ಧರ್ಮ ಜಾಗೃತಿ ಭಜನಾ ಯಾತ್ರೆ”ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ಪ್ರಖಂಡ

ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ಪ್ರಖಂಡ ಇದರ ವತಿಯಿಂದ ರಾಮಾಯಣ ಮಾಸಾಚರಣೆಯ ಅಂಗವಾಗಿ ಕಾಸರಗೋಡು ನಗರದಲ್ಲಿ ಒಂದು ತಿಂಗಳ ಪರ್ಯಂತ ಮನೆ ಮನೆ ಭಜನೆ, ಶ್ರೀ ರಾಮನ ಸ್ಮರಣೆ ಮಾಡುತ್ತಾ ಧರ್ಮ ಜಾಗೃತಿಯನ್ನು ಮೂಡಿಸುತ್ತಾ…. ಭಜನಾಸಕ್ತರಿಂದ ರಾಮಾಯಣ ಸಂಕೀರ್ತನಾ ಸತ್ಸಂಗ ನಡೆಯಿತು.

ಕೊನೆಯಲ್ಲಿ 17.8.26 ರಂದು ಸಂಜೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀ ಸೂರ್ಯನಾರಾಣ ಪುರೋಹಿತರು ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು ಶ್ರೀ ರಾಮ ದೇವರಿಗೆ ಮಂಳಾರತಿ ಹಾಗೂ ಶ್ರೀ ವೆಂಕಟರಮಣ ದೇವರ ಪೂಜೆಯೊಂದಿಗೆ ಸಂಪನ್ನಗೊಂಡಿತು.

ಭಜನೆ ಸಂಕೀರ್ತನಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ, ಕಾರ್ಯದರ್ಶಿ ಕಿಶೋರ್ ಎಸ್.ವಿ.ಟಿ, ವಸಂತ್ ಕೆರೆಮನೆ, ಪುರಂದರ ಶೆಟ್ಟಿ, ನಾರಾಯಣ ಆಚಾರ್ಯ, ಕಾರ್ತಿಕ್, ಸಂತೋಷ್ ಭಂಡಾರಿ, ಸತ್ಯಸಾಯಿ, ಕಿಶೋರ್ ಬೀರಂತಬೈಲ್, ಶಂಕರ ನಾರಾಯಣ ಹೊಳ್ಳ, ಶಿವಶಂಕರ ಅಡಿಗ, ನವೀನ್ ಅಶೋಕ ನಗರ, ರವಿ ಕೇಸರಿ, ಪ್ರಮೋದ್, ಶೇಷಾದ್ರಿ ಹೊಳ್ಳ, ಶ್ರೀನಿವಾಸ ಹೊಳ್ಳ, ನಾಮದೇವ ಪೈ, ಸಾಯಿನಾಥ್ ರಾವ್, ಶ್ರೀನಿವಾಸ ಮಲ್ಯ, ಸವಿತಾ, ವಿಜಯ ಶೆಟ್ಟಿ, ಅರುಣ, ಶ್ರೀಲತಾ ಟೀಚರ್, ಪ್ರೇಮಾ, ಶ್ರೀ ದೇವಿ, ಸೌಮ್ಯ, ಶ್ರೀವಳ್ಳಿ, ಸರಸ್ವತಿ, ಪ್ರಭಾ ಶೆಣೈ, ನಳಿನಿ, ಶಾರದಾ ರಾವ್, ಅಪೂರ್ವ, ಸವಿತಾ ಆಳ್ವ, ರೂಪಕಲಾ ಹೊಳ್ಳ, ಗೀತಾ, ರಮ್ಯ, ಅದಿತಿ ಅನನ್ಯ, ಅನುಶ್ರೀ, ಚಿಂತನ ಛಾಯಾಶ್ರೀ, ಶಾಲಿಕ, ಪ್ರಣಾಮ್ಯ ಭಜನೆಯಲ್ಲಿ ಭಾಗವಹಿಸಿದರು. ಹಾರ್ಮೋನಿಯಂ ನಲ್ಲಿ ತುಕರಾಮ ಆಚಾರ್ಯ ಕೆರೆಮನೆ ತಬಲಾದಲ್ಲಿ ಕೇತನ್, ಮನ್ವಿತ್, ತೃಷನ್ ಸಹಕರಿಸಿದರು.

ಮನೆ ಮನೆ ಭಜನೆ ಯಲ್ಲಿ ಭಾಗಿಯಾದ ಭಜಕರಿಗೂ ಭಜನೆಗೆ ವ್ಯವಸ್ಥೆ ಮಾಡಿದ ಪ್ರತೀ ಮನೆಯವರಿಗೂ ಸಹಕಾರ ನೀಡಿದ ಎಲ್ಲರಿಗೂ ಸಮಿತಿ ಗೌರವಾಧ್ಯಕ್ಷ ವೆಂಕಟ್ರಮಣ ಹೊಳ್ಳರು ಕೃತಜ್ಞತೆಯನ್ನು ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!