ಸರಕಾರಿ ಆರೋಗ್ಯ ವಲಯದ ಸುಧಾರಿತ ಸೇವಾ ಸೌಲಭ್ಯಗಳ ಪ್ರಚಾರಕ್ಕೆ ಸಾಕ್ಷ್ಯಚಿತ್ರದ ಅಭಿಯಾನ

ಕುಂಬಳೆ: ವೖಬ್ 4 ವೖಲ್ಸ್ ಹೆಲ್ತ್ ಕೇರಳ ಅಭಿಯಾನ ವಾಹನ ಪ್ರಚಾರಕ್ಕೆ ಶುಕ್ರವಾರ ಬೆಳಿಗ್ಗೆ ಕುಂಬಳೆ ಗ್ರಾ. ಪಂ. ನಲ್ಲಿ ಸ್ವಾಗತ ನೀಡಲಾಯಿತು. ಕೇರಳ ಸರಕಾರ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ತಂದ ಆರೋಗ್ಯ ಯೋಜನೆ ಮತ್ತು ಸೌಲಭ್ಯಗಳ ಪ್ರಚಾರದಂಗವಾದ ವಾಹನ ಪ್ರಚಾರ ಕುಂಬಳೆ ಗ್ರಾ. ಪಂ. ಅಂಗಣಕ್ಕೆ ಪ್ರವೇಶಿಸಿದಾಗ ಸ್ವಾಗತ ನೀಡಿ ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದರ್ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪಿ. ಖಾಲಿದ್ ಬಂಬ್ರಾಣ ಅಧ್ಯಕ್ಷತೆ…

Read More

ಕಂಠರರ್ ರಾಜೀವರ್ ವಿರುದ್ಧ ಪುರಾವೆ ಇಲ್ಲ: ತನಿಖೆಯಲ್ಲಿ ಸಂಯಮ ಅಗತ್ಯ –ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

ಕಾಸರಗೋಡು:ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ ಚಿನ್ನ ಹಗರಣ ಪ್ರಕರಣದಲ್ಲಿ ದೇವಾಲಯದ ತಂತ್ರಿಯಾಗಿರುವ ಕಂಠರರ್ ರಾಜೀವರ್ ಅವರಿಗೆ ಮಾನ್ಯ ನ್ಯಾಯಾಲಯ ಜಾಮೀನು ನೀಡಿದ್ದು, ಅವರ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವುದನ್ನು ಸಚ್ಚಿದಾನಂದ ಭಾರತಿ ಸ್ವಾಮಿಗಳು ಸ್ವಾಗತಿಸಿದ್ದಾರೆ. ಅವರು ಈ ಬಗ್ಗೆ ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹಿಂದೂ ದೇವಾಲಯ ಪರಂಪರೆಯ ರಕ್ಷಕರಾಗಿರುವ ತಂತ್ರಿಗಳು ಕೇವಲ ವ್ಯಕ್ತಿಗಳಷ್ಟೇ ಅಲ್ಲ; ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡು ಬಂದ ದೈವಿಕ ಹಾಗೂ ಅಧ್ಯಾತ್ಮಿಕ ಜವಾಬ್ದಾರಿಯ ಪ್ರತೀಕರಾಗಿದ್ದಾರೆ. ಅಂಥ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸಾಕ್ಷ್ಯ…

Read More

ಮಂಗಳೂರಿನಲ್ಲಿ MIR ನೆಟ್ ಝೀರೋ ಶೃಂಗಸಭೆ ಉದ್ಘಾಟನೆ.ಕಾರ್ಬನ್ ನ್ಯೂಟ್ರಲ್ ನಗರಗಳ ನಿರ್ಮಾಣಕ್ಕೆ ಜಾಗತಿಕ ಚಿಂತನೆ

ಮಂಗಳೂರು:ಭಾರತದ ಕಾರ್ಬನ್ ನ್ಯೂಟ್ರಲ್ ಭವಿಷ್ಯದ ನಗರಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಯಾಗಿ MIR ನೆಟ್ ಝೀರೋ ಶೃಂಗಸಭೆ ಉದ್ಘಾಟನೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಉದ್ಘಾಟನೆ ಗೊಂಡಿತು. ಕಾರ್ಯಕ್ರಮದಲ್ಲಿ ಅಭಯ್ ಭಕ್ರೆ, BEE ಡೈರೆಕ್ಟ್ ಜನರಲ್, ಟಿ.ಡಿ. ರಾಜೇಗೌಡ,ಶಾಸಕರು ಶೃಂಗೇರಿ, ರಫೆಲೋ ಮೊರ್ರಾಜ್ಜೊ, ಸಿಇಒ MIR ಗ್ರೂಪ್, GIANDO medico milano, Consulate general Italy, ಬೆಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೋಕುಲದಾಸ್ ನಾಯಕ್, ಪ್ರೊ. ಬಿ.ರವಿ, ಡೈರೆಕ್ಟರ್, NITK ಸೂರ್ಯನಾರಾಯಣ್ , ಸಿಇಒ MSEZ,ಮತ್ತಿತರ ಗಣ್ಯರು ಉಪಸ್ಥಿತರಿದ್ದರು….

Read More

ದ್ವಿ ಚಕ್ರ ಟ್ಯಾಕ್ಸಿ ವರ್ಸಸ್ ತ್ರಿಚಕ್ರ -ಟ್ಯಾಕ್ಸಿ ನಡುವೆ ಶುರುವಾಯ್ತು ಮಂಗಳೂರಿನಲ್ಲಿ ದೊಡ್ಡ ಹೋರಾಟ…. !

ಮಂಗಳೂರು:ಅನಧಿಕೃತ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ (SLP) ಸಲ್ಲಿಸುವಂತೆ ಒತ್ತಾಯಿಸಿ ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಒಕ್ಕೂಟಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸ್ನೇಹಜೀವಿ ಸಂತೋಷ್ ಕುಮಾರ್ ಮಾತನಾಡಿ , ಮೋಟಾರ್ ವಾಹನಗಳ ಕಾಯ್ದೆ 1988ರ ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಯಾವುದೇ ನೇರ ಪರವಾನಗಿ ಇಲ್ಲದಿದ್ದರೂ ಸಾರ್ವಜನಿಕ…

Read More

ಮಂಗಳೂರು ಮಹಾ ನಗರ ಪಾಲಿಕೆಯ ನಿರ್ದೇಶನಕ್ಕೆ ಡೋಂಟ್ ಕೇರ್….?!

ಮಂಗಳೂರು:ಸೀರೆ ಬೇಕೇ ಸೀರೆ ಎನ್ನುವ ಹಾಗೆ ಕಾಣ್ತಾ ಇದೆ ಬುದ್ಧಿವಂತರ ಜಿಲ್ಲೆಯ ಈ ಒಂದು ಸ್ಪಾಟ್. ಹೌದು ಅಷ್ಟಕ್ಕೂ ಈ ಇಂಟ್ರೆಸ್ಟಿಂಗ್ ವಿಷಯ ವಸ್ತು ಅಡಗಿರುವುದು ರೈಲ್ವೇ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಎನ್ನುವುದು ಕಟು ಸತ್ಯ . ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಗ್ರಂಥಾಲದ ಸನಿಹ ಇರುವ ಮಾರ್ಗದ ಬದಿಯು ಈ ಮೊದಲು ಹೆಚ್ಚಾಗಿ ಕಸದ ರಾಶಿಯಿಂದಲೇ ತುಂಬಿರುತ್ತಿತ್ತು . ಇದು ಆ ಮಾರ್ಗವಾಗಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕಿರಿ ಕಿರಿಯನ್ನು ದುರ್ವಾಸನೆಯಿಂದ ಮೂಗು ಮುಚ್ಚಿ ಹೋಗುವಂತೆ…

Read More

ಕಾಸರಗೋಡು ಗೋ-ಕುಟೀರಕ್ಕೆ ಬಿ.ಜೆ.ಪಿ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ. ಬೇಟಿ

ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರಕ್ಕೆ ಭಾರತೀಯ ಜನತಾ ಪಾರ್ಟಿಯ ಕೇರಳ ಕೋಯಿಕೋಡ್ ಉತ್ತರ ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ ಕೆ.ಬೇಟಿ ನೀಡಿ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಇವರೊಂದಿಗೆ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯ ಕುರಿತು ಚರ್ಚಿಸಿದರು. ಕಾಸರಗೋಡು ಗೋ – ಕುಟೀರದ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವ ಉದ್ಯೋಗ ಕೇಂದ್ರ ವಿದ್ಯಾರ್ಥಿಗಳು,ಯುವಜನರು, ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ,…

Read More

ನೇತ್ರಾವತಿ ಸೇತುವೆಗೆ ಮಿನಿ ಟೆಂಪೋ ಡಿಕ್ಕಿ – ಫೆನ್ಸಿಂಗ್‌ಗೆ ಭಾರಿ ಹಾನಿ

ಮಂಗಳೂರಿನ ನೇತ್ರಾವತಿ ಸೇತುವೆ ಆವರಣ ಗೋಡೆಗೆ ಮಿನಿ ಟೆಂಪೋವೊಂದು ಬುಧವಾರ ಮುಂಜಾನೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಟೆಂಪೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ಈ ಘಟನೆಯಿಂದ ಸೇತುವೆಗೆ ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಗೆ ತೀವ್ರ ಹಾನಿಯಾಗಿದೆ. ಐದು ವರುಷಗಳ ಹಿಂದೆ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು ಹಲವರು ಆತ್ಮಹತ್ಯೆಗೈದಿದ್ದ ಘಟನೆ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಇದೇ ನೇತ್ರಾವತಿ ಸೇತುವೆಯಿಂದ ನದಿಗೆ ಜಿಗಿದು…

Read More

ಅಂತರ್ ರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ.ಒಟ್ಟು 38 ಲಕ್ಷದ 42,000/-ಮೌಲ್ಯದ ಮಾದಕ ವಸ್ತು, ವಾಹನ, ಮಾರಕಾಸ್ತ್ರ ಹಾಗೂ ಸೊತ್ತುಗಳ ವಶ.

ದ.ಕ ಜಿಲ್ಲಾ ಪೊಲೀಸ್‍ ಆಧೀಕ್ಷಕರ ವಿಶೇಷ ತಂಡದಿಂದ ಮಾದಕ ವಸ್ತು ಮಾರಾಟಗಾರರ ಜಾಲದ ಪ್ರಮುಖ ಆರೋಪಿಗಳಾದ 1) ಮುಹಮ್ಮದ್‌ ಅಜ್ಮಲ್‌ ಸಿ @ ಅಜ್ಜು ಪ್ರಾಯ: 30 ವರ್ಷ ತಂದೆ: ದಿ| ಅಶ್ರಪ್‌ ವಾಸ: ಚೆನ್ನಿಲೊಟ್ಟು, ವೇಲಂ, ವಡಕರ್‌ ತಾಲೂಕು, ಕೋಝಿಕೋಡ್, ಕೇರಳ 2) ಇಸ್ಮಾಯಿಲ್‌ ಪ್ರಾಯ: 28 ವರ್ಷ ತಂದೆ: ಇಬ್ರಾಹಿಂ ವಾಸ: ಮುಂಡಿಕುಂಞಲ್‌, ಚರುಕಾಟುರ್‌ ಗ್ರಾಮ ಮಾನಂದವಾಡಿ, ವಯನಾಡ್‌ ಜಿಲ್ಲೆ ಕೇರಳ 3) ಸಂಶೀರ್‌ ಪ್ರಾಯ: 27 ವರ್ಷ ತಂದೆ: ಬಶೀರ್‌ ವಾಸ: ಕಹ್ನೀರಾ,…

Read More

ಕುಡ್ಲಕ್ಕೆ ಕಾಲಿಟ್ಟ “ಕೆಸಿಸಿಎಲ್ ಕುಡ್ಲಾ” ಹೆಸರಿನ ಕೇರಳ ವಿಷನ್ ಬ್ರಾಡ್‌ ಬ್ಯಾಂಡ್ ಅಧಿಕೃತವಾಗಿ ನಾಳೆ ಉದ್ಘಾಟನೆ …. !

ಮಂಗಳೂರು:ದೇಶದ ಅಂತರ್ಜಾಲ ವಿತರಣಾ ಕ್ಷೇತ್ರದಲ್ಲಿ ಆರನೇ ಅತಿ ದೊಡ್ಡ ಸೇವಾ ಪೂರೈಕೆದಾರರಲ್ಲೊಂದಾದ ಕೇರಳ ವಿಷನ್ ಬ್ರಾಡ್‌ಬ್ಯಾಂಡ್ ಇದೀಗ ಮಂಗಳೂರಿನಲ್ಲಿ ತನ್ನ ಸೇವೆಯನ್ನು “ಕೆಸಿಸಿಎಲ್ ಕುಡ್ಲಾ” ಎಂಬ ಹೆಸರಿನಲ್ಲಿ ವಿಸ್ತರಿಸಲು ಹೊರಟಿದ್ದು ನಗರದ ಬೆಂದೂರ್ವೆಲ್ ನಲ್ಲಿರುವ ಕಚೇರಿಯಲ್ಲಿ ಇದರ ಅಧಿಕೃತ ಉದ್ಘಾಟನೆಯನ್ನು ನಾಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ನೆರವೇರಿಸಲಿದ್ದಾರೆ ಎಂದು ಕೆಸಿಸಿಎಲ್ ಕುಡ್ಲಾ ಇದರ ಅಧ್ಯಕ್ಷರಾದ ಶುಕ್ಕೂರ್ ಕೋಳಿಕ್ಕರ ತಿಳಿಸಿದರು . ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಸಿಸಿಎಲ್ ಕುಡ್ಲಾ…

Read More

ಫೆಬ್ರವರಿ 24 ರಂದು ‘ಸಹಕಾರ ರತ್ನ’ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟು ಹಬ್ಬದ ಸಂಭ್ರಮ…! 77 ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ…..!

ಮಂಗಳೂರು:ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನುನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಾಮಾಣಿಕ ರೀತಿಯ ಸಾರ್ಥಕತೆಯನ್ನು ಕಂಡ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿರುವ ‘ಸಹಕಾರ ರತ್ನ’ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರ 77ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ನಡೆಸಲು ಅವಿಭಜಿತ…

Read More
error: Content is protected !!