ಸಹಸ್ರಾರು ಕಣ್ಣುಗಳು ಕಣ್ತುಂಬಿಕೊಂಡ ಚಾಮುಂಡಿಕುನ್ನು ಕಳಿಯಾಟ ಮಹೋತ್ಸವ 2025 …!

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದಲ್ಲಿರುವ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಸಂಪನ್ನ ಗೊಂಡಿತ್ತು. ಕೊನೆಯ ದಿನವಾದ ನಿನ್ನೆ ಪುಮಾರುತನ್, ರಕ್ತ ಚಾಮುಂಡಿ, ಭಗವತಿ, ವಿಷ್ಣು ಮೂರ್ತಿ, ಧೂಮಾವತಿ, ಗುಳಿಗ ಎಂಬೀ ದೈವಗಳು ಭಕ್ತರಿಗೆ ದರ್ಶನವನ್ನು ನೀಡಿತ್ತು. ಐತಿಹಾಸಿಕ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಕ್ಕೂ ಅಧಿಕ ಸಂಖ್ಯೆಯ ರಾಜ್ಯ ಅಂತರರಾಜ್ಯದ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿದ್ದರು. ಭಕ್ತರಿಗೆ ದರ್ಶನವನ್ನು ನೀಡಿ ತನು ಮನವನ್ನು ಭಕ್ತಿಯ ಸಾಕ್ಷಾತ್ಕಾರದತ್ತ ಕೊಂಡು ಹೋದ ದಿವ್ಯ ತೇಜಸ್ಸಿನ…

Read More

ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಪ್ರಥಮ ವಾರ್ಷಿಕ – ಮಧೂರಿನಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ಸುಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಶಪ್ರೇಮ, ದೇವಭಕ್ತಿ ,ಸನಾತನ ಧರ್ಮ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಇದರ ಪ್ರಥಮ ವಾರ್ಷಿಕವನ್ನು ಭಕ್ತಿಪೂರ್ವಕವಾಗಿ ಶ್ರದ್ಧ ಭಕ್ತಿಯಿಂದ ಹರಿನಾಮ ಸಂಕೀರ್ತನೆಯೊಂದಿಗೆ ಆಚರಿಸಲಾಯಿತು.ತಂಡದ ಸ್ಥಾಪಕರಾದ ಧಾರ್ಮಿಕ ,ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ರವರ ಮುಂದಾಳುತ್ವದಲ್ಲಿ ಹಾಗು ತಂಡದ ಪೋಷಕರಾದ ಶ್ರೀ ಪ್ರಶಾಂತ್ ಭಟ್ ಚಕ್ರತೀರ್ಥ,ಖ್ಯಾತ ವಕೀಲರಾದ ಶ್ರೀ ರಾಮ್ ಪ್ರಸಾದ್ ಮಂಗಳೂರು,ಶ್ರೀ ಯತೀಶ್ ಕುಂಜತ್ತೂರು ,ಶ್ರೀ ಶ್ರೀಕಾಂತ್ ಮುಂಬೈ ಇವರ ಸಹಕಾರದೊಂದಿಗೆ…

Read More

ಖೇಲೋ ಇಂಡಿಯಾ ಅಸ್ಮಿತಾ ಪೆನ್ಚಕ್ ಸಿಲಾಟ್ ಲೀಗ್ 2025–26 : ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಮಂಜೇಶ್ವರ: ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಗಮನ ಸೆಳೆಯುತ್ತಿರುವ ಪೀಸ್ ಕ್ರಿಯೇಟಿವ್ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಡಿವೈಇಎಸ್ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಖೇಲೋ ಇಂಡಿಯಾ ಅಸ್ಮಿತಾ ಪೆನ್ಚಕ್ ಸಿಲಾಟ್ ಲೀಗ್ 2025–26 ಕರಾಟೆ ಸ್ಪರ್ಧೆಯಲ್ಲಿ ತಮ್ಮ ಶೈಲಿಯ ಪ್ರದರ್ಶನದಿಂದ ರಾಜ್ಯ ಮಟ್ಟದಲ್ಲಿ ಕೀರ್ತಿ ತುಂಬಿ ಮತ್ತೊಮ್ಮೆ ಸದ್ದಿಲ್ಲದೆ ಸುದ್ದಿಯಾಗಿದ್ದಾರೆ. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಶಾಲೆಯಿಂದ ಒಟ್ಟು 13 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 6 ಚಿನ್ನ, 3 ಬೆಳ್ಳಿ ಹಾಗೂ…

Read More

ಶ್ರೀ ಕೃಷ್ಣ ಶಿವಕೃಪಾ ನೇತೃತ್ವದ ಭಾರತಾಂಭ ತಂಡಕ್ಕೆ ಪ್ರಥಮ ವಾರ್ಷಿಕ- ನಾಳೆ ಮಧೂರಿನಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗತವೈಭವದ 100 ನೇ ವರ್ಷಾಚರಣೆ ಮಾಡುತ್ತಿರುವ ಸುಸಂದರ್ಭದಲ್ಲಿ “ದೇಶಪ್ರೇಮ, ದೇವ ಭಕ್ತಿಸನಾತನ ಧರ್ಮ” ಎಂಬ ಧೈಯದೊಂದಿಗೆ ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಇವರ ನೇತೃತ್ವದಲ್ಲಿ ಭಾರತಾ೦ಬ ತ೦ಡ ಪ್ರಾರಂಭಿಸಲಾಗಿತ್ತು. ಇದೀಗ ಒಂದನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಹಲವಾರು ತೀರ್ಥ ಕ್ಷೇತ್ರಗಳಲ್ಲಿ ಹರಿನಾಮ ಸಂಕೀರ್ತನೆ ಮಾಡಿದ್ದಲ್ಲದೆ ತಂಡದ ಹೆಸರಿನಲ್ಲಿ ವಿವಿಧ ರೀತಿಯ ಸೇವೆಗಳನ್ನು ನಡೆಸುತ್ತಾ ಬರಲಾಗಿದೆ. ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನ.30ಕ್ಕೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ…

Read More

ಮಂಜೇಶ್ವರ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ

ಮಂಜೇಶ್ವರ : ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲೇ ಜನ ಮನ್ನಣೆಯನ್ನು ಪಡೆದಿರುವ ಮಂಜೇಶ್ವರ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26 ನೇ ಅಧ್ಯಯನ ವರ್ಷದ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ ಹಾಗೂ ಸಡಗರದೊಂದಿಗೆ ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿತು. ತಂದೆ ತಾಯಿ ಶಿಕ್ಷಕರನ್ನು ಹೇಗೆ ಯಾವ ರೀತಿಯಲ್ಲಿ ಗೌರವಿಸಬೇಕು ಎಂಬುದರ ಬಗ್ಗೆ ಅರಿವನ್ನು ಮೂಡಿಸುವ ಜೊತೆಯಾಗಿ “ಜ್ಞಾನ ಬೆಳೆದಂತೆ, ವ್ಯಕ್ತಿತ್ವದ ಮಟ್ಟವೂ ಎತ್ತರವಾಗುತ್ತದೆ” ಎಂಬ ಘೋಷಣೆಯೊಂದಿಗೆ ಎಲ್ಲಾ…

Read More

ಚಿತ್ತಾರಿಯಲ್ಲಿರುವ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ … ! ಉಲ್ಪೆ ಸಮರ್ಪಣೆ

ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕೇರಳ ಥೆಯ್ಯಮ್ ಆಚರಣೆಗೆ ಪ್ರಸಿದ್ದ. ಕರ್ನಾಟಕದ ಕರಾವಳಿ ಜಿಲ್ಲೆ ಅರ್ಥಾತ್ ತುಳುನಾಡೆಂದು ಪರಿಗಣಿಸಿಲ್ಪಟ್ಟ ಅವಿಭಜಿತ ದಕ್ಷಿಣ ಕನ್ನಡ ಭೂತಾರಾಧನೆ ಗೆ ಪ್ರಸಿದ್ದ, ಕೇರಳದ ಥೆಯ್ಯಮ್ ಕುರಿತು ಒಂದು ನೊಟ ಇಲ್ಲಿದೆ. ಚಂದ್ರಗಿರಿ ನದಿಯ ದಕ್ಷಿಣದ ಪುಣ್ಯ ಕ್ಷೇತ್ರ ,ಕಾವು, ಗುಡಿಗಳಲ್ಲಿ ಕಳಿಯಾಟ ಮಹೋತ್ಸವ ಎಂಬ ವಿಶಿಷ್ಟ ಆರಾಧನೆ ವೃಶ್ಚಿಕ ಮಾಸದಲ್ಲಿ ನಡೆಯುತ್ತದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೂರದ ಊರುಗಳಿಂದಲ್ಲು ಭಕ್ತರು ಬಂದು ಹರಕೆ…

Read More

ಕಾಸರಗೋಡಿನಲ್ಲಿ ಪತ್ತೆಯಾದ ಮಹಾಶಿಲಾ ಸಂಸ್ಕೃತಿಯ ಗುಹೆ , ಉತ್ಪನನದಲ್ಲಿ ಮಡಿಕೆ ಅವಶೇಷ, ಕಬ್ಬಿಣದ ಉಪಕರಣಗಳು ಪತ್ತೆ …. !

ಕಾಸರಗೋಡು:ಕುಟ್ಟಿಕೋಲ್ ಪಂಚಾಯತ್‌ ಬಂದಡ್ಕ ಮಣಿಮೂಲ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸಿದ ಇತ್ತೀಚಿನ ಉತ್ಪನನ ಕಾರ್ಯದಲ್ಲಿ ಮಹಾಶಿಲಾ ಸಂಸ್ಕೃತಿಗೆ ಸೇರಿದ ನೂತನ ಅವಶೇಷಗಳು ಪತ್ತೆಯಾಗಿದ್ದು, ಇಲ್ಲಿ ಪುರಾತನ ಮಾನವ ವಾಸದ ಇತಿಹಾಸಕ್ಕೆ ಮತ್ತೊಂದು ದೃಢ ಸುಳಿವು ಸಿಕ್ಕಂತಾಗಿದೆ. ಕಲ್ಪತಾಯಮ ಪ್ರದೇಶದಲ್ಲಿ ನಡೆದ ಅಧ್ಯಯನದ ವೇಳೆ ಮುರಿದ ಮಡಿಕೆ ತುಂಡುಗಳು, ಕಬ್ಬಿಣದ ಉಳಿ, ಮತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದು, ತಜ್ಞರ ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.ಇದಕ್ಕೂ ಮೊದಲು, ಏಪ್ರಿಲ್ 4ರಂದು ಜಲಜೀವನ ಯೋಜನೆಗಾಗಿ ನಡೆದ…

Read More

ಅರುವತ್ತು ಸಾವಿರ ಕೋಟಿ ಗ್ರಾಹಕರ ಠೇವಣಿ ತುಂಬಿದ ಕೇರಳ ಗ್ರಾಮೀಣ ಬ್ಯಾಂಕ್

ಮಂಜೇಶ್ವರ :ಕೃಷಿಕರ ಬ್ಯಾಂಕ್ ಎಂದು ಪ್ರಸಿದ್ದಿ ಪಡೆದಿರುವ ಕೇರಳ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 635 ಶಾಖೆ ಹೊಂದಿರುವ ಬ್ಯಾಂಕಿನಲ್ಲಿ ಅರುವತ್ತು ಸಾವಿರ ಕೋಟಿ ಗ್ರಾಹಕರ ಠೇವಣಿ ತುಂಬಿದ ಈ ಸಂದರ್ಭದಲ್ಲಿ ಗ್ರಾಹಕರು ಕೃಷಿಕರು ಬ್ಯಾಂಕ್ ಸಿಬ್ಬಂದಿಗಳು ಸೇರಿ ಕೇಕ್ ಕತ್ತರಿಸುವ ಮೂಲಕ ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನನಲ್ಲಿ ಸಂತೋಷ ಕೂಟ ಆಚರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾವೂರು ಶಾಖೆಯ ಮೆನೇಜರ್ ಶ್ರುತಿ C. ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ನೆರವೇರಿಸಿದರು…

Read More

ಮಂಜೇಶ್ವರದಲ್ಲಿ ಬಿಸಿಯೇರುತ್ತಿರುವ ಸ್ಥಳೀಯಾಡಳಿತ ಚುನಾವಣಾ ಚಟುವಟಿಕೆ : ಯುಡಿಎಫ್ ಮಂಜೇಶ್ವರ ಎರಡನೇ ವಾರ್ಡ್ ಕಚೇರಿ ಉದ್ಘಾಟನೆ

ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿಸಿಯೇರುತ್ತಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡಿನ ಯು ಡಿ ಎಫ್ ಚುನಾವಣಾ ಕಚೇರಿಯನ್ನು ವಡಗರ ಸಂಸದ ಶಾಫಿ ಪರಂಬಿಲ್ ಉದ್ಘಾಟಿಸಿದರು.ಉದ್ಘಾಟನಾ ಸಮಾರಂಭವು ಉತ್ಸಾಹಭರಿತ ವಾತಾವರಣದಲ್ಲಿ ನಡೆದಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ದೊಡ್ಡ ಉಪಸ್ಥಿತಿ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಎರಡನೇ ವಾರ್ಡ್ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು, ಜಿಲ್ಲಾ ಪಂಚಾಯತ್ ವರ್ಕಾಡಿ ಡಿವಿಷನ್ ಅಭ್ಯರ್ಥಿ ಹರ್ಷಾದ್ ವರ್ಕಾಡಿ ಸೇರಿದಂತೆ…

Read More

ಸಾರಿಗೆ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ -ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲು

ಮಂಜೇಶ್ವರ : ಸಾರಿಗೆ ಬಸ್ಸಿನಲ್ಲಿ ಸಂಚರಿಸುತಿದ್ದ ವಿದ್ಯಾರ್ಥಿನಿಗೆ ನಿರ್ವಾಹಕ ಕಿರುಕುಳ ನೀಡಿದ್ದಾನೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯನ್ನು ಇತರ ಪ್ರಯಾಣಿಕರ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಾರಿ ಮಧ್ಯೆ ಕೆಳಗಿಳಿಸಿರುವುದಾಗಿ ವಿದ್ಯಾರ್ಥಿನಿ ದೂರಿದ್ದಾಳೆ. ಮಂಗಳವಾರ ಬೆಳಿಗ್ಗೆ ಬಂದ್ಯೋಡ್ ನಲ್ಲಿ ಈ ಘಟನೆ ನಡೆದಿದೆ.ಗಡಿ ಪ್ರದೇಶದಲ್ಲಿರುವ ಕಾಲೇಜೊಂದರಲ್ಲಿ ಅಂತಿಮ ಬಿ ಸಿ ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬಂದ್ಯೋಡ್ ನಿಂದ ಕರ್ನಾಟಕ ಸಾರಿಗೆ ಬಸ್ಸು ನೋಂದಣಿ ಸಂಖ್ಯೆ ಕೆ ಎ 19 ಎಫ್ 3421 ಬಸ್ಸಿಗೆ ಹತ್ತಿದ್ದಾಳೆ. ಇಂತಹ ಪ್ರಯಾಣದ…

Read More
error: Content is protected !!