ಮತದಾನದ ದಿನವೇ ಬೀದಿಗೆ ಬಂದ ಕಾಂಗ್ರೆಸ್ ಅಸಮಾಧಾನದ ಜ್ವಾಲೆ.ಪ್ರಚಾರಕ್ಕೆ ಆಮಂತ್ರಣ ನೀಡಿಲ್ಲ , ಕನಿಷ್ಠ ಪಕ್ಷ ಮಿಸ್ ಕಾಲ್ ನೀಡಿಲ್ಲ ತರೂರ್ ಬೇಸರ

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಳಂಬೂರ್ ವಿಧಾನಸಭಾ ಉಪಚುನಾವಣೆಯ ಮತದಾನವು ಮಂದಗತಿಯಲ್ಲಿ ಸಾಗುತ್ತಿದ್ದು ಈ ಮಧ್ಯೆ ಕಾಂಗ್ರೆಸ್ ಪಕ್ಷದ ಅಂತ:ಕಲಹ ಬೀದಿಗೆ ಬಂದಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಆರ್ಯಾಡನ್ ಸೌಕತ್ ಪರ ಕಾಂಗ್ರೆಸ್ ಸಂಸದ ಶಶಿತರೂರ್ ಪ್ರಚಾರಕ್ಕೆ ಬಂದಿಲ್ಲ ಎಂಬ ಆರೋಪ ಅವರ ಮೇಲಿದೆ. ಈ ಬಗ್ಗೆ ಸ್ವಪಕ್ಷಯ ರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತರೂರ್ ಪ್ರಚಾರಕ್ಕೆ ಬರುವಂತೆ ತನಗೆ ಆಮಂತ್ರಣ ನೀಡಿಲ್ಲವೆಂದು ಪಕ್ಷದ ನಾಯಕರು ಕನಿಷ್ಠಪಕ್ಷ ಒಂದು ಮಿಸ್ ಕಾಲ್ ನೀಡಿಲ್ಲವೆಂದು ಹೇಳಿದ್ದಾರೆ….

Read More

ಅವ್ಯವಸ್ಥೆಯ ಆಗರವಾದ ಬೇಕೂರು ರುದ್ರಭೂಮಿ ಈ ಶೋಚನೀಯಾವಸ್ಥೆಗೆ ಶಾಶ್ವತ ಪರಿಹಾರ ಎಂದು ?

ಉಪ್ಪಳ : ಮಂಗಲ್ಪಾಡಿ ಗ್ರಾಮ ಪಂಚಾಯತಿನ ಎಂಟನೇ ವಾರ್ಡಿನಲ್ಲಿರುವ ಬೇಕೂರು ರುದ್ರಭೂಮಿ ಅವ್ಯವಸ್ಥೆಯ ಆಗರವಾಗಿದ್ದು ,ತೀರಾ ಶೋಚನೀಯವಾದ ಸ್ಥಿತಿಯಲ್ಲಿದೆ.ಪರಿಶಿಷ್ಟ ಜಾತಿಯ ವಿಭಾಗಕ್ಕೆ ಮೀಸಲಾದ ಈ ಸ್ಮಶಾನ ಇದೀಗ ಸಂಪೂರ್ಣ ಕಾಡು, ಪೊದೆಗಳಿಂದ ಆವೃತವಾಗಿದೆ. ಪರಿಣಾಮ ಶವದ ಅಂತ್ಯ ಸಂಸ್ಕಾರ ಮಾಡಲು ಹರ ಸಾಹಸ ಪಡಬೇಕಾಗುತ್ತದೆ.ಸಂಸ್ಕಾರ ಮಾಡುವ ಶೆಡ್ ತೀವ್ರ ರೂಪದಲ್ಲಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಇಲ್ಲಿ ಶವ ಸಂಸ್ಕಾರ ಮಾಡಲು ಬಹಳ ಕಷ್ಟವಾಗುತ್ತದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ . 2008 ರಲ್ಲಿ ಅಲ್ಪ ಮೊತ್ತದ ಅನುದಾನದಲ್ಲಿ ಇಲ್ಲಿ…

Read More

ಉಪ್ಪಳ ಬಳಿಯ ದಡ್ಡಂಗಡಿ ಕಂಚಿಲ ನಿವಾಸಿ, (35) ರ ಹರೆಯದ ಇಲೆಕ್ಟಿಶಿಯನ್ ಶರಣ್ ರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆ

ಮಂಜೇಶ್ವರ: ಉಪ್ಪಳ ಬಳಿಯ ದಡ್ಡಂಗಡಿ ಕಂಚಿಲ ನಿವಾಸಿ, ಟೈಲ‌ರ್ ದೂಮಣ್ಣ ಶೆಟ್ಟಿಗಾರ್ ರ ಪುತ್ರ ಇಲೆಕ್ಟಿಶಿಯನ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಶರಣ್ ರಾಜ್ (35) ಇಂದು ಬೆಳಗ್ಗೆ ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಶರಣ್ ರಾಜ್ ರನ್ನು ಕುಣಿಕೆಯಿಂದ ಕೆಳಗಿಳಿಸಿ ಉಪ್ಪಳದ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಶರಣ್ ರಾಜ್ ಮೃತಪಟ್ಟಿದ್ದಾನೆ. ಇದೀಗ ಮೃತದೇಹವನ್ನು ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ನೇಣು ಬಿಗಿಯಲು…

Read More

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ,ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ

ಮಂಜೇಶ್ವರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು, ಇದೀಗ ಕುಟುಂಬ ಸ್ಥಳಾಂತರಗೊಂಡಿದ್ದಾರೆ. ಇದೇ ವೇಳೆ ತೋಟದಲ್ಲಿರುವ ಬಾವಿ, ಮೋಟಾರ್ ಪಂಪು ಸಹಿತ ಅಡಿಕೆ,ತೆಂಗು,…

Read More

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ: ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ, ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ. ಮಂಜೇಶ್ವರ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು,…

Read More

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ವರ್ಗ,ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿಕೆ

ಉಡುಪಿ: ಜಿಲ್ಲೆಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರನ್ನು ವರ್ಗ ಮಾಡಿ ರಾಜ್ಯ ಸರಕಾರ ಇದೀಗ ಆದೇಶ ಹೊರಡಿಸಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ. ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.ಮೇಡಂ ಸ್ವರೂಪ ಟಿ.ಕೆ ರವರು ಈ ಹಿಂದೆ ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಗವರ್ನೆನ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಾ. ವಿದ್ಯಾ ಕುಮಾರಿಗೆ ಯಾವುದೇ ಹುದ್ದೆಯನ್ನು ಸೂಚಿಸಿಲ್ಲ ಎಂದು ತಿಳಿದು ಬಂದಿದೆ.

Read More

ದಕ್ಷಿಣಕನ್ನಡದ ಜಿಲ್ಲಾಧಿಕಾರಿ, ಮಕ್ಕಳ ‘ರಜೆ ಕೊಡುವ ಡಿಸಿ’ ಮುಲೈ ಮುಗಿಲನ್ ವರ್ಗಾವಣೆ, ನೂತನ ಡಿಸಿ ದರ್ಶನ್!

ಮಂಗಳೂರು: ಕರಾವಳಿಯ ಪ್ರೀತಿಯ ಮಕ್ಕಳ ರಜೆ ಕೊಡುವ ಡಿಸಿಯ ವರ್ಗಾವಣೆಯಾಗಿದೆ. ರಾಜ್ಯದಲ್ಲಿ 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಅದರಲ್ಲಿ ಕಳೆದ 2 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಗಿಲನ್ ಅವರನ್ನು ಕೂಡಾ ದಿಢೀರ್ ಆಗಿ ವರ್ಗಾಯಿಸಿದೆ. ಅವರನ್ನು ಬೆಂಗಳೂರಿನ ನೋಂದಣಿ ಇಲಾಖೆಯ ಐಜಿ ಮತ್ತು ಸ್ಟಾಂಪ್ಸ್ ವಿಭಾಗದ ಕಮಿಷನ‌ರ್ ಆಗಿ ವರ್ಗಾಯಿಸಲಾಗಿದೆ. ರಾಜ್ಯದಲ್ಲಿ ಒಟ್ಟು 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ…

Read More

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ,25 ಕ್ಕೂ ಮಿಕ್ಕ ಮನೆಗಳು ಜಲಾವೃತ,ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶ

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ ಮಳೆಯಿಂದ ಸುಮಾರು 25 ಕ್ಕೂ ಮಿಕ್ಕ ಮನೆಗಳು ಜಲಾವೃತಗೊಂಡು ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶಗೊಂಡಿತ್ತು.ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಕರ ಅನಾಸ್ತವೇ ಇದಕ್ಕೆ ಮೂಲ ಕಾರಣವಾಗಿತ್ತು.ಮಂಜೇಶ್ವರ ರೈಲ್ವೇ ಹಳಿಯ ಪರಿಸರದಲ್ಲಿರುವ ಸುರುಮ ತೋಡಿನಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ತುಂಬಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಒಂದು ಗ್ರಾಮವೇ ನೆರೆ ಹಾನಿಗೊಳಗಾಗಿತ್ತು. ಇಷ್ಟೆಲ್ಲಾ ಆಗಿ ಕೂಡಾ ಪಂಚಾಯತು ಅಧಿಕಾರಸ್ಥರು…

Read More

ಯಶಸ್ವಿ ಕಲಾವಿದೆರ್ ಮಂಜೇಶ್ವರದ “ಮಂಗಳಾಗಿರಿ” ನಾಟಕಕ್ಕೆ ಶುಭ ಮುಹೂರ್ತ, ಪೋಸ್ಟ‌ರ್ ಬಿಡುಗಡೆ

ಯಶಸ್ವಿ ಕಲಾವಿದೆರ್ ಮಂಜೇಶ್ವರ ತಂಡದ 10 ನೇ ವರ್ಷದ ನಾಟಕ “ಮಂಗಳಾಗಿರಿ” ಯ ಶುಭ ಮುಹೂರ್ತ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು. ಕ್ಷೇತ್ರದ ಅರ್ಚಕರಾದ ರಾಮಚಂದ್ರ ಐತಾಳ್ ಬಡಾಜೆಯವರು ಕ್ಷೇತ್ರ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನೂತನ ನಾಟಕದ ಪೋಸ್ಟರ್ ನ್ನು ನಾಟಕದ ನಿರ್ದೇಶಕರಾದ ಎಂ.ಎಸ್ ರವಿ ವರ್ಕಾಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಯಶಸ್ವಿ ಕಲಾವಿದರು” ಸಂಸ್ಥೆಯು ಹಲವು ವರ್ಷಗಳಿಂದ…

Read More

ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮಕ್ಕೆ -ವಿಶೇಷ ಅನ್ನದಾನದ ವ್ಯವಸ್ಥೆ

ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮಕ್ಕೆ ಡಾ. ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರ ವತಿಯಿಂದ ಇಂದು ರಾತ್ರಿ ವಿಶೇಷ ಅನ್ನದಾನದ ವ್ಯವಸ್ಥೆಯನ್ನು ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಲಾಯಿತು. ಆಶ್ರಮ ವಾಸಿಗಳು ಈ ಸಂತಸದ ಸಂಭ್ರಮವನ್ನು ನಮ್ಮೊಂದಿಗೆ ಹರ್ಷೋಲ್ಲಾಸದಿಂದ ಹಂಚಿಕೊಂಡರು.

Read More
error: Content is protected !!