ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ,25 ಕ್ಕೂ ಮಿಕ್ಕ ಮನೆಗಳು ಜಲಾವೃತ,ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶ

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ ಮಳೆಯಿಂದ ಸುಮಾರು 25 ಕ್ಕೂ ಮಿಕ್ಕ ಮನೆಗಳು ಜಲಾವೃತಗೊಂಡು ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶಗೊಂಡಿತ್ತು.ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಕರ ಅನಾಸ್ತವೇ ಇದಕ್ಕೆ ಮೂಲ ಕಾರಣವಾಗಿತ್ತು.ಮಂಜೇಶ್ವರ ರೈಲ್ವೇ ಹಳಿಯ ಪರಿಸರದಲ್ಲಿರುವ ಸುರುಮ ತೋಡಿನಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ತುಂಬಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಒಂದು ಗ್ರಾಮವೇ ನೆರೆ ಹಾನಿಗೊಳಗಾಗಿತ್ತು. ಇಷ್ಟೆಲ್ಲಾ ಆಗಿ ಕೂಡಾ ಪಂಚಾಯತು ಅಧಿಕಾರಸ್ಥರು…

Read More

ಯಶಸ್ವಿ ಕಲಾವಿದೆರ್ ಮಂಜೇಶ್ವರದ “ಮಂಗಳಾಗಿರಿ” ನಾಟಕಕ್ಕೆ ಶುಭ ಮುಹೂರ್ತ, ಪೋಸ್ಟ‌ರ್ ಬಿಡುಗಡೆ

ಯಶಸ್ವಿ ಕಲಾವಿದೆರ್ ಮಂಜೇಶ್ವರ ತಂಡದ 10 ನೇ ವರ್ಷದ ನಾಟಕ “ಮಂಗಳಾಗಿರಿ” ಯ ಶುಭ ಮುಹೂರ್ತ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು. ಕ್ಷೇತ್ರದ ಅರ್ಚಕರಾದ ರಾಮಚಂದ್ರ ಐತಾಳ್ ಬಡಾಜೆಯವರು ಕ್ಷೇತ್ರ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನೂತನ ನಾಟಕದ ಪೋಸ್ಟರ್ ನ್ನು ನಾಟಕದ ನಿರ್ದೇಶಕರಾದ ಎಂ.ಎಸ್ ರವಿ ವರ್ಕಾಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಯಶಸ್ವಿ ಕಲಾವಿದರು” ಸಂಸ್ಥೆಯು ಹಲವು ವರ್ಷಗಳಿಂದ…

Read More

ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮಕ್ಕೆ -ವಿಶೇಷ ಅನ್ನದಾನದ ವ್ಯವಸ್ಥೆ

ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮಕ್ಕೆ ಡಾ. ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರ ವತಿಯಿಂದ ಇಂದು ರಾತ್ರಿ ವಿಶೇಷ ಅನ್ನದಾನದ ವ್ಯವಸ್ಥೆಯನ್ನು ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಲಾಯಿತು. ಆಶ್ರಮ ವಾಸಿಗಳು ಈ ಸಂತಸದ ಸಂಭ್ರಮವನ್ನು ನಮ್ಮೊಂದಿಗೆ ಹರ್ಷೋಲ್ಲಾಸದಿಂದ ಹಂಚಿಕೊಂಡರು.

Read More

ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) “ಮಂಗಲ್ಪಾಡಿ ಶಾಖೆ”ಸಹಾಯ ಹಸ್ತ

ಮಂಗಲ್ಪಾಡಿ ಶಾಖೆಯ ಮೊದಲ ಯೋಜನೆಯಾದ “ಬೆಳಕು” (ಬದುಕಿಗೊಂದು ಭರವಸೆಯ ಬೆಳಕು) ಎಂಬ ಸಮಾಜ ಕಾರ್ಯದ ಉದ್ದೇಶದಲ್ಲಿ ಸಂಕಷ್ಟದಲ್ಲಿರುವ ಆಶಕ್ತ ಕುಲಾಲ ಕುಟುಂಬಕ್ಕಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆ ಆದಿತ್ಯವಾರ ಗೌರಧ್ಯಕ್ಷರಾದ ಶ್ರೀ ವಾಸು ಕುಲಾಲ್ ಬೊಲ್ಲಾರ್ ಉಪಸ್ಥಿತಿಯಲ್ಲಿ, ಸದಸ್ಯರ ಜತೆ, ಹಿರಿಯ ವ್ಯಕ್ತಿಗಳ ಸಮ್ಮುಖದಲ್ಲಿ ಚಾಲನೆಗೊಂಡು ಮೊದಲ ಸಹಾಯರ್ಥವಾಗಿ ಕೊಂಡೆವೂರು ದಿ /ತಿಮ್ಮಪ್ಪ ಮೂಲ್ಯ ಜಯನಗರ(ಮನೆ),ಕೊಂಡೆವೂರು,ಉಪ್ಪಳ(ಅಂಚೆ), ಕಾಸರಗೋಡು. ಇವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು.ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಅಗಲಿದ ಕುಟುಂಬಕ್ಕೆ ನೊಂದ ಕುಟುಂಬಕ್ಕೊಂದು ಆಸರೆಯ ಬೆಳಕು…

Read More

ಪುತ್ತೂರಿನಲ್ಲಿ 7 ತಿಂಗಳ ಗರ್ಭಿಣಿ ನೇಣಿಗೆ ಶರಣು

ಪುತ್ತೂರು: ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಪುತ್ತೂರು ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ.ಚಿಕ್ಕಪುತ್ತೂರಿನ ನಿವಾಸಿ, ಚಿಂತನ್ ಎಂಬವರ ಪತ್ನಿ ರೇಷ್ಮಾ (28) ಆತ್ಮಹತ್ಯೆ ಮಾಡಿಕೊಂಡವರು. ರೇಷ್ಮಾ ಏಳು ತಿಂಗಳ ಗರ್ಭಿಣಿಯಾಗಿದ್ದರು. ಸುರತ್ಕಲ್ ಮೂಲದ ರೇಷ್ಮಾರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ….

Read More

ನಿರಂತರ ಮಳೆ ಮಂಜೇಶ್ವರದ ಬೀಚ್ ರಸ್ತೆಯಲ್ಲಿರುವ 12 ಮನೆ ಜಲಾವೃತಾ

ಮಂಜೇಶ್ವರ ∙ ಕಳೆದ ಕೆಲವು ದಿವಸಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಪ್ರದೇಶದಲ್ಲಿ ವ್ಯಾಪಕವಾದ ನೀರು ನಿಂತು ಪ್ರದೇಶದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರವಾಹದ ಪರಿಣಾಮವಾಗಿ ಅಲ್ಲಿನ 12 ಮನೆಗಳಿಗೆ ಮಳೆನೀರು ನುಗ್ಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಮಳೆನೀರು ಹರಿದು ಹೋಗಬೇಕಾದ ಚರಂಡಿಗಳನ್ನು ಮುಚ್ಚಿರುವುದು ಹಾಗೂ ಸಮೀಪದ ತೋಡಿನ ಕಟ್ಟ ಒಡೆದಿರುವುದು ಈ ರೀತಿಯಾಗಿ ನೀರು ಶೇಖರಣೆಯಾಗಿ ಪ್ರವಾಹದ ಭೀತಿಗೆ ಕಾರಣವಾಗಿರುವುದಾಗಿ ತಿಳಿದು ಬಂದಿದೆ. ಸೂಕ್ತವಾದ ನಿಕಾಶಿ…

Read More

ಮಂಜೇಶ್ವರದ ಕೊಡ್ಲಮೊಗರುವಿನಲ್ಲಿ ಮನೆಯೊಳಗೆ ಯುವಕ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಕೊಡ್ಲಮೊಗರಿನಲ್ಲಿ ಮನೆಯೊಳಗೆ ಯುವಕನೊಬ್ಬ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಡ್ಲಮೊಗರು ಪಳ್ಳದ ಪಡ್ಪು ಬೀಡು ನಿವಾಸಿ ಶೇಖರ ಬೆಲ್ಚಾಡ ಎಂಬವರ ಪುತ್ರ ಭರತ್ (24) ಸಾವನ್ನಪ್ಪಿದ ದುರ್ದೈವಿ.ಬಾನುವಾರ ಬೆಳಿಗ್ಗೆ ಮನೆಯವರು ದೇವಸ್ಥಾನಕ್ಕೆ ತೆರಳಿ ಮರಳಿ ಬರುತ್ತಿರುವ ಮಧ್ಯೆ ಭರತ್ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಸ್ಥಳೀಯರು ಸಾವಿನಲ್ಲಿ ನಿಗೂಢತೆ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಶವದ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ…

Read More

ಕುಂಬಳೆ ಕೊಯ್ಪಾಡಿ ಸಮುದ್ರ ತೀರದಲ್ಲಿ ತೆರೆಗಳೊಂದಿಗೆ ತೇಲಿ ಬಂದ ಬ್ಯಾರಲ್ , ಸಮುದ್ರದಲ್ಲಿ ಹೊತ್ತಿ ಉರಿದ ಹಡಗಿನಿಂದ ಬಿದ್ದ ಕಂಟೈನರ್ ನಲ್ಲಿದ್ದ ಏಸಿಡ್ ಎಂಬ ಶಂಕೆ

ಕುಂಬಳೆ: ಇಲ್ಲಿನ ಕೊಯ್ಪಾಡಿ ಸಮುದ್ರ ತೀರದಲ್ಲಿ ತೆರೆಗಳೊಂದಿಗೆ ತೇಲಿ ಬಂದ ಬ್ಯಾರಲ್ ಗಳು ದಡಕ್ಕೆ ಅಪ್ಪಳಿಸಿದೆ. ಭಾನೂವಾರ ಸಂಜೆ 3 30ರ ವೇಳೆ ಸಮುದ್ರ ದಂಡೆಯಲ್ಲಿ ಬ್ಯಾರಲ್ ತೇಲುವುದನ್ನು ಕಂಡು ಶಂಕಿತನಾದ ಮತ್ಸ್ಯ ಕಾರ್ಮಿಕನೋರ್ವ ಕೂಡಲೇ ಕೋಸ್ಟಲ್ ಪೋಲೀಸರಿಗೆ ಮಾಹಿತಿ ನೀಡಿದನು. ಇದರಂತೆ ಪೋಲೀಸರು ಆಗಮಿಸಿ ಬ್ಯಾರಲ್ ದಡಕ್ಕೆ ತಂದು ಸಂರಕ್ಷಿಸಿದ್ದಾರೆ. ಇತ್ತೀಚೆಗೆ ಕೇರಳ ಕರಾವಳಿ ತೀರದಲ್ಲಿ ಹೊತ್ತಿ ಉರಿದ ಹಡಗಿನಿಂದ ಸಮುದ್ರ ಪಾಲಾದ ಕಂಟೈನರಿನಿಂದ ಬಿದ್ದ ಬ್ಯಾರಲ್ ಇದಾಗಿರಬೇಕೆನ್ನಲಾಗಿದೆ. ಬ್ಯಾರಲ್ ನಲ್ಲಿ ನೈಟ್ರಿಕ್ ಏಸಿಡ್ ಇರುವುದೆಂದು…

Read More

ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟನ್ ನೌಕಾಪಡೆಯಯುದ್ಧ ವಿಮಾನ

ಕೇರಳ : ಹಾರಾಡುತ್ತಿರುವಾಗಲೇ ಇಂಧನ ಖಾಲಿಯಾದ ಹಿನ್ನೆಲೆ, ಬ್ರಿಟನ್‌ನ ನೌಕಾಪಡೆಯ ಯುದ್ಧ ವಿಮಾನ ಎಫ್-35 ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ತುರ್ತು ಭೂಸ್ಪರ್ಶ ಕಂಡಿದೆ. ಶನಿವಾರ ರಾತ್ರಿ 9.30 ರ ಸುಮಾರಿನಲ್ಲಿ ಭಾರತದ ಮೇಲೆ ಹಾರುತ್ತಿರುವಾಗ ಇಂಧನ ಖಾಲಿಯಾದ ಬಗ್ಗೆ ಪೈಲಟ್ ಮಾಹಿತಿ ರವಾನಿಸಿದ್ದಾನೆ. ತಕ್ಷಣವೇ ಬ್ರಿಟನ್ ಅಧಿಕಾರಿಗಳು ಭಾರತೀಯ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ವಿಮಾನ ಇಳಿಯಲು ಅನುಮತಿ ಕೋರಿದ್ದಾರೆ. ಇದಕ್ಕೆ ಒಪ್ಪಿದ ಭಾರತದ ಅಧಿಕಾರಿಗಳು ಕೇರಳದ ತಿರುವನಂತಪುರಂ ನಿಲ್ದಾಣದಲ್ಲಿ ಇಳಿಸಲು ಅನುವು…

Read More

ಕನ್ನಡ ಭಾಷೆ ಬಳಕೆಯಾಗುತ್ತಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಕೊಡಲಿ

ಮಂಜೇಶ್ವರ : ಕನ್ನಡ ಭಾಷೆ ಬಳಕೆಯಾಗುತ್ತಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಕೊಡಲಿ ಏಟು ಬಿದ್ದಿದೆ. ಒಂದಲ್ಲ ಒಂದು ವಿಷಯದಲ್ಲಿ ಕನ್ನಡದ ಅವಗಣನೆಯಾಗುತ್ತಿರುವ ಕಾಸರಗೋಡಿನ ಶಾಲೆಗಳಲ್ಲೂ ಮಲಯಾಳೀಕರಣ ಮಾಡಲು ಮುಂದಾದಾಗ ಕನ್ನಡಿಗರ ಒಕ್ಕೊರಳಿನ ಪ್ರತಿಭಟನೆಯಿಂದ ಅದು ಸಾಕಾರಗೊಂಡಿರಲಿಲ್ಲ. ಇದೀಗ ಕಾಸರಗೋಡು ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ನಾಮಫಲಕಗಳಲ್ಲಿ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ರಾರಾಜಿಸುತಿದ್ದರೂ ಕನ್ನಡ ಭಾಷೆಯನ್ನು ಇಲ್ಲೂ ಅವಗಣಿಸಲಾಗಿದೆ . ಇದು ಕನ್ನಡ ಭಾಷಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರೀಯ ಭಾಷಾ ಅಲ್ಪಸಂಖ್ಯಾತ ನೀತಿಗೆ ಅನುಗುಣವಾಗಿ…

Read More
error: Content is protected !!