ಶೀಘ್ರ ಕಲ್ಯಾಣ ಪ್ರಾಪ್ತಿ ಗೆ ಸ್ವಯಂವರ ಪಾರ್ವತಿ ಯಾಗ.ಜುಲೈ 5 ರಂದು ಅಂಬಾರು ಸದಾಶಿವ ಕ್ಷೇತ್ರ ದಲ್ಲಿ.
“‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂಬ ಮಾತಿನಂತೆ ಯಾವುದೇ ತಂದೆ ತಾಯಿಗಳಿಗೆ ತನ್ನ ಮಕ್ಕಳನ್ನು ಉನ್ನತ ಭವಿಷ್ಯಕ್ಕೆ ಹೊಂದಿಕೊಳ್ಳುವಂತೆ ಯೋಗ್ಯವಾದ ವಧು ವರರನ್ನು ತನ್ನ ಮಕ್ಕಳಿಗೆ ಅನ್ವೇಶಿಸಿ ಮದುವೆಯ ಭಾಗ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗೆ ಶೀಘ್ರವಾಗಿ ಯೋಗ್ಯವಾದ ಸಂಬಂಧಗಳನ್ನು ಅನ್ವೇಷಣೆ ಮಾಡಿ ಬದುಕು ಕಟ್ಟಿಕೊಳ್ಳುವಂತೆ ಹೆತ್ತವರು ಅದೆಷ್ಟು ಕನಸುಗಳನ್ನು ಕಾಣುತ್ತಾರೆ. ಆದರೆ ಸ್ತ್ರೀಯರಿಗೆ ವಿವಾಹ ಭಾಗ್ಯವು ಮಂದಗತಿಯಲ್ಲಿ ಸಾಗುತ್ತಿದ್ದರೆ, ತಾನು ಅಂದುಕೊಂಡಂತಹ ವರ ಲಭಿಸದೆ ವಿವಾಹ ಭಾಗ್ಯವು ಮಟಕುಗೊಳ್ಳುತ್ತಿದ್ದರೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಸ್ವಯಂವರ…