ಮಂಗಳೂರು ಪೊಲೀಸ್ ವಿವಾದ: ಡಿಜಿಪಿ ಸಲೀಂ ಮೌನ – ಶಾಂತಿ ಕಾಪಾಡುವತ್ತ ಒತ್ತಡ
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಎಸ್ಪಿ ಎಸ್.ಎಸ್. ಕಾಶಿ ನೀಡಿರುವ ದೂರಿನ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ರಾಜ್ಯದ ಡಿಜಿಪಿ ಸಲೀಂ ಅವರು ನೇರ ಉತ್ತರ ನೀಡದೇ ಮೌನ ವಹಿಸಿದರು. ಆದರೆ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಮುಂದುವರಿಯಬೇಕೆಂಬುದರ ಮೇಲೆ ಅವರು ಒತ್ತಡ ಹಾಕಿದರು. ನಗರಕ್ಕೆ ಭೇಟಿ ನೀಡಿದ್ದ ಡಿಜಿಪಿ ಸಲೀಂ, ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ, ಕಮಿಷನರ್ ವಿರುದ್ಧದ…