ಕಾಸರಗೋಡಿನಲ್ಲಿ ಜೂನ್ 15 ಕ್ಕೆ ಭಜನಾ ಕಮ್ಮಟಕ್ಕೆ ಸಿದ್ಧತೆ
ಕಾಸರಗೋಡು : ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ವತಿಯಿಂದ ಕಾಸರಗೋಡಿನಲ್ಲಿ ಮೊಟ್ಟಮೊದಲ ಬಾರಿಗೆ ಭಜನಾ ಕಮ್ಮಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿಸಿದ್ದತಾ ಸಭೆ ಜರಗಿತು. ಭಜನಾ ಪರಿಷತ್ ಅಧ್ಯಕ್ಷರಾದ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಭಜನಾ ಕಮ್ಮಟದ ರೂಪು ರೇಖೆಯನ್ನು ತಯಾರಿಸಿ ಸದಸ್ಯರು ಮಾಡ ಬೇಕಾದ ಕೆಲಸಗಳ ಬಗ್ಗೆ ವಿವರಿಸಿದರು. ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀ ಸಂತೋಷ್. ಪಿ. ಅಳಿಯೂರು ಇವರು ಮೊದಲ ಬಾರಿಗೆ…
