ಮಂಜೇಶ್ವರ : ಚಿಗುರುಪಾದೆ ಯಲ್ಲಿ ಪಿ.ವಿ ಭಟ್ ಸಂಸ್ಮರಣೆ , ನುಡಿನಮನ ಕಾರ್ಯಕ್ರಮ
ಮಂಜೇಶ್ವರ: ಇತ್ತೀಚಿಕೆಗೆ ನಿಧನರಾದ ಪಿ.ವಿ ಭಟ್ ಸಂಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮ ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಎನ್.ವಿಜಯಕುಮಾರ್ ರೈ ಮಾತನಾಡಿ, ಪಿ.ವಿ ಭಟ್ ಅಪ್ರತಿಮ ಸಂಘಟಣಾ ಚತುರರಾಗಿದ್ದು ಬಿಜೆಪಿ ಬೆಳವಣಿಗೆಗೆ ಹಾಗೂ ಮಂಜೇಶ್ವರ ಮತ್ತು ಮೀಂಜ ಮೊದಲಾದ ಪ್ರದೇಶಗಳಲ್ಲಿ ಸಂಘಟನೆಯನ್ನು ಬೆಳಗಿಸಲು ಪಕ್ಷದ ನೇತಾರರಾಗಿದ್ದ ಪಿ.ವಿ.ಭಟ್ ಅವರ ಕೊಡುಗೆ ಅಪಾರವಾಗಿತ್ತು. ಅವರ ತ್ಯಾಗಯುತ ಜೀವನ ಇಂದಿನ ನಾಯಕರಿಗೆ ಹಾಗೂ…