವಯನಾಡು ಚೂರುಲ್ ಮಲೆಯಲ್ಲಿ ಮತ್ತೆ ವರುಣನ ರುದ್ರ ನರ್ತನ.ಶಾಶ್ವತ ಪರಿಹಾರಕ್ಕೆ ನಾಗರಿಕರ ಆಗ್ರಹ

ತಿರುವನಂತಪುರಂ : ಕಳೆದ ಬಾರಿ ಸುರಿದ ಕುಂಭ ದ್ರೋಣ ಮಳೆಗೆ ಇಡೀ ಮನುಕುಲವನ್ನೇ ಹೃದಯ ವಿದ್ರಾವಾಹಕ ಸನ್ನಿವೇಶಕ್ಕೆ ತಂದೊಡ್ಡಿದ್ದ ವಯನಾಡು ಜಿಲ್ಲೆಯ ಚೂರುಲ್ ಪೇಟೆಯ ಗುಡ್ಡ ಜರಿತ ಪ್ರದೇಶದಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಮತ್ತೆ ಅದೇ ಸ್ಥಿತಿ ಉಂಟಾಗಿದ್ದು ,ಶಾಶ್ವತ ಪರಿಹಾರಕ್ಕೆ ನಾಗರಿಕರು ಸರಕಾರಕ್ಕೆ ಒತ್ತಾಯ ಪಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಯಿಂದ ಅಪಾರವಾದ ನಾಶ ನಷ್ಟ ಉಂಟಾಗಿದ್ದು ,ಸ್ಥಳೀಯರನ್ನು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಸ್ಥಳಕ್ಕಾಗಮಿಸಿದ ದುರಂತ ಪರಿಹಾರ ಸ್ಪೆಷಲ್ ಆಫೀಸರ್ ಹಾಗೂ ಜಿಲ್ಲಾಧಿಕಾರಿಯವರಲ್ಲಿ…

Read More

ಅನ್ವರ್ ಯು ಡಿ ಎಫ್ ಪ್ರವೇಶ ಕ್ಕೆ ಹಸಿರು ನಿಶಾನೆ.

‘ಯಾವ ಕೀಲಿ ಕೈ ಯಿಂದ, ಬಾಗಿಲು ಮುಚ್ಚಲಾಗಿದೆಯೋ, ಅದೇ ಕೀಲಿ ಕೈಯಿಂದ ಬಾಗಿಲು ತೆರೆಯಲು ಸಾಧ್ಯವಿದೆ”: ಸನ್ನಿ ಜೋಸೆಫ್. ತಿರುವನಂತಪುರಂ. ತೀವ್ರ ಕುತೂಹಲ ಕೆರಳಿಸಿದ ನಿಲಂಬುರ್ ಉಪಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ದ್ರುವೀಕರಣ ಆಗುವ ಸಾಧ್ಯತೆಗಳಿದ್ದು ಮುಂಬರುವ ಸ್ಥಳೀಯಾಡಳಿತ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಪಿ ಬಿ ಅನ್ವರ್ ಪಡೆದ ಮತಗಳಿಕೆಯ ಅಂಕಿ ಅಂಶಗಳು ನೂತನ ರಾಜಕೀಯ ದ್ರುವೀಕರಣಕ್ಕೆ ಕಾರಣವಾಗುತ್ತಿದೆ. ಅನ್ವರ್ ರನ್ನು UDFತೆಕ್ಕೆಗೆ ಸೇರಿಸಿಕೊಂಡು ಮುಂಬರುವ…

Read More

ಮತ್ತೊಂದು ತಾಂತ್ರಿಕ ನಿಯೋಗಕ್ಕೆ ಶಶಿ ತರೂರ್, ಲಕ್ಷ್ಮಣ ರೇಖೆ ದಾಟಿದರೆ ಶಿಸ್ತು ಕ್ರಮ: ಕೆ. ಸಿ ಎಚ್ಚರಿಕೆ

ತಿರುವನಂತಪುರ : ಆಪರೇಷನ್ ಸಿಂಧೂರ್ ನಂತರ ವಿದೇಶ ರಾಜ್ಯಗಳಿಗೆ ಭಾರತೀಯ ನಿಲುವುಗಳನ್ನು ಕೇಂದ್ರ ಸರಕಾರ ನಿಯೋಜಿಸಿದ ರಾಜ ತಾಂತ್ರಿಕ ನಿಯೋಗ ವು ವಿದೇಶ ರಾಜ್ಯಗಳ ಪರ್ಯಟನೆ ಮಾಡಿ ತಮ್ಮ ಯುದ್ಧ ನೀತಿಯ ಬಗ್ಗೆ ವಿವರಿಸಿ ಯಶಸ್ವಿಯಾಗಿ ಹಿಂತಿರುಗಿದ ಬಳಿಕ ಮತ್ತೊಮ್ಮೆ ಇದೇ ನಿಯೋಗ ವಿಶ್ವ ರಾಷ್ಟ್ರಗಳ ಪರ್ಯಟನೆ ಮಾಡುವ ಯೋಜನೆ ಕೇಂದ್ರ ಸರಕಾರದ ಚಿಂತನೆಯಲ್ಲಿದೆ. ಈ ನಿಯೋಗವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರ್ವಹಿಸಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಇದು ಇರಿಸುಮುರಿಸು ಉಂಟು ಮಾಡಿದೆ. ಮೊದಲಿನ ನಿಯೋಗದಲ್ಲಿ ತರೂರ್…

Read More

ವಿಶ್ವಕ್ಕೆ ಶಾಂತಿಯ ಸಂದೇಶ ಹಾಗೂ ಮಾನವೀಯತೆಯ ಬದುಕಿಗೆ ಯೋಗ ಪೂರಕವಾಗಿದೆ : ಪ್ರಧಾನಿ ನರೇಂದ್ರ ಮೋದಿ

ತಿರುವನಂತಪುರ : ಯೋಗ ಜಾತಿ ಮತ ಪಂಗಡಗಳನ್ನು ಮೀರಿ ಸರ್ವರ ಬದುಕಿಗೂ ಮಾನವೀಯ ಮೌಲ್ಯಗಳನ್ನು ತಿಳಿಸುವ ಜೊತೆಗೆ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಸಂಘರ್ಷ ಭರಿತ ಜಗತ್ತು ಮತ್ತು ಬದುಕಿಗೆ ಯೋಗ ಜೀವನ ಶಾಂತಿಯನ್ನು ನೀಡಿದೆ. ಯೋಗದಿಂದ ಮಾನವೀಯತೆ ಮತ್ತು ಶಾಂತಿಯ ಆರಂಭವಾಗಿದೆ, ಯೋಗವು ಇಂದು ಜಗತ್ತನ್ನೇ ಒಂದುಗೂಡಿಸಿದೆ. ಕಳೆದ 11 ವರ್ಷಗಳಿಂದ ಯೋಗ…

Read More

ಸಚಿವ ಶಿವನ್ ಕುಟ್ಟಿ ಮಹಿಳಾವಿರೋಧಿ, ಭಾರತಾಂಬೆಯನ್ನು ಕೇಸರಿ ಧ್ವಜ ಹಿಡಿದ ಮಹಿಳೆ ಎಂಬ ಹೇಳಿಕೆ ಸಂಕುಚಿತ ಚಿಂತನೆ : ಎಮ್. ಎಲ್ ಅಶ್ವಿನಿ

ಕಾಸರಗೋಡು : ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರಇರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಶಿಕ್ಷಣ ಸಚಿವ ಶಿವನ ಕುಟ್ಟಿ ಅವರ ನಡೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ತೀವ್ರವಾಗಿ ಖಂಡಿಸಿದ್ದಾರೆ. ಕಮ್ಯುನಿಸ್ಟ್ ಆಶಯಕ್ಕೆ ಭಾರತೀಯ ಮಾನ ಬಿಂದುಗಳನ್ನು ಗೌರವಿಸಲಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದು ಕಮ್ಯೂನಿಸ್ಟರ ಸಂಕುಚಿತ ಚಿಂತನೆಯ ಪ್ರತೀಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತಾಂಬೆಯ ಚಿತ್ರವನ್ನು ಕೇಸರಿ ಧ್ವಜ ಹಿಡಿದ ವನಿತೆ ಎಂದು…

Read More

ಕೇರಳ ಸರಕಾರ V/S ರಾಜ್ಯಪಾಲರು.ತಾರಕಕ್ಕೇರಿದ ಶೀತಲ ಸಮರ. ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮಾರಕ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಲ್ಲಿ ವ್ಯತ್ಯಸ್ತವಾದ ರಾಜಕೀಯ ಪಕ್ಷ ಅಥವಾ ಒಕ್ಕೂಟಗಳು ಅಧಿಕಾರ ನಡೆಸುವಾಗ ರಾಜ್ಯಪಾಲರ ಅಧಿಕಾರ ಕೇಂದ್ರವಾದ ರಾಜ್ಯಭವನವು ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿತವಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾದರೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.ಸಂವಿಧಾನದ ಪ್ರಕಾರ ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಅಧಿಕಾರ ಚಲಾಯಿಸಬೇಕಿದ್ದು ರಾಜ್ಯವೊಂದದರ ಪ್ರಧಾನ ಆಡಳಿತ ಅಧಿಕಾರಿಯಾಗಿದ್ದಾರೆ. ಕೇರಳ ದಲ್ಲಿ ರಾಜ್ಯ ಸರ್ಕಾರ v/ s ರಾಜ್ಯಪಾಲರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೇರಳದಲ್ಲಿ ರಾಜ್ಯಪಾಲರಿಗೂ ರಾಜ್ಯ ಸರಕಾರಕ್ಕೂ ಶೀತಲ ಸಮರ ಏರ್ಪಟ್ಟಿದ್ದು ಅದು…

Read More

ನಿಲಂಬೂರ್ ಉಪ ಚುನಾವಣೆ : ಮತದಾನ ಪೂರ್ಣ. ಶೇ. 72ರಷ್ಟು ಮತದಾರರು ಹಕ್ಕು ಚಲಾವಣೆ.ಮತಏಣಿಕೆ 23 ರಂದು

ತಿರುವನಂತಪುರಂ :ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಯ ಸೆಮಿಫೈನಲ್ ಎಂದೇ ಬಿಂಬಿತ ವಾಗಿ ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ನಿಲಂಬೂರ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಅಂತೂ ಇಂತೂ ಪೂರ್ತಿ ಗೊಂಡಿದ್ದು ಶೇ. 72 ರಷ್ಟು ಮತದಾರರು ತನ್ನ ಹಕ್ಕು ಪ್ರತಿಪಾದಿಸಿದ್ದಾರೆ. ಇಷ್ಟು ಸಂಖ್ಯೆ ಯಲ್ಲಿ ಮತದಾನ ವಾಗಿರುವುದು ನಮಗೆ ಗೆಲುವು ಖಚಿತ ವೆಂದು ಎಲ್ಲಾ ಅಭ್ಯರ್ಥಿ ಗಳ ನಂಬಿಕೆ ಯಾಗಿದೆ.ಯು ಡಿ ಎಫ್ ನಿಂದ ಆರ್ಯಾಡನ್ ಸೌಕತ್ ಎಲ್ ಡಿ ಎಫ್ ನಿಂದ ಎಂ…

Read More

ಮತದಾನದ ದಿನವೇ ಬೀದಿಗೆ ಬಂದ ಕಾಂಗ್ರೆಸ್ ಅಸಮಾಧಾನದ ಜ್ವಾಲೆ.ಪ್ರಚಾರಕ್ಕೆ ಆಮಂತ್ರಣ ನೀಡಿಲ್ಲ , ಕನಿಷ್ಠ ಪಕ್ಷ ಮಿಸ್ ಕಾಲ್ ನೀಡಿಲ್ಲ ತರೂರ್ ಬೇಸರ

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಳಂಬೂರ್ ವಿಧಾನಸಭಾ ಉಪಚುನಾವಣೆಯ ಮತದಾನವು ಮಂದಗತಿಯಲ್ಲಿ ಸಾಗುತ್ತಿದ್ದು ಈ ಮಧ್ಯೆ ಕಾಂಗ್ರೆಸ್ ಪಕ್ಷದ ಅಂತ:ಕಲಹ ಬೀದಿಗೆ ಬಂದಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಆರ್ಯಾಡನ್ ಸೌಕತ್ ಪರ ಕಾಂಗ್ರೆಸ್ ಸಂಸದ ಶಶಿತರೂರ್ ಪ್ರಚಾರಕ್ಕೆ ಬಂದಿಲ್ಲ ಎಂಬ ಆರೋಪ ಅವರ ಮೇಲಿದೆ. ಈ ಬಗ್ಗೆ ಸ್ವಪಕ್ಷಯ ರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತರೂರ್ ಪ್ರಚಾರಕ್ಕೆ ಬರುವಂತೆ ತನಗೆ ಆಮಂತ್ರಣ ನೀಡಿಲ್ಲವೆಂದು ಪಕ್ಷದ ನಾಯಕರು ಕನಿಷ್ಠಪಕ್ಷ ಒಂದು ಮಿಸ್ ಕಾಲ್ ನೀಡಿಲ್ಲವೆಂದು ಹೇಳಿದ್ದಾರೆ….

Read More
error: Content is protected !!