ರಾಷ್ಟ್ರಗೀತೆಗೆ ಅಪಮಾನ ಆರೋಪ; ಮಾಜಿ ಸ್ಪೀಕರ್ ಕಾಗೇರಿ ವಿರುದ್ಧ ಗುಡುಗಿದ ಮಾಜಿ ಸಚಿವ ಬಿ ರಮಾನಾಥ ರೈ .
ಮಂಗಳೂರು: ನಾವು ಪ್ರಾಥಮಿಕ ಶಿಕ್ಷಣ ಪಡೆದಾಗಿನಿಂದಲೂ ಜನಗಣಮನ ರಾಷ್ಟ್ರ,ಗಾನವಾಗಿ ಪ್ರತಿಯೊಬ್ಬರೂ ಗೌರವಿಸುವ ವಿಚಾರ ತಿಳಿದಿದೆ. ದೊಡ್ಡ ವ್ಯಕ್ತಿಯಾಗಿದ್ದರೂ ವಂದೇ ಮಾತರಂ ಮತ್ತು ಜನಗಣಮನಕ್ಕೆ ಬೇಧಭಾವವನ್ನು ಹುಟ್ಟಿಸುವಂತಹ ಹೇಳಿಕೆ ನೀಡುವುದು ತಪ್ಪು. ರವೀಂದ್ರನಾಥ ಠಾಗೋರರು ಜನಗಣಮನ ಗೀತೆ ರಚಿಸಿ ಬಿಡುಗಡೆ ಮಾಡಿದ್ದು 1911 ಡಿಸೆಂಬರ್ 11ಕ್ಕೆ. ಇದನ್ನು ಬ್ರಿಟಿಷರ ಸ್ವಾಗತ ಗೀತೆ ಅಂತಾರಲ್ಲ.ಇದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಷ್ಟ್ರಗೀತೆಗೆ ಮಾಡಿದ ಅಪಮಾನವೇ ಸರಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಗುಡುಗಿದರು . ಅವರು…