ವಿನಯವೇ ಯಶಸ್ಸಿನ ಅಡಿಪಾಯ”ಅಮ್ಮ* ಅಮ್ಮನ ದರ್ಶನಕ್ಕಾಗಿ ಬೋಳೂರಿಗೆ ಹರಿದು ಬಂದ ಸಾವಿರಾರು ಭಕ್ತರು
ಮಂಗಳೂರು: ವಿನಯವೇ ಯಶಸ್ಸಿನ ಅಡಿಪಾಯ ಮತ್ತು ವಿನಯವಿರುವೆಡೆಯಲ್ಲಿ ಮಾತ್ರ ಜೀವನದ ನಿಜವಾದ ಸಾಫಲ್ಯ ಇದೆ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ನುಡಿದರು.ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಂಗಳೂರು ಬ್ರಹ್ಮಸ್ಥಾನ ಮಹೋತ್ಸವ’ದ ಎರಡನೇ ದಿನದಂದು ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, “ಜೀವನವು ನದಿಯ ಹರಿವಿನಂತಿದ್ದು, ತನ್ನದೇ ಆದ ಏರಿಳಿತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಅನುಭವಕ್ಕೂ ಒಂದು ಉದ್ದೇಶವಿರುತ್ತದೆ ಎಂಬುದನ್ನು ಒಪ್ಪಿಕೊಂಡು, ಶರಣಾಗತಿ ಭಾವನೆಯೊಂದಿಗೆ ನಾವೆಲ್ಲರೂ ಮುನ್ನಡೆಯಬೇಕು” ಎಂದು ಕರೆ ನೀಡಿದರು. “ಮಣ್ಣಿನ ಅಡಿಯಲ್ಲಿ ಹೂತ…