ಆದರ್ಶ ಶಿಕ್ಷಕ ಶಾಮ್ ಭಟ್ ಸರ್ ನಿವೃತ್ತಿ: ಭಾವಪೂರ್ಣ ಬೀಳ್ಕೊಡುಗೆ

ಸುದೀರ್ಘ ಕಾಲ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿ, ಆದರ್ಶ ಅಧ್ಯಾಪಕರಾಗಿ, ಸಮರ್ಥ ಸಂಘಟಕರಾಗಿ, ಸ್ನೇಹಮಯ ವ್ಯಕ್ತಿತ್ವದ ಆತ್ಮೀಯ ಶ್ರೀಯುತ ಶಾಮ್ ಭಟ್ ಸರ್ ಅವರು ಇಂದು ತಮ್ಮ ವೃತ್ತಿಜೀವನದಿಂದ ನಿವೃತ್ತರಾಗುತ್ತಿರುವ ಈ ಕ್ಷಣವು ಭಾವನಾತ್ಮಕತೆಯನ್ನೂ ಉಂಟುಮಾಡುತ್ತದೆ. ತಮ್ಮ ಜ್ಞಾನ, ಅನುಭವ, ಶಿಸ್ತು, ಪ್ರೀತಿ ಮತ್ತು ಮಾರ್ಗದರ್ಶನದ ಮೂಲಕ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ತಾವು, ಸಹೋದ್ಯೋಗಿಗಳ ಮನಸ್ಸಿನಲ್ಲಿ ಸದಾ ಅಚ್ಚಳಿಯದ ನೆನಪಾಗಿ ಉಳಿಯುವಿರಿ. ನಿಮ್ಮ ಸರಳತೆ, ಸೌಜನ್ಯ, ಸ್ನೇಹಪರತೆ ಹಾಗೂ ಸೇವಾ ಮನೋಭಾವ ಎಲ್ಲರಿಗೂ…

Read More

ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರಾಜಕತೆ: ಅಪರಾಧಿ-ಮಾದಕ ದಂಧೆಗಾರರಿಗೆ ಪೊಲೀಸ್ ರಕ್ಷಣೆ ಆರೋಪ

ಕುಂಬಳೆ: ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅಪರಾಧಿ ಗುಂಪುಗಳು ಹಾಗೂ ಮಾದಕ ದ್ರವ್ಯ ಮಾಫಿಯಾಗಳಿಗೆ ಪೊಲೀಸರು ಪರೋಕ್ಷ ರಕ್ಷಣೆ ನೀಡುತ್ತಿದ್ದಾರೆ ಎಂದು ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ಮುಖಂಡ ಅಶ್ರಫ್ ಕಾರ್ಲ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಇದು ಒಂಟಿ ಘಟನೆ ಅಲ್ಲ, ಈ ಹಿಂದೆ ಸಹ ಅನೇಕ…

Read More

ಯುಡಿಎಫ್ ಬಂದರೆ ಮಹಿಳೆಯರಿಗೆ ಉಚಿತ ಪ್ರಯಾಣ: ಹೊಸ ತಂತ್ರದೊಂದಿಗೆ ಕುಂಬಳೆ ಮರ್ಚೆಂಟ್ ಯೂತ್ ವಿಂಗ್

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್ ಸಿಬ್ಬಂದಿ ಹಾಗೂ ಮರ್ಚೆಂಟ್ ಯೂತ್ ವಿಂಗ್ ಕಾರ್ಯಕರ್ತರ ನಡುವೆ ಟ್ರಾಫಿಕ್ ಪರಿಷ್ಕರಣೆ ವಿಚಾರವಾಗಿ ಉದ್ವಿಗ್ನತೆ ಉಂಟಾದ ಬೆನ್ನಲ್ಲೇ, ಮರ್ಚೆಂಟ್ ಯೂತ್ ವಿಂಗ್ ನಾಯಕರು ಹೊಸ ತಂತ್ರದೊಂದಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಯುಡಿಎಫ್ ಆಡಳಿತಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಸೂಚಿಸುತ್ತಿರುವ ಸಂದರ್ಭದಲ್ಲಿ, ಯುಡಿಎಫ್ ಚುನಾವಣಾ ಭರವಸೆಗಳಲ್ಲಿ ಒಂದಾದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಗಮನದಲ್ಲಿಟ್ಟು, ಹೆಚ್ಚು ಮಹಿಳಾ ಪ್ರಯಾಣಿಕರಿರುವ ಕುಂಬಳೆ–ಸೀತಾಂಗೋಳಿ–ಬದಿಯಡ್ಕ–ಪೆರ್ಲ–ಮುಳ್ಳೇರಿಯಾ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿ…

Read More

ಉಪ್ಪಳದಲ್ಲಿ ಐವತ್ತು ಲಕ್ಷ ರೂಪಾಯಿ ದರೋಡೆ ಪ್ರಕರಣ: ಸೂತ್ರಧಾರ ಛತ್ತೀಸ್‌ಗಢದಲ್ಲಿ ಬಂಧನ

ಕಾಸರಗೋಡು ಜಿಲ್ಲೆಯ ಉಪ್ಪಳ ಪಟ್ಟಣದಲ್ಲಿ 2024ರ ಮಾರ್ಚ್ 27ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ನಡೆದ ಐವತ್ತು ಲಕ್ಷ ರೂಪಾಯಿ ದರೋಡೆ ಪ್ರಕರಣದ ಮುಖ್ಯ ಸೂತ್ರಧಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ರಾಮ್ಜಿ ನಗರ ನಿವಾಸಿಯಾದ ಅರುಮುಖನ್ ಅಲಿಯಾಸ್ ಕಿಟ್ಟು (55) ಬಂಧಿತ ಆರೋಪಿ. ಘಟನೆ ಬಳಿಕ ಛತ್ತೀಸ್‌ಗಢದಲ್ಲಿ ಅಡಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಜೇಶ್ವರ ಎಸ್‌ಐ ದಿನೇಶ್ ರಾಜನ್ ನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಉಪ್ಪಳ ಪಟ್ಟಣದ ಆಕ್ಸಿಸ್ ಬ್ಯಾಂಕ್…

Read More

ಉಪ್ಪಳ ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ: ಹೊಸ ಉಚಿತ ಪಾರ್ಕಿಂಗ್ ವ್ಯವಸ್ಥೆ ಆರಂಭ

ಉಪ್ಪಳ ಪಟ್ಟಣದಲ್ಲಿ ತೀವ್ರಗೊಂಡಿದ್ದ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಹೊಸ ಪಾರ್ಕಿಂಗ್ ಸೌಲಭ್ಯವನ್ನು ಆರಂಭಿಸಿದೆ.ಪ್ರಸ್ತುತ ಬಸ್ ನಿಲ್ದಾಣದ ಸಮೀಪದ ಮೇಲ್ಸೇತುವೆ ಕೆಳಭಾಗದಲ್ಲಿ ಬಹುತೇಕ ವಾಹನಗಳು ನಿಲ್ಲಿಸಲಾಗುತ್ತಿವೆ. ಆದರೆ ಅನೇಕ ವಾಹನಗಳು ಬೆಳಗ್ಗೆಯೇ ಬಂದು ರಾತ್ರಿ ಮಾತ್ರ ತೆರಳುತ್ತಿರುವುದರಿಂದ ವ್ಯಾಪಾರ ಸಂಸ್ಥೆಗಳ ಅಗತ್ಯಕ್ಕಾಗಿ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಉಪ್ಪಳ ಬಸ್ ನಿಲ್ದಾಣದ ಸಮೀಪ ಮೀನು ಮಾರುಕಟ್ಟೆ…

Read More

ಸೀತಾಂಗೋಳಿಯಲ್ಲಿ ಹಗಲು ಹೊತ್ತಿನ ಹತ್ಯೆ ಆತಂಕ: ಗೂಂಡಾಗಿರಿ ತಡೆಗೆ ಕಠಿಣ ಕ್ರಮಕ್ಕೆ ಸ್ಥಳೀಯರ ಆಗ್ರಹ

ಕುಂಬಳೆ ಪಂಚಾಯತ್ ವ್ಯಾಪ್ತಿಯ ಸೀತಾಂಗೋಳಿಯಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರೂ, ಸೀತಾಂಗೋಳಿ ಪ್ರದೇಶದಲ್ಲಿ ಸಂಜೆ ಬಳಿಕ ಗೂಂಡಾಗಳ ಅಟ್ಟಹಾಸ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಸ್ಥಳೀಯರ ಪ್ರಕಾರ, ರಸ್ತೆ ಮೂಲಕ ಸಂಚರಿಸುವ ಬಸ್ಸುಗಳನ್ನೂ ಅಡ್ಡಗಟ್ಟಿ ನಿಲ್ಲಿಸಿದ ಘಟನೆಗಳು ಹಲವು ಬಾರಿ ನಡೆದಿದೆ. ಸೀತಾಂಗೋಳಿಯಲ್ಲಿ ಹೆಸರಿಗೆ ಮಾತ್ರ ಪೊಲೀಸ್ ಹೆಡ್ ಪೋಸ್ಟ್ ಇದ್ದು, ಅಲ್ಲಿ ಒಬ್ಬರು ಅಥವಾ ಇಬ್ಬರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ ಎನ್ನಲಾಗಿದೆ….

Read More

ಪೊಸೋಟು ಹೊಳೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ : ಮಲತ್ಯಾಜ್ಯ ಸುರಿಯುತ್ತಿರುವ ದಂಧೆಗೆ ಸಾರ್ವಜನಿಕರ ಆಕ್ರೋಶ

​ಮಂಜೇಶ್ವರ: ಗಡಿ ಭಾಗದ ಮಂಜೇಶ್ವರದ ಪೊಸೋಟು ಹೊಳೆ ಇದೀಗ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೇಪ್ಟಿ ಟ್ಯಾಂಕ್‌ಗಳಿಂದ ಸಂಗ್ರಹಿಸಿದ ಶೌಚಾಲಯ ಮಾಲಿನ್ಯ (ಮಲತ್ಯಾಜ್ಯ) ವನ್ನು ಟ್ಯಾಂಕರ್‌ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ​ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸದ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ…

Read More

ಮಹಿಳಾ ಮೀಸಲಾತಿ ಮಸೂದೆ ವಿರೋಧದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ: ಕೆ. ರಂಜಿತ್ ಆರೋಪ

ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಜನತೆ ತಮ್ಮ ಹಕ್ಕಿನ ಪ್ರತಿನಿಧಿತ್ವವನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಆರೋಪಿಸಿದರು. ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಹೊಸ ಬಸ್ ನಿಲ್ದಾಣದ ಬಳಿ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಸೂದೆ ಅಂಗೀಕಾರವಾಗಿದ್ದರೆ ಕೇರಳಕ್ಕೆ ಲೋಕಸಭೆಯಲ್ಲಿ 30 ಸ್ಥಾನಗಳು ದೊರೆಯಬಹುದಾಗಿತ್ತು. ಆದರೆ…

Read More

ಮಂಜೇಶ್ವರದಲ್ಲಿ ಕೋಳಿ ಸಾಗಾಟ ಲಾರಿ ಚಾಲಕನ ಹತ್ಯೆ: ಆರೋಪಿ ಶ್ರೀನಿವಾಸ 24 ಗಂಟೆಯಲ್ಲಿ ಬಂಧನ

ಮಂಜೇಶ್ವರ: ಸೀತಾಂಗೋಳಿಯ ಮದ್ಯದಂಗಡಿಯ ಸಮೀಪ ಕೋಳಿ ಸಾಗಾಟ ಲಾರಿ ಚಾಲಕ ಶಫಾಯತ್ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಶ್ರೀನಿವಾಸನನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿದ್ದಾರೆ. ಹಳೆ ದ್ವೇಷ ಹಾಗೂ ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿಯೇ ಈ ಘೋರ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ. ​ ಸೋಮವಾರ ಶಫಾಯತ್ ಮತ್ತು ತಂಡದ ನಡುವೆ ಮದ್ಯ ಸೇವಿಸುವಾಗ ಗಲಾಟೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಮಂಗಳವಾರ ಮಧ್ಯಾಹ್ನ ಶಫಾಯತ್ ನಿರ್ಜನ ಕಟ್ಟಡದ ಹಿಂದೆ ಮದ್ಯ ಸೇವಿಸುತ್ತಿದ್ದಾಗ, ಆರೋಪಿ…

Read More

ಉಪ್ಪಳ ಎಟಿಎಂ ದರೋಡೆ ಪ್ರಕರಣ: ಮುಖ್ಯ ಸಂಚುಗಾರ ಕಿಟ್ಟು ಬಂಧನ

​ಮಂಜೇಶ್ವರ: ಉಪ್ಪಳದಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ ಸುಮಾರು ಅರ್ಧ ಕೋಟಿ ರೂಪಾಯಿಗಳನ್ನು ಹಗಲು ವೇಳೆಯೇ ದೋಚಿದ್ದ ಪ್ರಕರಣದ ಮುಖ್ಯ ಸಂಚುಗಾರನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ಮೂಲದ ಆರುಮುಖಂ (ಕಿಟ್ಟು) ಬಂಧಿತ ಆರೋಪಿ. ಈತ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ​ಮಂಜೇಶ್ವರ ಎಸ್‌ಐ ದಿನೇಶ್ ರಾಜನ್ ನೇತೃತ್ವದ ತಂಡವು ಛತ್ತೀಸ್‌ಗಢದ ಅಡಗುತಾಣದಲ್ಲಿ ಈತನನ್ನು ಅತಿ ಸಾಹಸಿಕವಾಗಿ ಸೆರೆಹಿಡಿದಿದೆ. 2024ರ ಮಾರ್ಚ್ 27ರಂದು ಖಾಸಗಿ ಏಜೆನ್ಸಿಯ ವ್ಯಾನ್ ಗಾಜು ಒಡೆದು ಹಣದ ಪೆಟ್ಟಿಗೆಯನ್ನು ಕದಿಯಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ…

Read More
error: Content is protected !!