ಸೃಜನಶೀಲತೆಯ ಸಾರ್ಥಕ ಪಥ: ಶ್ರೀನಿವಾಸ ಪೆರಿಕ್ಕಾನರ ಕಲಾ ಜೀವನಯಾನ

(​”+ಸೃಷ್ಟಿಯ ಮೌನಕ್ಕೆ ಕಲೆಯ ಭಾಷೆ ನೀಡುವ ಮಾಂತ್ರಿಕ…”)​ನಿಸರ್ಗದ ಮಡಿಲಲ್ಲಿ ಮನುಷ್ಯ ಜನ್ಮವು ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುವುದು ಅವನಲ್ಲಿರುವ ‘ಸೃಜನಶೀಲತೆ’ ಎಂಬ ದಿವ್ಯ ಚೈತನ್ಯದಿಂದಾಗಿ. ಬದುಕಿನ ಸುದೀರ್ಘ ಪಯಣದಲ್ಲಿ ವಾಸ್ತವವನ್ನು ಕೇವಲ ಕಣ್ಣಿನಿಂದ ಸವಿಯದೇ, ಅಂತರಂಗದ ದಿವ್ಯ ಚಕ್ಷುವಿನಿಂದ ಕಂಡು, ಸಹಜತೆಯ ಆಳಕ್ಕಿಳಿದು ಹೊಸತನ್ನು ಅನ್ವೇಷಿಸುವ ಅಪರೂಪದ ವ್ಯಕ್ತಿತ್ವ ಶ್ರೀನಿವಾಸ ಪೆರಿಕ್ಕಾನ ಅವರದ್ದು. ಅವರು ಯಶಸ್ಸನ್ನು ಅರಸಿ ಹೋದ ಹರಿಕಾರನಲ್ಲ; ಬದಲಾಗಿ ಅವರ ಕರ್ತೃತ್ವ ಶಕ್ತಿಯೇ ಕಾಲದ ಕರೆಗೆ ಓಗೊಟ್ಟು, ಎದುರಾದ ಸವಾಲುಗಳನ್ನೇ ಸುಂದರ ಕಲಾತ್ಮಕ ಅವಕಾಶಗಳನ್ನಾಗಿ…

Read More

ಅಧಿಕಾರದ ಕೀಲಿ: ಮತವೆಂಬ ಬೀಗ

ಪ್ರಜಾಪ್ರಭುತ್ವ ಎನ್ನುವುದು ಒಂದು ಭದ್ರವಾದ ಬೊಕ್ಕಸವಿದ್ದಂತೆ. ಆ ಬೊಕ್ಕಸದ ಒಳಗೆ ನಮ್ಮ ದೇಶದ ಭವಿಷ್ಯ, ನಮ್ಮೂರಿನ ಅಭಿವೃದ್ಧಿ ಮತ್ತು ನಮ್ಮ ಮುಂದಿನ ಪೀಳಿಗೆಯ ಸುಖ-ಶಾಂತಿ ಅಡಗಿದೆ. ಆದರೆ, ಈ ಬೊಕ್ಕಸವನ್ನು ತೆರೆಯುವ ಅಧಿಕಾರ ಇರುವುದು ಕೇವಲ ಆಡಳಿತಗಾರರ ಕೈಯಲ್ಲಲ್ಲ; ಬದಲಾಗಿ ಮತದಾರರಾದ ನಮ್ಮ ಕೈಯಲ್ಲಿದೆ. ಸುಭದ್ರ ಆಡಳಿತ ಎಂಬ ಅಧಿಕಾರವನ್ನು ಚಲಾಯಿಸಲು ಇರುವ ಏಕೈಕ ಕೀಲಿ ಎಂದರೆ ಅದು ನಮ್ಮ ಮತ. ನಾವು ಸರಿಯಾದ ಬೀಗಕ್ಕೆ ಸರಿಯಾದ ಕೀಲಿಯನ್ನು ಹಾಕದಿದ್ದರೆ, ಇಡೀ ವ್ಯವಸ್ಥೆ ತುಕ್ಕು ಹಿಡಿಯುವುದರಲ್ಲಿ ಸಂಶಯವಿಲ್ಲ….

Read More

ಹೀಗೊಂದು ಪ್ರೇಮ ಪತ್ರ

” ‘ ಸುಮ’ ನ “….. ಐ ಲವ್ ಯು.‍‌ಸಾರಿ ಕಣೇ, ನಿನ್ನಲ್ಲಿ ಪರ್ಮಿಶನ್ ಕೇಳ್ದೇನೇ ಬರೆದಿದ್ದೀನಿ. ನಿನಗೆ ಕೋಪ ಬಂದಿದೆ ಅಂತಾನು ಗೊತ್ತು ಯಾಕೆಂದ್ರೆ ನೀನು ನನಗೆ ಕೊಟ್ಟ ಸ್ಥಾನ ಇದಲ್ಲ ಅಲ್ವಾ ? ಆದ್ರೆ ಪ್ಲೀಸ್….. ದಯವಿಟ್ಟು ಓದುವ ಮುಂಚೆಯೇ ಈ ಪತ್ರವನ್ನು ಹರಿದಾಕ್ಬೇಡ. ತಾಳ್ಮೆಯಿಂದ ನನಗೋಸ್ಕರ ಒಮ್ಮೆ ಈ ಪತ್ರವನ್ನೋದು. ಆಮೇಲೆ ನಿನ್ನಿಷ್ಟ ಕಣೇ….. ಇನ್ನೂ ಹೆಚ್ಚು ಪೀಠಿಕೆ ಹಾಕಲ್ಲ ನಿನ್ನಲ್ಲಿ ಓದುವ ತಾಳ್ಮೆನು ಇಲ್ಲ, ಅದಕ್ಕೆ ನೇರವಾಗಿ ವಿಷಯಕ್ಕೆ ಬರುತ್ತೀನಿ…. ಆಯ್ತಾ…

Read More

ಸಹ್ಯಾದ್ರಿಯ ಸೆರಗಿನ ಸಾಹಿತ್ಯ ಋಷಿ: ಮಂಜೇಶ್ವರದ ‘ಪೈ’ ಅಜ್ಜನಿಗೊಂದು ಪ್ರೀತಿಯ ನಮನ

​ನಮ್ಮ ಕರಾವಳಿಯ ಮಣ್ಣಿಗೆ ಒಂದು ವಿಚಿತ್ರ ಗುಣವಿದೆ. ಇಲ್ಲಿ ಅಲೆಗಳ ಸದ್ದಿನಲ್ಲಿ ಸಾಹಿತ್ಯವಿದೆ, ತೆಂಗಿನ ಮರಗಳ ಮರ್ಮರದಲ್ಲಿ ಕವಿತೆಯಿದೆ. ಈ ಮಣ್ಣಿನ ಗಂಧವನ್ನು ಜಗತ್ತಿನಾದ್ಯಂತ ಪಸರಿಸಿದ ಆ ಅಪ್ರತಿಮ ಚೇತನವೇ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು. ಇಂದು ಅವರ ಹುಟ್ಟುಹಬ್ಬ. ಈ ಹೊತ್ತಿನಲ್ಲಿ ಅವರನ್ನೊಮ್ಮೆ ನೆನಪು ಮಾಡಿಕೊಳ್ಳುವುದು ಅಂದರೆ ಅದು ನಮ್ಮ ಅಸ್ಮಿತೆಯನ್ನು ನಾವು ಹುಡುಕಿಕೊಂಡಂತೆ.​ಪೈಗಳೆಂಬ ಜ್ಞಾನದ ಭಂಡಾರ​ಪೈಗಳು ಕೇವಲ ಕವಿಯಲ್ಲ, ಅವರೊಬ್ಬ ಚಲಿಸುವ ವಿಶ್ವಕೋಶ. ಮಂಜೇಶ್ವರದ ಆ ಪುಟ್ಟ ಮನೆಯಲ್ಲಿ ಕುಳಿತು, ಜಗತ್ತಿನ ಹತ್ತಾರು ಭಾಷೆಗಳನ್ನು…

Read More

ಮೊದಲ ವಾಹನ

ಒಂದು ಕಾಲವಿತ್ತು, ಆಗ ರೂ. 20 ಉಳಿಸಲು 20 ನಿಮಿಷ ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ 20 ನಿಮಿಷ ಉಳಿಸಲು 200 ರೂಪಾಯಿ ಖರ್ಚು ಮಾಡಲು ತಯಾರಿದ್ದಾರೆ. ಪ್ರತಿಯೊಬ್ಬರು ಓಡಾಡಲು ಸ್ವಂತ ಗಾಡಿಯನ್ನು ಇಟ್ಟುಕೊಂಡಿದ್ದಾರೆ.ಮುಖ್ಯರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ನಮ್ಮ ಮನೆಗೆ ಇದ್ದುದರಿಂದ ನಮಗೂ ಒಂದು ಗಾಡಿ ಅವಶ್ಯವಿದೆ ಎಂದು ನಮಗನಿಸುತ್ತಿತ್ತು. ಬೆರಳೆಣಿಕೆಯಷ್ಟು ಅಡಿಕೆ ಮರಗಳಿದ್ದ ತೋಟ ನಮ್ಮದು, ಮನೆಯಲ್ಲಿ ಅನಾರೋಗ್ಯದಿಂದ ಪೀಡಿತ ವಯಸ್ಸಾದ ಅತ್ತೆ ಮಾವ, ಇವೆಲ್ಲದುದರಿಂದ ಹಣ ಹೊಂದಿಸುವುದು ಕಷ್ಟವಿತ್ತು. ಆದರೆ ದೇವರ…

Read More

ಬದುಕಿನ ಸಮಸ್ಯೆ ಒಂದು ಆಲೋಚನೆ

ಮಾನವ ಜೀವನವು ಒಂದು ಸಂಕೀರ್ಣ ಮತ್ತು ಚಲನೆಯುತ ಪ್ರಯಾಣವಾಗಿದೆ. ಜನನದಿಂದ ಮರಣದವರೆಗೆ ಪ್ರತಿಯೊಬ್ಬರೂ ಅನೇಕ ಅನುಭವಗಳನ್ನು ಎದುರಿಸುತ್ತಾರೆ, ಮತ್ತು ಆ ಅನುಭವಗಳಲ್ಲಿ ಸಮಸ್ಯೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಬದುಕಿನ ದಾರಿಯಲ್ಲಿ ಸಣ್ಣ ಸಣ್ಣ ಅಡೆತಡೆಗಳಿಂದ ಹಿಡಿದು ದೊಡ್ಡ ಸವಾಲುಗಳವರೆಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳು ವ್ಯಕ್ತಿಯ ಆರ್ಥಿಕ, ಸಾಮಾಜಿಕ, ಮಾನಸಿಕ ಹಾಗೂ ಭಾವನಾತ್ಮಕ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಬದುಕು ಎನ್ನುವುದು ಸುಲಭವಾದ ಪ್ರಯಾಣವಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು…

Read More

ಗಡಿನಾಡ ಸಾಹಿತ್ಯದ ‘ಸ್ವಾರ್ಥ’ ಸಂಕಟ

ಕಾವಲುಗಾರರೇ ಬೇಲಿ ತಿಂದರೆ ಭಾಷೆಗೆಲ್ಲಿ ಉಳಿವು?​​ಗಡಿನಾಡು ಎನ್ನುವುದು ಕೇವಲ ಎರಡು ಭೂಪಟಗಳ ನಡುವಿನ ಗೆರೆಯಲ್ಲ; ಅದು ಎರಡು ಸಂಸ್ಕೃತಿಗಳ ತಾಯಿಬೇರುಗಳು ಬೆರೆತು ಅರಳುವ ಸಮೃದ್ಧ ತೋಟ. ಕಾಸರಗೋಡಿನ ಕಯ್ಯಾರ ಕಿಂಞಣ್ಣ ರೈಗಳಿಂದ ಹಿಡಿದು ಬೆಳಗಾವಿಯ ನಾಡೋಜ ಪಾಟೀಲ ಪುಟ್ಟಪ್ಪನವರವರೆಗೆ, ಗಡಿನಾಡ ಸಾಹಿತ್ಯ ಲೋಕವು ಅಸ್ಮಿತೆಯ ಕೆಚ್ಚನ್ನು ಕಾಯ್ದುಕೊಂಡು ಬಂದಿತ್ತು. ಆದರೆ ಇಂದು ಆ ಕೆಚ್ಚು ಆರಿದೆ; ಅದರ ಜಾಗದಲ್ಲಿ ‘ವೈಯಕ್ತಿಕ ಲಾಭದ’ ಹಸಿವು ಮನೆಮಾಡಿದೆ. ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ಸ್ವಾರ್ಥದ ರಾಜಕಾರಣವು ಗಡಿನಾಡ ಸಾಹಿತ್ಯದ ಘನತೆಯನ್ನು ಹರಾಜಿಗಿಟ್ಟಿದೆ.​ಸ್ವಾರ್ಥದ…

Read More

ಚಾಂದ್ರಮಾನ ಯುಗಾದಿ

[ಕಾಲಚಕ್ರದ ನವೋದಯ ಮತ್ತು ಸಾಂಸ್ಕೃತಿಕ ವೈಭವ] ​ಭಾರತೀಯ ಸನಾತನ ಪರಂಪರೆಯಲ್ಲಿ ಕಾಲಗಣನೆಗೆ ಕೇವಲ ಅಂಕಿ-ಅಂಶಗಳ ಬೆಲೆ ಮಾತ್ರವಲ್ಲ, ಅದಕ್ಕೊಂದು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆಗೆ ಹೊಸ ವರ್ಷದ ಮುನ್ನುಡಿಯೇ ಚಾಂದ್ರಮಾನ ಯುಗಾದಿ.​ಯುಗಾದಿ: ಪದದ ಅರ್ಥ ವಿಸ್ತಾರ‘ಯುಗಾದಿ’ ಎನ್ನುವ ಪದವು ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ನಿಷ್ಪನ್ನವಾಗಿದೆ. ‘ಯುಗ’ ಎಂದರೆ ಒಂದು ಕಾಲಘಟ್ಟ ಅಥವಾ ನಿರ್ದಿಷ್ಟ ಕಾಲಾವಧಿ, ‘ಆದಿ’ ಎಂದರೆ ಆರಂಭ. ಅಂದರೆ, ಹೊಸ ಕಾಲದ ಉದಯ…

Read More

ಹೊಸ ವರ್ಷದ ಮೊದಲ ಯುಗಾದಿ  

ಭಾರತದ ವಿವಿಧ ಕಡೆಗಳಲ್ಲಿ ಈ ದಿನ ಹೊಸ ವರ್ಷವನ್ನಾಗಿ ಯುಗಾದಿಯನ್ನು ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆ ಎಂದರೆ  ಬೇವು ಬೆಲ್ಲದ ಸವಿಯ ತಿಂದು ಜೀವನದಲ್ಲಿ ಬರುವಂತಹ ಸಿಹಿ ಕಹಿ ಘಟನೆಗಳನ್ನು ಸಮನಾಗಿ ಸ್ವೀಕರಿಸಬೇಕು  ಅವುಗಳನ್ನು ಸಮನಾಗಿ ಅನುಭವಿಸಬೇಕು ಎನ್ನುವ ತಾತ್ವಿಕ ಅವಕಾಶಗಳು ಅದರಲ್ಲಿ ಅಡಕವಾಗಿರುವುದು ವಿಶೇಷ.   ಪ್ರತಿಯೊಬ್ಬರ ಮನೆಯಲ್ಲಿ ಹೆಣ್ಣು ಮಕ್ಕಳು ಮುಂಜಾನೆ ಎದ್ದು, ಮನೆಯ ಅಂಗಳವನ್ನು ಸ್ವಚಮಾಡಿ, ರಂಗು ರಂಗಿನ ರಂಗೋಲಿಯನ್ನು  ಮನೆ ಮುಂದೆ ಬಿಡಿಸಿ,  ಮಾವಿನ ಎಲೆಯ ಜೊತೆಗೆ ಬೇವಿನ ಎಲೆಯ ತೋರಣವನ್ನು ಬಾಗಿಲಿಗೆ ಕಟ್ಟಿ ಸಂಭ್ರಮ ಪಡುತ್ತಾರೆ.  ಈ ದಿನ…

Read More

ದೇವರಿಗಿಲ್ಲ ಗುರು-ದಕ್ಷಿಣೆ:ಆದರೂ ಬರುವರಲ್ಲ ಪ್ರದಕ್ಷಿಣೆ….

ಓಂ ಶ್ರೀ ಸಾಯಿರಾಂ “ಜ್ಞಾನಭಂಡಾರದಲಿ ವಜ್ರವ,ಮುತ್ತುರತ್ನವ ಪೋಣಿಸಿದ ಅಕ್ಷರಧಾರೆ ಪರಿಚಯಿಸಿದ ಗುರುಗಳು,ಸಹಾನುಭೂತಿಯ ದ್ಯೋತಕ, ನಿಷ್ಟೆಯಿಂದ ತನ್ನ ಕಾರ್ಯವನ್ನು ಸಫಲತೆಯ ಕಡೆಗೆ ಸಾಗಿಸುವ ಪ್ರಯತ್ನ,ಶ್ರಮಿಸಿದರೆ ಯಾವ ಕಾರ್ಯವೂ ಕಠಿಣವಲ್ಲ ಎಂದು ಮನದಟ್ಟು ಮಾಡುವ ಯುವ ಹುಮ್ಮಸ್ಸು,ಸಹೃದಯಿ,ಮನುಷ್ಯ ಸ್ವಭಾವದ ಮನಸ್ಸಿಗೆ ನಿಮ್ಮ ಸೇವಾಮನೋಭಾವ ವೇ ಮಾದರಿ. ಸತತ ಪರಿಶ್ರಮ ದ ಉತ್ತುಂಗ ಆಲೋಚನೆಯ ನಿಮ್ಮ ವಿದ್ಯಾಕ್ಷೇತ್ರದ ಸೇವೆ ಅಪಾರ. ನಿಮ್ಮ ಕಠಿಣ ಪರಿಶ್ರಮದ ರೀತಿನೀತಿ ಅನುಸರಿಸಿದರೆ ವಿದ್ಯಾರ್ಥಿ ಜೀವನದಲ್ಲೂ ಉನ್ನತಿಯ ಸ್ಥಾನ ಅಲಂಕರಿಸಬಲ್ಲ ಎಂದರೆ ಸಂಶಯವಿಲ್ಲ.ನಿಮ್ಮ ಜೊತೆ ಸೇವೆ ಮಾಡಿದ…

Read More
error: Content is protected !!