ಕಾಸರಗೋಡು : ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಬೆರಿಪದವು ಇವರಿಂದ ಬೃಹತ್ ಶ್ರಮದಾನವು ಕ್ಷೇತ್ರ ಪರಿಸರದಲ್ಲಿ ಭಾನುವಾರ ಸಂಪನ್ನಗೊಂಡಿತು.
ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದ ಬೆರಿಪದವು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಕ್ಷೇತ್ರದಲ್ಲಿ ದಿನಪೂರ್ತಿ ನಡೆಸಿದ ಯಶಸ್ವಿ ಶ್ರಮದಾನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇತ್ತೀಚೆಗೆ ಮಧೂರು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ ಉತ್ಸವ ಹಾಗೂ ಮೂಡಪ್ಪ ಸೇವೆ ಜರಗಿತ್ತು.
ಶ್ರಮಧಾನ ಕಾರ್ಯದಲ್ಲಿ ಅಭಿಮಾನಿ ಬಳಗದ ಸದಸ್ಯರ ಸಹಿತ ದೇವಿಪ್ರಸಾದ್ ಶೆಟ್ಟಿ ಪಟ್ಲ ಬಾಯಾರು, ಜಯರಾಜ್ ಶೆಟ್ಟಿ ಚಾರ್ಲ, ಕೃಷ್ಣ ಶೆಟ್ಟಿ ತರೆಮಾರ್ ಮುಂತಾದವರು ಭಾಗವಹಿಸಿದರು.