ಕಲಾಭಿವಂದನೆಯ ಹಾದಿಯಲ್ಲಿ ಮತ್ತೊಂದು ಹೊಂಬೆಳಕು : ಬಾಲಪ್ರತಿಭೆ ಯತಿರಾಜ್ ರೈ
”ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯಂ ಕದಾಚನ |ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ ||”ರಾಜ ಪದವಿ ಮತ್ತು ವಿದ್ವತ್ತು ಎಂದಿಗೂ ಸಮಾನವಲ್ಲ; ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ದೊರೆತರೆ, ವಿದ್ವತ್ಪೂರ್ಣ ಕಲಾವಿದನು ಜಗದಗಲಕ್ಕೂ ಪೂಜಿಸಲ್ಪಡುತ್ತಾನೆ. ಇಂತಹ ಉನ್ನತ ಹಾದಿಯಲ್ಲಿ, ಕಲೆಯನ್ನೇ ಉಸಿರಾಗಿಸಿಕೊಂಡು ಬಾಲ್ಯದಲ್ಲೇ ಮಹತ್ಸಾಧನೆಯ ಕನಸು ಹೊತ್ತಿರುವ ಸವ್ಯಸಾಚಿ ಪ್ರತಿಭೆಯೇ ಯತಿರಾಜ್ ರೈ. ಸಾಂಸ್ಕೃತಿಕ ಪರಂಪರೆಯ ಗಣಿಯಾಗಿರುವ ನಮ್ಮ ಮಣ್ಣಿನಲ್ಲಿ, ಪ್ರತಿಭೆಗಳು ಜನ್ಮಜಾತ ಕಲಾ ಸಂಸ್ಕಾರದೊಂದಿಗೆ ಅರಳುತ್ತವೆ ಎಂಬುದಕ್ಕೆ ಈ ಯುವ…
