ಮಂಗಳೂರು: ಅನಧಿಕೃತ ವಾಗಿ ಇದ್ದ ಚುರುಮುರಿ ಸ್ಟಾಲ್, ಕಬ್ಬಿನ ಜ್ಯೂಸ್ ಅಂಗಡಿ, ಪಾನಿಪುರಿ ಅಂಗಡಿಗಳನ್ನ ಮಹಾ ನಗರ ಪಾಲಿಕೆಯ ಅಧಿಕಾರಿಗಳು ತೆರವು ಗೊಳಿಸಿದರು. ಈ ಅಂಗಡಿಗಳಲ್ಲಿ ಸ್ವಚ್ಚತೆ ಪಾಲನೆಯಾಗುತ್ತಿರಲಿಲ್ಲ. ತ್ಯಾಜ್ಯ ವಸ್ತುಗಳ ರಾಶಿಯೇ ಉಳಿದು ಪಾರ್ಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿತ್ತು ಎಂದು ದೂರುಗಳು ಬಂದಿದ್ದವು.
ಮಾತ್ರವಲ್ಲದೆ ಇಲ್ಲಿ ಅಂಗಡಿಗಳನ್ನು ಏಲಂ ಮೂಲಕ ಪಡೆದುಕೊಂಡವರು ತಮ್ಮ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.