SURESH KUMAR MANGALPADY

SURESH KUMAR MANGALPADY

2026 ರ ವಿಧಾನ ಸಭಾ ಚುನಾವಣೆ ಯ ದಿಕ್ಸೂಚಿಯಾದ ತ್ರಿಸ್ತರ ಪಂಚಾಯತ್ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಆರಂಭ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತರಾಗಿರುವ ಸ್ಥಳೀಯಾಡಳಿತ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತನ್ನದೇ ಆದ ಕಸರತ್ತು ಆರಂಭಿಸಿದ್ದು ತ್ರಿಸ್ತರ ಪಂಚಾಯತಿಗಳಲ್ಲಿ, ನಗರ ಸಭೆ ಮುನ್ಸಿಪಾಲಿಟಿಗಳಲ್ಲಿ. ತನ್ನದೇ ಆದ ಬಾಹುಬಲ್ಯ ವನ್ನು ಸ್ಥಾಪಿಸಿ 2026 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದೆ. ಈಗಾಗಲೇ ವಾರ್ಡ್ ವಿಭಜನೆ ಪ್ರಕ್ರಿಯೆ ಅಂತಿಮಗೊಂಡಿದ್ದು 941 ಪಂಚಾಯತಿಗಳ ವಾರ್ಡ್ ವಿಭಜನೆ ಮಾಡಿ ಇದೀಗ ವಾರ್ಡ್ ಗಳ ಸಂಖ್ಯೆ 15962 ರಿಂದ 17337 ಕ್ಕೆ ಹೆಚ್ಚಳಗೊಂಡಿದೆ. ಅಂದರೆ…

Read More

ವಿನೂತನ ಕಾರ್ಯಯೋಜನೆ ಯೊಂದಿಗೆ ನೂತನ ಶೈಕ್ಷಣಿಕ ವರ್ಷ.

2025-26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ನೈತಿಕತೆ ಮತ್ತು ಸನ್ನಡತೆಯ ಶಿಕ್ಷಣಕ್ಕೆ ಸರಕಾರ ಮುಂದಾಗಿದ್ದು ನೂತನ ಕಾರ್ಯ ಯೋಜನೆ ಯನ್ನು ಜಾರಿಗೆ ತರಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಾಗಿ ಶಾಲಾ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಡ್ರಗ್ಸ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಹೆಚ್ಚಾಗಿ ಬಲಿಯಾಗಿ ಆದರ್ಶವಾಗಿರಬೇಕಾದ ವಯಸ್ಸಿನಲ್ಲಿ ತನ್ನ ಜೀವನವನ್ನೇ ಬಲಿ ಕೊಟ್ಟ ಅದೆಷ್ಟೋ ಪ್ರಸಂಗಗಳು ನಡೆದಿದೆ.ಈ ನಿಟ್ಟಿನಲ್ಲಿ 2025 -26 ನೇ ಸಾಲಿನ ನೂತನ ಶೈಕ್ಷಣಿಕ ವರ್ಷದಲ್ಲಿ ಕೇರಳ ಶಿಕ್ಷಣ ಇಲಾಖೆಯೂ ಇದೆ…

Read More

ತುಳುಮಣ್ಣಿನ ಸಂಸ್ಕೃತಿಯ ಜೀವಾಳ.ಪತ್ತನಾಜೆ.

ಬೆಮ್ಮೆರೆ ಸೃಷ್ಟಿಯ ತುಳು ನಾಡಿನ ಕೆಲವು ಸಂಪ್ರದಾಯ ಆಚರಣೆಗಳು ಈ ಮಣ್ಣಿನ ಸತ್ಯವನ್ನು ಸತ್ವವನ್ನು ಇನ್ನೂ ಜೀವಂತವಾಗಿರಿಸಿದೆ ಎಂದರೆ ತಪ್ಪಾಗಲಾರದು ಇಂತಹ ಆಚರಣೆಗಳು ನಮ್ಮ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೆ ತಿಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇಂತಹ ಆಚರಣೆಯಲ್ಲಿ ಕೆಲವು ವೈಜ್ಞಾನಿಕ ಸತ್ಯವೂ ಅಡಗಿರುತ್ತದೆ.ಆಟಿಡೊಂಜಿ ಕೂಟ, ಪತ್ತನಾಜೆ, ಕೇಡ್ಡಸ, ಕುರಲ್ ಪರ್ಬ. ಮುಂತಾದ ಆಚರಣೆಗಳು ಸಂಪ್ರದಾಯದ ತಲಹದಿಯಲ್ಲಿ ಹಾದಿ ತಪ್ಪದೇ ಆಚರಿಸಲ್ಪಡುವ ಅಗತ್ಯವಿದೆ. ಇಂತಹ ಸಂಪ್ರದಾಯದ ಆಚರಣೆಯಲ್ಲಿ ಪ್ರಮುಖವಾದ ಒಂದು ಆಚರಣೆಯೇ ‘ ಪತ್ತನಾಜೆ’. ಈ ಆಚರಣೆಯು ತುಳುವಿನ ಬೆಷ್ಯ…

Read More

ಸ್ಥಳೀಯಾಡಳಿತ ಚುನಾವಣೆ:ಯುವಕರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಆಲೋಚನೆ.

ಕಾಸರಗೋಡು : ಮುಂಬರುವ ತ್ರಿಸ್ತರ ಪಂಚಾಯತಿ ಚುನಾವಣೆಯಲ್ಲಿ ಯುವ ಸಮೂಹಕ್ಕೆ ಆದ್ಯತೆ ನೀಡಿ ಪಕ್ಷದ ಪುನರ್ ಸಂಘಟನೆ ಮಾಡಿ ಎಲ್ಲಾ ಕಡೆ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಪಕ್ಷ ಪ್ರತ್ಯೇಕ ಕಾರ್ಯಯೋಜನೆಯನ್ನು ಮಾಡಿದೆ. ತಳಮಟ್ಟದಿಂದಲೇ ಪಕ್ಷವನ್ನು ಪುನರ್ ಸಂಘಟಿಸಿ ಚುನಾವಣೆ ಎದುರಿಸಲು ಪ್ರದೇಶ್ ಕಾಂಗ್ರೆಸ್ ಸಮಿತಿಯ ನೂತನ ಸಮಿತಿ ನಿರ್ಧರಿಸಿದೆ. ಇದರ ಅಂಗವಾಗಿ ಕೆಪಿಸಿಸಿಯ ಉಪಾಧ್ಯಕ್ಷರು ಸಹಿತ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೂತನ ನೇಮಕಾತಿ ಮಾಡುವ ಬಗ್ಗೆ ಪಕ್ಷ ಚಿಂತಿಸಿದೆ. ಕಾಸರಗೋಡು ಸಹಿತ ಎಂಟು ಜಿಲ್ಲೆಗಳಲ್ಲಿ…

Read More

ಧ್ವಜಾರೋಹಣದೊಂದಿಗೆ ನಾಂದಿಯಾದ ಉದ್ಯಾವರ ಮಾಡ ಜಾತ್ರಾ ಆಯನ.

ಮಂಜೇಶ್ವರ. ಇತಿbಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಟಾ ರ್ ಕ್ಷೇತ್ರದ ವರ್ಷಾವಧಿ ಉತ್ಸವ ಮತ್ತು ಐತಿಹಾಸಿಕ ಬಂಡಿ ಉತ್ಸವದ ಆಯನವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ನಿನ್ನೆ ರಾತ್ರಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿಗಳು, ಕ್ಷೇತ್ರದ ಆಚಾರ ಕೋಲಪಟ್ಟವರು, ಗಡಿ ಪ್ರಧಾನರು, ಗುರಿಕಾರರು, ಹತ್ತು ಸಮಸ್ತರು, ಆಡಳಿತ ಸಮಿತಿ ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಧಾರ್ಮಿಕತೆಯೊಂದಿಗೆ ಮತಸೌಹಾರ್ದತೆಗೆ ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರದಲ್ಲಿ ಮೇ 14…

Read More

ಪಳ್ಳಿಕೆರೆ ದೇವರ ಮನೆ ಶ್ರೀ ರವಳನಾಥ ಅಮ್ಮನವರ ಮಹಿಷಾ ಮರ್ದಿನಿ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಚಂಡಿಕಾಯಾಗ ಪೂರ್ಣ.

ಕಾಸರಗೋಡಿನ ಪಳ್ಳಿಕೆರೆ ಶಕ್ತಿನಗರ ದೇವರಮನೆ ಶ್ರೀ ರವಳನಾಥ ಅಮ್ಮನವರು ಮಹಿಷಮರ್ದಿನೀ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದಲ್ಲಿ ಬ್ರಮ್ಮಕಲಶೋತ್ಸವ ಮತ್ತು ಸಹಸ್ರ ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಂದ ಬ್ರಮ್ಮ ಶ್ರೀ ಕುಂಟಾರು ಶ್ರೀ ರವೀಶ್ ತಂತ್ರಿ ಗಳ ನೇತೃತ್ವ ದಲ್ಲಿ ಸಂಪನ್ನ ಗೊಂಡಿತು. ಮೇ 1 ರ ಗುರುವಾರ ಬೆಳಿಗ್ಗೆಗಣಪತಿ ಹೋಮದ ನಂತರ ವೃಷಭ ಲಗ್ನ ದಲ್ಲಿ ಶ್ರೀ ದೇವರಿಗೆ ಬ್ರಮ್ಮಕಲಾಶಭಿಷೇಕ ನಡೆಯಿತು.ಮೇ 2 ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ವಿವಿಧ…

Read More

“ಭಾವೈಕ್ಯತೆಯ ಕೊಂಡಿಯ0ತಿರುವ ಉದ್ಯಾವರ ಜಾತ್ರೆಗೆ ಇಂದು ಕೊಡಿ”

ಕಾಸರಗೋಡು ಜಿಲ್ಲೆಯ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಹಿಂದೂ ಮುಸ್ಲಿಂ ಭಾವೈಕತೆಗೆ ದೇಶದಲ್ಲೇ ಗಮನ ಸೆಳೆದ ಶೃದ್ಧಾ ಕೇಂದ್ರವಾಗಿದೆ. ಇಲ್ಲಿನ ಮಹಿಮೆಯ ರೋಚಕ ಕಥೆಗಳು ಭಾವುಕರನ್ನು ತಲೆತೂಗಿಸುವಷ್ಟು ಆಕರ್ಷಿತವಾಗಿದೆ.ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಠರನ್ನು ರಕ್ಷಿಸಲು ಶ್ರೀಮನ್ ನಾರಾಯಣ ದೇವರು ದೇವಲೋಕದಿಂದ ಅಣ್ಣ ಮತ್ತು ತಮ್ಮ ದೈವರನ್ನು ಕೊರಳು ತುಂಬ ಮಲ್ಲಿಗೆಯನ್ನು ಸೊಂಟ ತುಂಬಾ ಕೇದಗೆ ಹೂವಿನಲ್ಲೂ ಏಳೇಳು ಕಡಲ ಮಧ್ಯೆ ಇರುವ ಹಾಲಿನ ಕಡಲಿನಲ್ಲಿ ಸೃಷ್ಟಿಸಿ ಮಾಯದ ಹಡಗಿನಲ್ಲಿ ವೇಣೂರಿಗೆ…

Read More
error: Content is protected !!