ಸಚಿವ ಶಿವನ್ ಕುಟ್ಟಿ ಮಹಿಳಾವಿರೋಧಿ, ಭಾರತಾಂಬೆಯನ್ನು ಕೇಸರಿ ಧ್ವಜ ಹಿಡಿದ ಮಹಿಳೆ ಎಂಬ ಹೇಳಿಕೆ ಸಂಕುಚಿತ ಚಿಂತನೆ : ಎಮ್. ಎಲ್ ಅಶ್ವಿನಿ
ಕಾಸರಗೋಡು : ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಭಾರತಮಾತೆಯ ಭಾವಚಿತ್ರಇರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಶಿಕ್ಷಣ ಸಚಿವ ಶಿವನ ಕುಟ್ಟಿ ಅವರ ನಡೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ತೀವ್ರವಾಗಿ ಖಂಡಿಸಿದ್ದಾರೆ. ಕಮ್ಯುನಿಸ್ಟ್ ಆಶಯಕ್ಕೆ ಭಾರತೀಯ ಮಾನ ಬಿಂದುಗಳನ್ನು ಗೌರವಿಸಲಾಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದು ಕಮ್ಯೂನಿಸ್ಟರ ಸಂಕುಚಿತ ಚಿಂತನೆಯ ಪ್ರತೀಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತಾಂಬೆಯ ಚಿತ್ರವನ್ನು ಕೇಸರಿ ಧ್ವಜ ಹಿಡಿದ ವನಿತೆ ಎಂದು…
