ಕಾಸರಗೋಡಿನಲ್ಲಿ ಯುಡಿಎಫ್ ಅಲೆ: ಮಂಜೇಶ್ವರ–ಕಾಸರಗೋಡಿನಲ್ಲಿ ಭರ್ಜರಿ ಗೆಲುವು, ಎಲ್ಡಿಎಫ್ ಕುಸಿತ
ಮಂಜೇಶ್ವರ/ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಿರೀಕ್ಷಿತ ಆಡಳಿತ ವಿರೋಧಿ ಅಲೆ ಅಪ್ಪಳಿಸಿದ್ದು, ಆಡಳಿತಾರೂಢ ಎಲ್ಡಿಎಫ್ ಹೀನಾಯ ಸೋಲು ಕಂಡಿದೆ. ಕಾಸರಗೋಡು ಜಿಲ್ಲೆಯಲ್ಲೂ ಈ ಅಲೆ ಸ್ಪಷ್ಟವಾಗಿ ಪ್ರತಿಫಲಿಸಿದ್ದು, ಎಡರಂಗದ ಭದ್ರಕೋಟೆಗಳಾದ ತ್ರಿಕರಿಪುರ ಮತ್ತು ಉದುಮಾದಲ್ಲೂ ಯುಡಿಎಫ್ ಬಿರುಕು ಮೂಡಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದೆ.ದೇಶವೇ ಕುತೂಹಲದಿಂದ ಗಮನಿಸುತ್ತಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕಣವಾಗಿದ್ದ ಇಲ್ಲಿ, ಯುಡಿಎಫ್ ಅಭ್ಯರ್ಥಿ 26,093 ಮತಗಳ…