ನವರಾತ್ರಿಗೆ ಉಡುಗೆರೆಕೊಟ್ಟ ನಂದಿನಿ ಸಂಸ್ಥೆ ….. !

ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22 ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಸೇರಿದಂತೆ ನಂದಿನಿ ವಿವಿಧ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್) ನಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಉತ್ಪನ್ನಗಳ ಜಿಎಸ್‌ಟಿ ಕಡಿಮೆ ಮಾಡಲು ಮುಂದಾಗಿದೆ.ಹಾಲಿನ ಉತ್ಪನ್ನಗಳ ಜಿಎಸ್ಟಿ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಸೆ. 22ರಿಂದ ನಂದಿನಿ ಉತ್ಪನ್ನಗಳ ದರ ಶೇಕಡ…

Read More

ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ನವೀಕರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದಿಂದ ಆರ್ಥಿಕ ನೆರವು.

ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆಯವರು ಆರ್ಥಿಕ ನೆರವನ್ನು ನೀಡಿದ್ದಾರೆ. ಇಂದು ಬೆಳಗ್ಗೆ ಕ್ಷೇತ್ರ ಪರಿಸರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ಹಾಗು ಜನಜಾಗ್ರತಿಯ ಪ್ರಮುಖರು ರೂ.5 ಲಕ್ಷ ಡಿ.ಡಿ ಯನ್ನು ಕ್ಷೇತ್ರ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತೋಡಿ ಮಾತನಾಡಿ ನಿವೇದನೆಗಾಗಿ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ಹೋದಾಗ ಬಹಳ…

Read More

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 ಸೆಪ್ಟೆಂಬರ್ 22 ಕ್ಕೆ ಚಾಲನೆ.

ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ “ಶ್ರೀ ದುರ್ಗಾಂಬ ವೇದಿಕೆ” ಯಲ್ಲಿ 2925 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರ ತನಕ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಜರುಗಲಿದೆ. ಕನ್ನಡ ಭವನದ ಸಂಸ್ಥಾಪಕ ಶ್ರೀ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಳೆದ 12 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಸಂಭ್ರಮದ ಈ ಬಾರಿಯ ಉದ್ಘಾಟನೆ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಪಾಂಗೋಡು ಕ್ಷೇತ್ರ ಸಭಾಂಗಣದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಡಾl ಕೆ.ಎನ್….

Read More

ಬಂಟರು ಮತ್ತು ನಾಡವರು ಪ್ರತ್ಯೇಕ ಜಾತಿಗಳಲ್ಲ ಒಂದೇ; ಮಾಲಾಡಿ ಅಜಿತ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಿದ್ದು, ಈ ಸಮೀಕ್ಷೆಯಲ್ಲಿ ಒಂದೇ ಜಾತಿಯಾಗಿರುವ ಬಂಟರುಯಾನೆ ನಾಡವರನ್ನು ಬಂಟರು ಮತ್ತು ನಾಡವರೆಂದು ಪ್ರತ್ಯೇಕ ಜಾತಿಗಳೆಂದು ಗುರುತ್ತಿಸಲಾಗಿದೆ , ನಾವು ಇದನ್ನು ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಸ್ವೀಕರ್ ಮತ್ತು ಸರಕಾರದದ ಗಮನಕ್ಕೆ ತಂದಿದ್ದೇವೆ . ನಾಡವರು ಮತ್ತು ಬಂಟರು ಅನಾದಿ ಕಾಲದಿಂದಲೂ ಒಂದೇ ಆಗಿರುವ ಕಾರಣ ಪ್ರತ್ಯೇಕವಾಗಿ ಗಣತಿಯಲ್ಲಿ ಜಾತಿಯನ್ನು ನಮೂದು ಮಾಡಬಾರದೆಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ…

Read More

ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟ

ಮಂಗಳೂರು:ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟವು ಸೆಪ್ಟೆಂಬರ್ 25 ರಿಂದ 30 ರ ತನಕ ಮಂಗಳೂರಿನ ಶಾರದಾ ವಿದ್ಯಾಲಯದ ಭುವರಹ ಅಟ್ರಿಯಂ ನಲ್ಲಿ ನಡೆಯಲಿದೆ ಎಂದು ಆರ್.ಸಿ.ಸಿ ಸಂಸ್ಥೆಯ ಸಲಹೆಗಾರರು ಹಾಗೂ ಸಂಘಟಕರೂ ಆಗಿರುವ ಡಾ ಶುಭಾನಂದ್ ರಾವ್ ತಿಳಿಸಿದರು. ಅವರು ಪತ್ರಿಕಾಭವನದಲ್ಲಿ ನಡೆದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಸಿ ಸಿ ಯನ್ನು 2012 ರಲ್ಲಿ ಐ ಎಂ ಶರಣ್ ರಾವ್ ಮತ್ತು ಡ ಬ್ಲ್ಯೂ…

Read More

ಸೆಪ್ಟೆಂಬರ್ -23 ರಂದು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ 2025

ಮಂಗಳೂರು: ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಳೆದ ಹಲವು ವರ್ಷಗಳಿಂದ ತಲಪಾಡಿ ಪರಿಸರದಲ್ಲಿ ಸಾರ್ವಜನಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ತಿಂಗಳಿಗೆ ಕನಿಷ್ಠ ಎರಡರಂತೆ ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು ಇದೇ ತಿಂಗಳ ತಾರೀಕು 23 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ೨೦೨೫ ನ್ನು ಕಾಲೇಜಿನಲ್ಲಿ ಆಯೋಜಿಸಿದೆ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಬಿ ಪುರಾಣಿಕ್ ತಿಳಿಸಿದರು. ಪತ್ರಿಕಾ…

Read More

ಸೆಪ್ಟೆಂಬರ್ ೨೧ ರಂದು ಸಂಘನಿಕೇತನ ಪ್ರತಾಪ ನಗರದಲ್ಲಿ-“ಯೋಗ ಏಕಾಹ 2025”

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನವು ಪ್ರತಾಪನಗರದ ಕೇಶವ ಸ್ಮೃತಿ ಸಂವರ್ಧನ ಸಮಿತಿಯೊಂದಿಗೆ ಜಂಟಿಯಾಗಿ ಒಂದು ದಿನದ ಯೋಗಾಸನ ಪ್ರದರ್ಶನದ ಯೋಗೋತ್ಸವ “ಯೋಗ ಏಕಾಹ 2025” ಕಾರ್ಯಕ್ರಮವನ್ನು ಸೆಪ್ಟೆಂಬರ್ ೨೧ ರಂದು ಸಂಘನಿಕೇತನ ಪ್ರತಾಪ ನಗರದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಧನಂಜಯ ಕೆ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಪ್ರತಿಷ್ಠಿತ ಯೋಗಾಭ್ಯಾಸವನ್ನು ಕಲಿಸುವ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿದೆ . ಪ್ರತೀ…

Read More

ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆ

ಮಂಜೇಶ್ವರ: ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಗಮನ ಸೆಳೆಯುತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ಇತ್ತೀಚೆಗೆ “ಟ್ಯಾಲೆಂಟ್ ಹಂಟ್ ಡೇ” ಉತ್ಸವ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ದಿನಾಚರಣೆಯ ಉದ್ದೇಶ, ವಿದ್ಯಾರ್ಥಿಗಳಲ್ಲಿರುವ ಅಡಗಿದ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸುವುದಾಗಿತ್ತು. ಈ ಸಂಭ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ಹಾಡು, ಚಿತ್ರಕಲೆ, ನಾಟಕ, ಭಾಷಣ, ಕರಾಟೆ ಹಾಗೂ ವಿವಿಧ ಕಲಾತ್ಮಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ವೈಯಕ್ತಿಕ ಪ್ರತಿಭೆಯನ್ನು ಮೆರೆದರು. ಪ್ರತಿ ತರಗತಿಯಿಂದ ವಿದ್ಯಾರ್ಥಿಗಳು ಭಾಗಿ ಆಗಿದ್ದು,…

Read More

ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆ

ಮಂಜೇಶ್ವರ: ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆಯಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ಮಂಜೇಶ್ವರ ಹೊಸಂಗಡಿ ವಾಮಂಜೂರು ಅಬಕಾರಿ ತಪಾಸಣಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬಳಿಕ ಟ್ಯಾಂಕರ್ ಲಾರಿಯಿಂದ ಪಾತ್ರೆಗೆ ಸ್ಪಿರಿಟ್ ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಪ್ರದೇಶದಿಂದ ಕೋಝಿಕ್ಕೋಡ್ ಗೆ ತೆರಳುತಿದ್ದ ಟ್ಯಾಂಕರ್ ಲಾರಿಯಲ್ಲಿ ಈ ರೀತಿಯ ಸೋರಿಕೆ ಕಂಡು ಬಂದಿದೆ.ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸರು ಆಗಮಿಸಿ ಸುರಕ್ಷತೆಯಲ್ಲಿ ಬೇರೊಂದು ಟ್ಯಾಂಕರಿಗೆ ಸ್ಪಿರಿಟ್ ವರ್ಗಾಯಿಸಿದ್ದಾರೆ.

Read More

ವರ್ಕಾಡಿ ಕಜೆಪದವಿನಲ್ಲಿ ಭೂಮಿ ಬಿರುಕು ಉಂಟಾದ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತ್ತಿನ ಕೆಜೆಪದವಿಯಲ್ಲಿ ಭಯಾನಕವಾಗಿ ಉಂಟಾಗುತ್ತಿರುವ ಭೂಮಿ ಬಿರುಕುಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿಶೇಷ ತಂಡ ಸ್ಥಳಕ್ಕೆ ಭೇಟಿ ನೀಡಿತು. 2019ರಿಂದ ಆರಂಭವಾದ ಈ ಸಮಸ್ಯೆ, ಕಳೆದ ವರ್ಷ (2024) ಅತ್ಯಂತ ಗಂಭೀರ ಸ್ವರೂಪವನ್ನು ಪಡೆದಿದ್ದು, ಈ ವರ್ಷ ಭೂಭಾಗವು ಹೆಚ್ಚು ತಳಮಟ್ಟಕ್ಕೆ ಇಳಿಯುತ್ತಿದ್ದಂತೆ, ಆ ಪ್ರದೇಶದ ಮೂವರು ಕುಟುಂಬಗಳನ್ನು ತುರ್ತು ಅವಸ್ಥೆಯಲ್ಲಿ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಭೂಮಿ ಬಿರುಕುಗಳಿಂದಾಗಿ ಕೃಷಿಭೂಮಿಗಳು ನಾಶವಾಗಿದ್ದು, ಸ್ಥಳೀಯರ ಪ್ರಮುಖ ಆರ್ಥಿಕ ಆಧಾರವಾದ ಕೃಷಿಯೇ ದುರ್ಬಲಗೊಂಡಿದೆ. ಪ್ರದೇಶದಲ್ಲಿನ ಮನೆಗಳು ಕೂಡ…

Read More
error: Content is protected !!