ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ 57ನೇ ಏಕಹಾ ಭಜನೆ

ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ವತಿಯಿಂದ 57ನೇ ಏಕಹಾ ಭಜನೆ ಕಾರ್ಯಕ್ರಮ ಭಕ್ತಿಭಾವದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಕ್ಷೇತ್ರದ ಅಧ್ಯಕ್ಷರಾದ ಮನೋಹರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತ್ಯಾಪಣ್ಣ ಶೆಟ್ಟಿ, ರವಿ ಮುಡಿಮಾರ್, ನಾಗೇಶ್ ಬಲ್ಲೂರ್, ವಿನೋದ್ ಪಾವೂರು, ಶಿವಕುಮಾರ್ ಬಳ್ಳೂರ್, ಶಿವ ಕೊಪ್ಪಳ, ಗಣೇಶ್ ಪಾವೂರು, ಮೋನಪ್ಪ ಶೆಟ್ಟಿ ಮುಟ್ಲ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಹಲವಾರು ಭಕ್ತರು ಭಾಗವಹಿಸಿದರು.

ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಬಾಲಗೋಕುಲ ಪುಟಾಣಿ ಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಮಕ್ಕಳ ಭಜನೆಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!