ಮಂಗಳೂರು, ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317ಡಿ ಹಾಗೂ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ (ಎಲ್ಸಿಐಎಫ್) ಸಹಯೋಗದಲ್ಲಿ ಸಮಾಜದ ಬಡ ಮಕ್ಕಳ ಶಿಕ್ಷಣ ಮತ್ತು ಆಹಾರದ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ರೂಪಿಸಲಾದ “ಫುಡ್ ಟ್ರಕ್” ಅನ್ನು ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಅವರು ಅಕ್ಷಯ ಪಾತ್ರ ಫೌಂಡೇಶನ್ಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ನ ಉಪಾಧ್ಯಕ್ಷರಾದ ಸನಂದನ ದಾಸ್ ಪ್ರಭು ಹಾಗೂ ನಕುಲ್ ಕೃಷ್ಣ ದಾಸ್ ಪ್ರಭು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ, ದ್ವಿತೀಯ ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ, ಗವರ್ನರ್ ಸಂಯೋಜಕಿ ಜ್ಯೋತಿ ಎಸ್. ಶೆಟ್ಟಿ, ಕ್ಯಾಬಿನೆಟ್ ಸಂಯೋಜಕಿ ನ್ಯಾನ್ಸಿ ಮಸ್ಕರೇನ್ಹಸ್, ಎಲ್ಸಿಐಎಫ್ ಸಂಯೋಜಕ ಲೋಕೇಶ್ ಶೆಟ್ಟಿ, ಎಲ್ಸಿಐಎಫ್ ಗ್ರಾಂಟ್ ಸಂಯೋಜಕ ಅನಿಲ್ ಕುಮಾರ್, ಮಾಜಿ ಜಿಲ್ಲಾ ರಾಜ್ಯಪಾಲರಾದ ಕಿಶೋರ್ ಕುಮಾರ್, ಕೆ.ಸಿ. ಪ್ರಭು, ಡಾ. ಗೀತ್ ಪ್ರಕಾಶ್ ಹಾಗೂ ಕುಂಬಳೆ ನರಸಿಂಹ ಪ್ರಭು ಸೇರಿದಂತೆ ಜಿಲ್ಲೆಯ ಲಯನ್ಸ್ ನಾಯಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿಎಸ್ಟಿ ಸಂಯೋಜಕ ರಮಾನಂದ ನುಜಿ ಪಾಡಿ ನಿರ್ವಹಿಸಿದರು.