ಪೈವಳಿಕೆ ಅಂಚೆ ಕಚೇರಿ ಎದುರು ಸಿಪಿಐಎಂ ಧರಣಿ: ಪೆಟ್ರೋಲಿಯಂ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಮಂಜೇಶ್ವರ: ಜನಜೀವನವನ್ನು ದುಸ್ತರಗೊಳಿಸುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಭಾಗವಾಗಿ, ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿಯ ವತಿಯಿಂದ ಪೈವಳಿಕೆ ಅಂಚೆ ಕಚೇರಿ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಕೆ. ಪಿ. ಸತೀಶ್ಚಂದ್ರನ್ ಉದ್ಘಾಟಿಸಿ ಮಾತನಾಡಿದರು. ಬಳಿಕ ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. ಜಯಾನಂದ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐಎಂ ಏರಿಯಾ ಸಮಿತಿ ಸದಸ್ಯ ರಝಾಕ್ ಚಿಪ್ಪಾರ್ ವಹಿಸಿದ್ದರು. ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿ. ಜಿ. ಮ್ಯಾಥ್ಯು ಸ್ವಾಗತಿಸಿದರು.

ಧರಣಿಯಲ್ಲಿ ಸಿಪಿಐಎಂ ಏರಿಯಾ ಸಮಿತಿ ಸದಸ್ಯರಾದ ಬೇಬಿ ಶೆಟ್ಟಿ, ವಿನಯ್ ಕುಮಾರ್, ಸಾದಿಕ್ ಚೆರುಗೋಳಿ, ಭಾರತಿ ಎಸ್., ಕಮಲಾಕ್ಷ ಡಿ., ಪ್ರಶಾಂತ್ ಕನಿಲ ಸೇರಿದಂತೆ ಹಲವರು ಮಾತನಾಡಿದರು.ಪ್ರತಿಭಟನಾಕಾರರು ಪೆಟ್ರೋಲಿಯಂ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!