ಹೊಸಂಗಡಿ ಶ್ರೀ ಅಯ್ಯಪ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ: ಮೇ 2ರಂದು ನವಕಲಶಾಭಿಷೇಕ, ತುಪ್ಪಾಭಿಷೇಕ

ಶ್ರೀ ಅಯ್ಯಪ ಕ್ಷೇತ್ರ ಹೊಸಂಗಡಿ ಶ್ರೀ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿಗೆ ನವಕಲಶಾಭಿಷೇಕ ಹಾಗೂ ತುಪ್ಪಾಭಿಷೇಕ ಕಾರ್ಯಕ್ರಮವು 02-05-2026ರಂದು ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳು ನಡಿಬೈಲು ಬ್ರಹ್ಮಶ್ರೀ ಗೋವಿಂದ ಭಟ್ ಅವರ ನೇತೃತ್ವದಲ್ಲಿ ನೆರವೇರಲಿವೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6:00 ಗಂಟೆಗೆ ಗಣಪತಿ ಹೋಮ, 8:00 ಗಂಟೆಗೆ ನಿತ್ಯಪೂಜೆ, 8:30ಕ್ಕೆ ಭಜನಾ ಕಾರ್ಯಕ್ರಮ, 11:00 ಗಂಟೆಗೆ ನವಕಲಶಾಭಿಷೇಕ ಹಾಗೂ ಮಧ್ಯಾಹ್ನ 12:00 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ ನಡೆಯಲಿದೆ. ಬಳಿಕ…

Read More

ಮಂಜೇಶ್ವರದಲ್ಲಿ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನ

ಮಂಜೇಶ್ವರ: ಮಂಜೇಶ್ವರದ ಅಭಿವೃದ್ಧಿಯ ಹರಿಕಾರ, ತುಳುನಾಡಿನ ಕಮ್ಯುನಿಷ್ಟ್ ಚಳುವಳಿಯ ಅಗ್ರಗಣ್ಯ ನೇತಾರ ಹಾಗೂ ಮಂಜೇಶ್ವರದ ಮಾಜಿ ಶಾಸಕ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನವು ಮಂಜೇಶ್ವರದ ಥೋಮಸ್ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಜರಗಿತು.​ಸಿಪಿಐ ಹಿರಿಯ ನಾಯಕ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,(Byt1) “ರಾಮಪ್ಪ ಮಾಸ್ಟರ್ ಅವರು ನಮ್ಮ ಸಂಘಟನಾ ಚಟುವಟಿಕೆಗಳಿಗೆ ನಿರಂತರವಾಗಿ ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು….

Read More

ಕುಂಬಳೆ ಸೀತಾಂಗೋಳಿಯಲ್ಲಿ ಕೋಳಿ ವಾಹನ ಚಾಲಕನನ್ನು ತಲೆಗೆ ಹೊಡೆದು ಹತ್ಯೆ

ಕಾಸರಗೋಡು ಜಿಲ್ಲೆಯ ಕುಂಬಳೆ ಸೀತಾಂಗೋಳಿಯಲ್ಲಿ ಜನರಿಲ್ಲದ ಕಟ್ಟಡದ ಹಿಂಭಾಗದಲ್ಲಿ ಕೋಳಿ ವಾಹನ ಚಾಲಕನನ್ನು ತಲೆಗೆ ಹೊಡೆದು ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಪ್ಪಾಳಿ ಪೊನ್ನಂ ಪಾಡಲಡುಕ್ಕಂ ನಿವಾಸಿ ಸಫಾಯತ್ (30) ಮೃತಪಟ್ಟ ವ್ಯಕ್ತಿ.ಪ್ರಾಥಮಿಕ ಮಾಹಿತಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹತ್ಯೆ ನಡೆದಿರಬಹುದು ಆಂದಾಜಿಸಲಾಗಿದೆ. ಘಟನೆ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಯಿತು. ಸ್ಥಳೀಯರು ಮೃತದೇಹವನ್ನು ಕಂಡು ಕುಂಬಳೆಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ . ಮೃತದೇಹದ ಇನ್‌ಕ್ವೆಸ್ಟ್ ಪ್ರಕ್ರಿಯೆ…

Read More

ರಸ್ತೆಯಲ್ಲೇ ಬಸ್ ನಿಲುಗಡೆ: ತಲಪಾಡಿಯಲ್ಲಿ ತಪ್ಪದ ಅಪಘಾತದ ಭೀತಿ – ಬಸ್ ಚಾಲಕರ ವಿರುದ್ಧ ಕ್ರಮಕ್ಕೆ ಸ್ಥಳೀಯರ ಆಗ್ರಹ.

​ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಭಾಗವಾದ ತಲಪಾಡಿಯ ಕೇರಳ ಖಾಸಗಿ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳನ್ನು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ನಿಲುಗಡೆಗೊಳಿಸುತ್ತಿರುವ ಪರಿಣಾಮ, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಸ್ಸುಗಳನ್ನು ನಿಲುಗಡೆಗೆ ನೀಡಿದ ನಿಲ್ದಾಣದ ಒಳಗೆ ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿರುವುದು ದೊಡ್ಡ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಕುಂಜತ್ತೂರು ಹಾಗೂ ತೂಮಿನಾಡು ಭಾಗದಿಂದ ಮಂಗಳೂರು ಕಡೆಗೆ ತೆರಳುವ ಖಾಸಗಿ ಬಸ್ಸುಗಳು ರಸ್ತೆಯ ಮಧ್ಯದಲ್ಲೇ ಸಾಲುಗಟ್ಟಿ ನಿಲ್ಲುತ್ತಿವೆ. ಇದರಿಂದಾಗಿ ಬಲ ಭಾಗದಿಂದ ವೇಗವಾಗಿ ಬರುವ ಇತರ ವಾಹನಗಳ ಚಾಲಕರಿಗೆ…

Read More

ಕಾರಿನಲ್ಲಿ ಸಾಗಿಸುತ್ತಿದ್ದ 43 ಗ್ರಾಂ ಎಂಡಿಎಂಎ ವಶ: ಮೂವರು ಬಂಧನ

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 43 ಗ್ರಾಂ ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕಾಸರಗೋಡು ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿ.ಎ. ಮೊಹಮ್ಮದ್ ಸಹಲ್, ಎರ್ನಾಕುಲಂ edws ಜಿಲ್ಲೆಯ ನಾರ್ತ್ ಪರವೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರುಣ್ ಕುಮಾರ್ ಹಾಗೂ ವಡಕರಾ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಪಿ. ಅನುಷ್ ಎಂ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಸುಮಾರು 7.30ರ ವೇಳೆಗೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾವೂರಿನಲ್ಲಿ ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕ ವಸ್ತುವನ್ನು…

Read More

ಮಂಜೇಶ್ವರದಲ್ಲಿ ಭಾರಿ ಡ್ರಗ್ಸ್ ಬೇಟೆ: 50 ಗ್ರಾಂ ಎಂಡಿಎಂಎ ಸಹಿತ ಮೂವರು ಯುವಕರ ಬಂಧನ

​ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಸಹಿತ ಮೂವರು ಯುವಕರನ್ನು ಮಂಜೇಶ್ವರ ಪೊಲೀಸರು ಮತ್ತು ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ. ​ ಕಾಸರಗೋಡು ಆಲಂಪಾಡಿ ಟಿಪ್ಪು ನಗರ ನಿವಾಸಿ ​ಸಿ.ಎ. ಮೊಹಮ್ಮದ್ ಸಹಲ್, ಎರ್ನಾಕುಲಂ ನಾರ್ತ್ ಪರವೂರು ನಿವಾಸಿ ಅರುಣ್ ಕುಮಾರ್ ಹಾಗೂ ಕೋಝಿಕೋಡ್ ವಡಕರ ಪುತ್ತೂರು ನಿವಾಸಿ ಎಂ.ಪಿ….

Read More

ಉದ್ಯಾವರದಲ್ಲಿ ದಶಕಗಳ ವೋಲ್ಟೇಜ್ ಸಮಸ್ಯೆಗೆ ಅಂತ್ಯ: ಭಿನ್ನಚೇತನ ನಾಸಿರ್ ಅವರ ಏಕಾಂತ ಹೋರಾಟಕ್ಕೆ ಜಯ

ಮಂಜೇಶ್ವರ “ಹೋರಾಟಕ್ಕೆ ದೈಹಿಕ ಶಕ್ತಿಗಿಂತ ಮನಸ್ಸಿನ ಶಕ್ತಿ ಮುಖ್ಯ” ಎಂಬುದನ್ನು ಉದ್ಯಾವರ ಬಿ. ಎಸ್. ನಗರದ ನಿವಾಸಿ ನಾಸಿರ್ ಕೆ. ಅವರು ಸಾಬೀತುಪಡಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅವರು ನಡೆಸಿದ ನಿರಂತರ ಏಕಾಂತ ಹೋರಾಟದ ಫಲವಾಗಿ, ದಶಕಗಳ ವೋಲ್ಟೇಜ್ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಕ್ಕಿದೆ. ಉದ್ಯಾವರದ ಬಿ. ಎಸ್. ನಗರ ಭಾಗದಲ್ಲಿ ದೀರ್ಘಕಾಲದಿಂದ ಕಡಿಮೆ ವೋಲ್ಟೇಜ್ ಸಮಸ್ಯೆಯಿತ್ತು. ಇದರಿಂದಾಗಿ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗುತ್ತಿದ್ದುದು ಮಾತ್ರವಲ್ಲದೆ, ದೈನಂದಿನ ಜೀವನವೂ ಕಷ್ಟಕರವಾಗಿತ್ತು. ಈ ಬಗ್ಗೆ ಸ್ಥಳೀಯವಾಗಿ ಹಲವು ಬಾರಿ…

Read More

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆದ ಬ್ರಹ್ಮಕಲಶಾಭಿಷೇಕೋತ್ಸವ – ಭರಣಿ ಮಹೋತ್ಸವಕ್ಕೆ ಸಜ್ಜು

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಶ್ರೀ ಭಗವತೀ ಮಾತೆ ಹಾಗೂ ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವವು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು.ಬಡಾಜೆ ಬೂಡು ಶ್ರೀ ಮಹಾಗಣಪತಿ ದೇವರ ಅನುಗ್ರಹದಿಂದ ಹಾಗೂ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ ಅವರ ದಿವ್ಯಹಸ್ತದಿಂದ, ಡಾ ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಏಪ್ರಿಲ್ 18ರಿಂದ 23ರವರೆಗೆ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವವು ಜರುಗಿತು ಏಪ್ರಿಲ್ 18ರಂದು ಹಸಿರು ಹೊರೆಕಾಣಿಕೆ…

Read More

ಅಕ್ರಮ ಮರಳು ದಂಧೆ: ಇಬ್ಬರ ಬಂಧನ – ಲಾರಿ ವಶಕ್ಕೆ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನದಿಯಿಂದ ಮರಳು ಕದ್ದೊಯ್ಯುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅಮೀನಡ್ಕ ಕಲ್ಲಿಗೆ ಹೌಸ್‌ನ ಸದಾನಂದ (55) ಹಾಗೂ ಟಿಪ್ಪರ್ ಲಾರಿ ಚಾಲಕ ಬಡಾಜೆ ಕನಿಲ ಹೌಸ್‌ನ ಸಾಕೀರ್ (31) ಬಂಧಿತರು. ಪೊಲೀಸ್ ಉಪನಿರೀಕ್ಷಕ ವೈಷ್ಣವ್ ರಾಮಚಂದ್ರ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಮರಳು ಸಾಗಣೆಗೆ ಬಳಸಿದ್ದ ಟಿಪ್ಪರ್ ಲಾರಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಕಾರ, ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಹಲವು ಬಾರಿ ಎಚ್ಚರಿಕೆ…

Read More

ಪೊಸೋಟ್ ಸೇತುವೆ ಕೆಳಗೆ ಶೌಚಾಲಯ ಮಲಿನ ನೀರು – ಸ್ಥಳೀಯರಲ್ಲಿ ಆತಂಕ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೊಸೋಟ್ ಸೇತುವೆ ಕೆಳಭಾಗದಲ್ಲಿ ರಾತ್ರಿ ವೇಳೆ ಟ್ಯಾಂಕರ್ ಲಾರಿಗಳ ಮೂಲಕ ಶೌಚಾಲಯ ಮಲಿನ ನೀರನ್ನು ನದಿಗೆ ಬಿಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಮಲಿನ ನೀರು ನದಿಗೆ ಹರಿಯುವುದರಿಂದ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಮನೆಗಳ ಬಾವಿಗಳಿಗೂ ಈ ಮಲಿನ ನೀರು ಸೇರಿಕೊಂಡಿರುವುದಾಗಿ ಆರೋಪಿಸಲಾಗಿದೆ. ಇದೇ ಪ್ರದೇಶದಲ್ಲಿ…

Read More
error: Content is protected !!