ಸಾವರ್ಕರ್ ವ್ಯಕ್ತಿಯಲ್ಲ, ಒಂದು ಸಿದ್ಧಾಂತ-ಆದರ್ಶ ಬಿ ಎಂ

ಸಾವರ್ಕರ್ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಸಂಪೂರ್ಣ ಸಿದ್ಧಾಂತ. ಅವರು ಕೇವಲ ಕಿಡಿಯಲ್ಲ, ಧಗಧಗಿಸುವ ಜ್ವಾಲೆ. ಅವರನ್ನು ಯಾವುದೇ ಸಣ್ಣ ವ್ಯಾಖ್ಯಾನಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ”. ವೀರ ಸಾವರ್ಕರ್ ಅವರು ಬ್ರಿಟಿಷರ ಆಡಳಿತಾವಧಿಯಲ್ಲಿ ಒಟ್ಟು ಸುಮಾರು 24 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು. ಬ್ರಿಟಿಷ್ ಸರ್ಕಾರ ಅವರಿಗೆ ಒಂದೇ ಜನ್ಮದಲ್ಲಿ ಎರಡು ಜೀವಾವಧಿ ಶಿಕ್ಷೆ ಸೇರಿ ಒಟ್ಟು 50 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. 14 ವರ್ಷಗಳ ನಂತರ ಅವರನ್ನು ಬಿಡುಗಡೆ ಮಾಡಿ, ಮುಂದಿನ…

Read More

ದೈವಾರಾಧನೆ🙏

“ಪಾಸದ ಪಡಿಯರಿ” ದೈವಾರಾಧನೆಯಲ್ಲಿ ಪಾಸಾದ ಪಡಿಯರಿಗೆ ಬಹಳ ಪ್ರಾಮುಖ್ಯತೆ ಇದೆ, ಪಾಸ ಅಂದ್ರೆ ಉಪವಾಸ, ದೈವನರ್ತಕರು ದೈವ ಕೋಲ ಕಟ್ಟುವ ಒಂದು ದಿನ ಮುಂಚೆಯಿಂದ ಉಪವಾಸ ಹಿಡಿದಿರಬೇಕು, ( ಕೆಲವೊಂದು ದೈವಗಳಿಗೆ ಬೇಡ )ಅದಕ್ಕೆ ಅವರು ದೈವ ಕೋಲ ಬಿರಿದ ನಂತರ ಮನೆಗೆ ಹೋಗಿ ಆ ಅಕ್ಕಿಯನ್ನು ಬೇಯಿಸಿ ಊಟ ಮಾಡುತ್ತಾರೆ, ಆಗಿನ ಕಾಲ ಹಾಗಿತ್ತು, ನಮ್ಮ ದೈವ ಕೋಲವನ್ನು ಉಪವಾಸ ಹಿಡಿದು ಕಟ್ಟಿದ ನಂತರ ನರ್ತಕ ಹಸಿವಿನಿಂದ ಇರಬಾರದು ಎಂಬ ಸಂಕಲ್ಪದಿಂದ ದೈವದ ಹೆಸರಲ್ಲಿ ಮೂರು…

Read More

ಚೆನ್ನಭೈರಾದೇವಿಯ ಕಾಲದ ನೆನಪುಗಳನ್ನು ಹೊತ್ತಿರುವ ಐತಿಹಾಸಿಕ ತಾಣ ಹರಡಸೆಯ ಮೆಣಸಿನ ಬಾವಿ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಪಂಚಾಯಿತಿ ವ್ಯಾಪ್ತಿಯಲ್ಲಿ, ದಟ್ಟ ಕಾಡಿನ ನಡುವೆ ಸಾಗುವ ರಸ್ತೆಯಂಚಿನಲ್ಲಿ ಪ್ರಕೃತಿಯ ಮಡಿಲಲ್ಲಿ ಮರೆಯಾಗಿರುವ ಅಪರೂಪದ ತಾಣವೊಂದು ಗಮನ ಸೆಳೆಯುತ್ತದೆ. ಅದೇ ಹರಡಸೆಯ ಮೆಣಸಿನ ಬಾವಿ. ಇಂದು ನೋಡಿದರೆ ಮರಗಳ ಬೇರುಗಳ ನಡುವೆ ಕತ್ತಲಲ್ಲಿ ಕಾಣಿಸುವ ಈ ಬಾವಿ ಸಾಮಾನ್ಯ ಬಾವಿಯಂತೆ ಭಾಸವಾಗಬಹುದು. ಆದರೆ ಸ್ಥಳೀಯರ ಮಾತುಗಳು, ಹಿರಿಯರ ನೆನಪುಗಳು ಮತ್ತು ಐತಿಹ್ಯಗಳನ್ನು ಆಲಿಸಿದಾಗ ಇದರ ಹಿಂದೆ ಒಂದು ರೋಚಕ ಇತಿಹಾಸದ ಕಥೆ ತೆರೆದುಕೊಳ್ಳುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರಾವಳಿ…

Read More

ಪ್ರೇಮ ಕಾವ್ಯ

ನವ ಚೆಲುವಿನ ಚಿಲುಮೆ ಎನ್ನರಸಿಓಡೋಡಿ ಬಂದಿರುವೆ ನಾ ನಿನ್ನರಸಿಈ ಮನದ ತುಂಬೆಲ್ಲಾ ತುಂಬಿರುವೆನಾನೆoದಿಗೂ ನಿನ್ನ ಜೊತೆಗೆ ಇರುವೆ ನೀನಾಡೋ ಮಾತುಗಳೆಲ್ಲ ಸುಂದರನಿನ್ನ ನಗುವು ಹುಣ್ಣಿಮೆಯ ಚಂದಿರನೀಬಂದು ನನ್ನ ಬದುಕು ಬಂಗಾರನಿನ್ನಿಂದ ನನ್ನ ಜೀವನ ಸಿರಿ ಸಿಂಗಾರ ಬದುಕಿನ ತಿರುಳನು ಆರಿತಿರುವೆವುಬಾಳಿನ ಕೊಂಡಿಯ ಬೆಸೆದಿರುವೆವುಜೀವನದ ಮೌಲ್ಯವ ತಿಳಿದಿರುವೆವುಅರಿತು ಬೆರೆತು ಸುಖದಿ ಬಾಳುವೆವು ಹೊಂದಾಣಿಕೆಯು ಇದ್ದರೆ ಜೀವನದಿಉರುಳುವುದು ದಿನಗಳು ಸಂತಸದಿಮಧುರ ಕ್ಷಣದ ನೆನಪುಗಳು ಮನದಿಇರಲು ಒಳಿತು ಕೊನೆಯ ಸಮಯದಿ. ಡಾ. ವಾಣಿಶ್ರೀ ಕಾಸರಗೋಡು*ಗಡಿನಾಡ ಕನ್ನಡತಿ

Read More

ಆಟಿ ತಿಂಗಳು

ಪೂರ್ವಜರ ಪ್ರಕಾರ ಈ ತಿಂಗಳು ಜನರಿಗೆ ಬಹಳ ಕಷ್ಟದ ತಿಂಗಳು, ಅದಕ್ಕೋಸ್ಕರ ಪ್ರಕೃತಿಯಲ್ಲೇ ಆದ ತಿಂಡಿ ತಿನಸುಗಳನ್ನು ತಿನ್ನುತಿದ್ದರು, ಈಗ ಹಾಗೆ ಅಲ್ಲ, ಆದ್ರೂ ಅದನ್ನು ಕೊರೋನ ನಮಗೆ ನೆನಪು ಮಾಡಿಸಿತು 🙏 ಇನ್ನೊಂದು ವಿಷಯ ಏನೆಂದರೆ ನಮ್ಮ ಅಜ್ಜ, ಅಪ್ಪ ಆಸ್ತಿ ಮಾಡಿಟ್ಟು ಹೋಗಿರ್ತಾರೆ, ಆ ಆಸ್ತಿಯ ಮೇಲೆ ಕಣ್ಣಿಡುವ ನಾವು..,ಅವರಿಗೆ ಬಡಿಸಲು ಕೆಲವರಿಗೆ ಪುರುಸೊತ್ತು ಇರುವುದಿಲ್ಲ .ನಮ್ಮನ್ನು ಅಗಲಿದ ಆತ್ಮಕ್ಕೆ, ಪ್ರೇತಗಳಿಗೆ ಕುಟುಂಬದ, ಅಥವಾ ಮನೆಯವರು ಸೇರಿ ಅವರಿಗೆ ಬಡಿಸುವ ಕ್ರಮ ಒಂದು ವಿಶೇಷ…

Read More

‎‎ಅಮ್ಮ… ನೀನು ನನಗಾಗಿ ಏನು ಮಾಡಿದೆ?

‎ನವಮಾಸ ಹೊತ್ತು, ಹೆತ್ತು, ಸಾಕಿದವಳು…‎ಅವಳೇ ನನ್ನ ಅಮ್ಮ.‎‎ನನ್ನ ತಪ್ಪುಗಳನ್ನು ತಿದ್ದಿ,‎ಒಳ್ಳೆಯ ಬುದ್ಧಿ ಹೇಳಿ ಬೆಳೆಸಿದವಳು…‎ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದವಳು…‎‎ನಾನು ಬಿದ್ದು ಗಾಯವಾದಾಗ,‎ಅದಕ್ಕೆ ಔಷಧಿ ಹಚ್ಚಿ‎ಸಾಂತ್ವನ ಹೇಳಿದವಳು… ‎‎”ಅಮ್ಮ” ಎಂಬ ಪದ ಎಷ್ಟು ಸುಂದರ!‎‎ನಮ್ಮ ಬಳಿ ಎಷ್ಟೇ ಬೆಲೆಬಾಳುವ ವಸ್ತುಗಳಿದ್ದರೂ,‎ಅವಳ ಪ್ರೀತಿಯನ್ನು ಮೀರಿಸುವ ಶಕ್ತಿ ಯಾವುದಕ್ಕೂ ಇಲ್ಲ.‎‎ಯಾಕೆಂದರೆ…‎ತನ್ನ ಇಡೀ ಜೀವನವನ್ನೇ ಮಕ್ಕಳಿಗಾಗಿ‎ಅರ್ಪಿಸಿಕೊಂಡವಳು ಅವಳು.‎‎ಸದಾ ನಮ್ಮ ಒಳಿತನ್ನೇ ಬಯಸುವಳು.‎ನಾವು ಬೆಳೆದು ದೊಡ್ಡವರಾದ ಮೇಲೆ,‎ಬಾಯಿತಪ್ಪಿ ಆಡಿದ ಒಂದು ಮಾತನ್ನೂ‎ಸಹಿಸಲಾರದೆ,‎ಮೂಲೆಯಲ್ಲಿ ನಿಂತು ಕಣ್ಣೀರಿಡುವಳು. ‎‎ಆದರೆ,‎ನಮಗೆ ಬುದ್ಧಿ ಹೇಳಿ ಬೈದರೂ,‎ಸ್ವಲ್ಪ ಹೊತ್ತಿನಲ್ಲೇ‎ಮತ್ತೆ ನಮ್ಮ ಬಳಿಗೆ…

Read More

ದೈವಾರಾಧನೆ 🙏

ಸುತ್ಯೆ ಹಾಗೂ ಕೊಡಿಯಡಿ🙏 ಗಣಪತಿ ಸುತ್ಯೆ🙏(ದೈವಾರಾಧನೆಯಲ್ಲಿ ಮೊದಲು ಬಡಿಸುವ ಕೊಡಿ.) ದೀಪ, ಊದುಬತ್ತಿ ಹಚ್ಚಿಒಂದು ಕೊಡಿ ಬಾಳೆ ಎಲೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ವೀಳ್ಯದೆಲೆ, ಹೂ, ಕಾಣಿಕೆ,ಇಟ್ಟು ಪ್ರಾರ್ಥನೆ ದೈವದ ಸುತ್ಯೆ🙏 ಕೋಲು ಬಲಿಯ ಕೆಳಗೆ,ಕೊಡಿಬಾಳೆ ಎಲೆಯಲ್ಲಿ ಭತ್ತ,ಅದರ ಮೇಲೆ ಒಂದು ಕೊಡಿ ಬಾಳೆ ಎಲೆ ಹಾಕಿ ಕುಚ್ಚಿಲಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಹೂ,ಊದುಬತ್ತಿ ಇಟ್ಟು ಪ್ರಾರ್ಥನೆ (ದೈವಗಳು ಘಟ್ಟ ದಿಂದ ತುಳುನಾಡ್ ಗೆ ಬರುವಾಗ “ಅತಿಸಾರ” ಭತ್ತ ವನ್ನು ತಂದಿದ್ದಾರೆ ಎಂಬ ನಂಬಿಕೆ…

Read More

ದೈವಾರಾಧನೆ 🙏”ಗಗ್ಗರ, ಮತ್ತು ತಿರಿ”,

ದೈವರಾಧನೆಯಲ್ಲಿ ಗಗ್ಗರ, ತಿರಿ ಪ್ರಮುಖವಾದದ್ದು, ಇದನ್ನು ಕಟ್ಟುವ ಅಧಿಕಾರ ಇರುವುದು ದೈವಗಳಿಗೆ ಮಾತ್ರ ಒಂದೊಂದು ದೈವಗಳಿಗೆ ಇಂತಿಷ್ಟು ದಂಡ್ ತಿರಿ ಬೇಕೆಂಬ ಕಟ್ಟಳೆ ಇದೆ ಮೂಕಾಂಬಿ ಗುಳಿಗನಿಗೆ 16 ದಂಡ್, ಗುಳಿಗನಿಗೆ 3 ದಂಡ್, ಕೋಮರಾಯ ದೈವಕ್ಕೆ 9 ದಂಡ್, ಕೊರಗು ತನಿಯ ದೈವಕ್ಕೆ 2 ದಂಡ್,ಹೀಗೆ ನಿಯಮ ಇದೆ ಆದ್ರೆ ಈಗ ಕಾಲಕ್ಕೆ ಅನುಸರಿಸಿ ಹೋಗುತ್ತಾರೆ ಅಷ್ಟೇ…… ಪಂಜುರ್ಲಿ ದೈವಗಳಿಗೆ ತಿರಿಯದ್ದೇ “ಅಣಿ” ಆಗಬೇಕು,ತಿರಿಯ ಪರಿಮಳ ಕೇಳಿದ್ರೆ ಅಲ್ಲಿ ದೈವ ಶಕ್ತಿಯ ಭಯ ಭಕ್ತಿ ಹುಟ್ಟುತ್ತದೆ…

Read More

ದೇವನಿರುವನು ನಂಬಿಕೋ

ನಂಬಿ ಬದುಕಿರಿ ಎಂದಿಗೂ ದೇವನಿರುವನೆಂದುಬರಿದೆ ನಂಬದಿರಿ ಮಾಯದ ಮನುಜರನೆಂದುಹರಸಿ ಪೊರೆವನು ದೇವಾದಿ ದೇವ ನಂಬಿರಿಂದುಕೆಡಿಸುವನು ತಿಳಿದು ಜೀವನವ ಮನುಜನಿಂದು ಭಗವಂತನ ಕೃಪೆ ಎಂದೂ ಜೊತೆಗಿದ್ದರೆ ನಿಮಗೆದೊರೆಯುವುದು ಪರಮಾರ್ಥ ಬಾಳಿನ ಕೊನೆಗೆಸಾಟಿ ಮನುಷ್ಯನು ಇರುವನೆನ್ನುವನು ಬಾಳಿಗೆಸೇರಿ ಬದುಕುತ್ತಾ ತುಂಬಿಕೊಳ್ಳುವನು ಜೋಳಿಗೆ ಸ್ವಕಾರ್ಯವೇ ಮೇಲಾಗಿದೆ ಇಂದು ಮನುಜಗೆಪರರ ಆಡಿಕೊಳ್ಳುವುದೇ ಕಾಯಕವು ಮಾತಿಗೆಸಕಲರನು ಕಾಪಿಡುವನು ಪರಮಾತ್ಮ ಅಡಿಗಡಿಗೆದೇವರ ನಾಮದ ಬಲವೊಂದೇ ಸಾಕು ಬದುಕಿಗೆ ✍🏻✍🏻ಡಾ. ವಾಣಿಶ್ರೀ ಕಾಸರಗೋಡುಗಡಿನಾಡ ಕನ್ನಡತಿ

Read More

ಸಾಂಪ್ರದಾಯಿಕ ವೈಭವದ ಸಂಕೇತ – ಭಟ್ಕಳದ ಮಾರಿ ಜಾತ್ರೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿಯೇ ಅತಿ ದೊಡ್ಡ ಹಾಗೂ ಅತ್ಯಂತ ವೈಶಿಷ್ಟ್ಯಪೂರ್ಣ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಸಿದ್ಧ ಮಾರಿ ಜಾತ್ರೆ ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ನಡುವೆ ವಿಧಿವತ್ತಾಗಿ ಆರಂಭಗೊಳ್ಳುತ್ತದೆ. ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವ ಶಕ್ತಿದೇವಿಯಾಗಿ ಆರಾಧಿಸಲ್ಪಡುವ ಮಾರಿಯಮ್ಮನ ಮೇಲಿನ ಜನರ ಅಪಾರ ನಂಬಿಕೆ, ಈ ಜಾತ್ರೆಯ ಪ್ರತಿಯೊಂದು ಆಚರಣೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬೆಳಗಿನ ಜಾವ ಐದು ಗಂಟೆಗೆ ಮಣ್ಕುಳಿಯ ಮಾರುತಿ ಆಚಾರಿಯವರ ಮನೆಯಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು,…

Read More
error: Content is protected !!