ಬೋಳೂರು ವಾರ್ಡಿನಲ್ಲಿ 40 ಲಕ್ಷ ರೂ. ಅನುದಾನದ ರಸ್ತೆ–ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ
ಮಂಗಳೂರು ಮಹಾನಗರ ಪಾಲಿಕೆಯ 27ನೇ ಬೋಳೂರು ವಾರ್ಡಿನಲ್ಲಿ 40 ಲಕ್ಷ ರೂ ವಿಶೇಷ ಅನುದಾನಲ್ಲಿ ಸುನೀಲ್ ಕುಮಾರ್ ರಸ್ತೆಯಿಂದ ಚಾರಂದಾಯ ದೈವಸ್ಥಾನ ಹಾಗೂ ಕುಚ್ಚಿಕಾಡು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಯ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಹದಗೆಟ್ಟಿರುವ ಈ ರಸ್ತೆಯ ಅಭಿವೃದ್ಧಿ ಕಾರ್ಯವು ಶೀಘ್ರವಾಗಿ ಮುಗಿದು ಜನರ ಬಳಕೆಗೆ ಸಿಗಬೇಕೆಂಬ ಉದ್ದೇಶದಿಂದ ವಿಶೇಷ ಮುತುವರ್ಜಿ ವಹಿಸಿ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಂದರು….